newsics.com
ಕನ್ನಡದ ಬಿಗ್ ಬಾಸ್ ಸೀಸನ್ 11 ಐಶಾರಾಮಿ ರೆಸಾರ್ಟ್ ಆಗಿ ಬದಲಾಗಿದೆ. ಹೌದು, ಬಿಗ್ಬಾಸ್ ಮನೆಯಲ್ಲಿ ಎರಡು ತಂಡವಾಗಿ ವಿಂಗಡಣೆಯಾಗಿದೆ.ಬಿಗ್ಬಾಸ್ ಮನೆಯಷ್ಟೇ ಅಲ್ಲದೇ ಸ್ಪರ್ಧಿಗಳು ಕೂಡ ಚೇಂಜ್ ಆಗಿದ್ದಾರೆ. ಒಂದು ತಂಡ ಐಶಾರಾಮಿ ರೆಸಾರ್ಟ್ನಲ್ಲಿ ಕೆಲಸಗಾರರಾಗಿದ್ದರೆ, ಮತ್ತೊಂದು ತಂಡ ಅತಿಥಿಗಳಾಗಿದ್ದಾರೆ.
ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ, ಮಂಜು, ಗೌತಮಿ, ಹನುಮಂತ ಒಂದು ಟೀಮ್ ನಲ್ಲಿದ್ದಾರೆ. ಮತ್ತೊಂದು ಟೀಮ್ ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ.
https://www.instagram.com/reel/DD9MQ3UNFpp/?utm_source=ig_web_button_share_sheet
ತ್ರಿವಿಕ್ರಮ್ ತಂಡ ರೆಸಾರ್ಟ್ ಕೆಲಸಗಾರಾದ್ರೆ.
ಮಂಜು ಟೀಮ್ ರೆಸಾರ್ಟ್ ಗೆ ಅತಿಥಿಗಳಾಗಿ ಬಂದಿದ್ದಾರೆ.
ರೆಸಾರ್ಟ್ಗೆ ಅತಿಥಿಯಾಗಿ ಬಂದ ಮಂಜಣ್ಣ ಉಗ್ರ ಅವತಾರಾ ತಾಳಿದ್ದಾರೆ. ರೆಸಾರ್ಟ್ಗೆ ಬಂದ ಅತಿಥಿಗಳನ್ನು ತ್ರಿವಿಕ್ರಮ್ ತಂಡ ನೋಡಿಕೊಳ್ಳಬೇಕು. ಅತಿಥಿಗಳು ಹೇಳಿದ ಕೆಲಸವನ್ನು ಚಾಚು ತಪ್ಪದೇ ಪಾಲಿಸಬೇಕಾಗಿತ್ತು.
ಇದೇ ವೇಳೆ ಮ್ಯಾನೇಜರ್ ಎಲ್ಲ ಕತ್ತೆ ಮೇಯಿಸೋಕೆ ಬಂದಿದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಮೋಕ್ಷಿತಾ ಮೇಲೆ ಮಂಜು, ತಲೆ ತುಂಬಾ ಮಣ್ಣು ತುಂಬಿಕೊಂಡ್ರೆ ಏನೂ ಮಾಡೋದಕ್ಕೆ ಆಗೋದಿಲ್ಲ ಅಂತ ಹೇಳಿದ್ದಾರೆ. ಇನ್ನೂ ಚೈತ್ರಾ ಕುಂದಾಪುರ ಸಿಕ್ಕಿದ್ದೇ ಜಾನ್ಸ್ ಅಂತ ರಜತ್ ಗೆ ಬ್ರೆಡ್ ಜಾಮ್ ಹಚ್ಚುವಂತೆ ಹೇಳಿದ್ದಾರೆ. ಆಗ ಅದೇ ಬ್ರೆಡ್ ಜಾಮ್ ನಿಂದ ರಜತ್ ಮುಖಕ್ಕೆ ತಟ್ಟಿದ್ದಾರೆ ಚೈತ್ರಾ. ಇಷ್ಟಾದ್ರೂ ರಜತ್ ಕೋಪಗೊಳ್ಳದೇ ಕೂಲ್ ಆಗಿ ಟಾಸ್ಕ್ ಆಡಿದ್ದಾರೆ.