newsics.com
ನವದೆಹಲಿ: ರಾಜಸ್ಥಾನದ ದೌಸಾದಲ್ಲಿ ಬೋರ್ವೆಲ್ಗೆ ಬಿದ್ದಿದ್ದ ಐದು ವರ್ಷದ ಬಾಲಕ ಆರ್ಯನ್ ಕೊನೆಗೂ ಬದುಕಲಿಲ್ಲ.
ಬಾಲಕನನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲು 57 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ ವ್ಯರ್ಥವಾಗಿ ಕೊನೆಗೊಂಡಿತು.
ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲಿಖಾಡ್ ಗ್ರಾಮದ ಹೊಲವೊಂದರಲ್ಲಿ ಆಟವಾಡುತ್ತಿದ್ದಾಗ ಆರ್ಯನ್ 150 ಅಡಿ ಆಳದ ಬೋರ್ವೆಲ್ಗೆ ಬಿದ್ದಿದ್ದು, ಒಂದು ಗಂಟೆಯ ನಂತರ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು.
ಮಗುವನ್ನು ರಕ್ಷಿಸಲು ಸಮಾನಾಂತರ ಸುರಂಗವನ್ನು ಅಗೆಯಲು ಜೆಸಿಬಿಗಳು, ಡ್ರಿಲ್ಲಿಂಗ್ ಯಂತ್ರಗಳು ಮತ್ತು ಪೈಲಿಂಗ್ ರಿಗ್ ಅನ್ನು ನಿಯೋಜಿಸಲಾಯಿತು. ಪೈಪ್ ಮೂಲಕ ಆಮ್ಲಜನಕವನ್ನು ಸರಬರಾಜು ಮಾಡಲಾಯಿತು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಅವನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿತ್ತು.
ಆದರೆ, ಭೂಗತ ಹಬೆಯ ಕಾರಣದಿಂದ ಕ್ಯಾಮರಾದಲ್ಲಿ ಬಾಲಕನ ಚಲನವಲನಗಳನ್ನು ಸೆರೆಹಿಡಿಯುವಲ್ಲಿ ತೊಂದರೆ ಉಂಟಾಯಿತು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ತಕ್ಷಣ ಕೃತಕ ಜೀವ ಬೆಂಬಲ ವ್ಯವಸ್ಥೆಯನ್ನು ಹೊಂದಿದ ಆಂಬ್ಯುಲೆನ್ಸ್ನಲ್ಲಿ ಆರ್ಯನ್ನನ್ನು ಹಸಿರು ಕಾರಿಡಾರ್ ರಚಿಸಿ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ.
ಭಿಕ್ಷೆ ಬೇಡಿಯೇ ಏಳೂವರೆ ಕೋಟಿ ನಗದು, ಒಂದೂವರೆ ಕೋಟಿ ಆಸ್ತಿ ಗಳಿಸಿದ ಈತ ವಿಶ್ವದ ಅತಿ ಶ್ರೀಮಂತ ಭಿಕ್ಷುಕ!
Supreme Court ಗಂಡ, ಅತ್ತೆ- ಮಾವಂದಿರಿಗೆ ಕಿರುಕುಳ: ವಿವಾಹಿತೆಯರಿಂದ ಕಾನೂನು ದುರ್ಬಳಕೆ- ಸುಪ್ರೀಂ ಕಳವಳ
Basava Jayamruthunjaya swamiji ಡಿ. 12ಕ್ಕೆ ರಾಜ್ಯಾದ್ಯಂತ ರಸ್ತೆ ತಡೆ ಹೋರಾಟಕ್ಕೆ ಕರೆ ನೀಡಿದ ಪಂಚಮಸಾಲಿ ಶ್ರೀ
Beauty Tips ತ್ವಚೆಯ ಸೌಂದರ್ಯ ಹೆಚ್ಚಿಸಲು ಫಾಲೋ ಮಾಡಿ ಈ ಬ್ಯೂಟಿ ಟಿಪ್ಸ್
Relationship Tips: ಹೆಂಡತಿ ತವರಿಗೆ ಹೋದ್ರೆ ಸಾಕು ಗಂಡಂದಿರು ಈ ಕೆಲಸ ಮಿಸ್ ಮಾಡ್ದೆ ಮಾಡ್ತಾರಂತೆ