Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Space Travel | ಬೆವರು, ಮೂತ್ರದಿಂದ ಸಂಸ್ಕರಿಸಿದ ನೀರಲ್ಲಿ ತಯಾರಿಸಿದ ಸೂಪ್ ಸೇವಿಸುತ್ತಿರುವ ಸುನೀತಾ ವಿಲಿಯಮ್ಸ್!
ದೇಶಪ್ರಮುಖವಿದೇಶ

Space Travel | ಬೆವರು, ಮೂತ್ರದಿಂದ ಸಂಸ್ಕರಿಸಿದ ನೀರಲ್ಲಿ ತಯಾರಿಸಿದ ಸೂಪ್ ಸೇವಿಸುತ್ತಿರುವ ಸುನೀತಾ ವಿಲಿಯಮ್ಸ್!

Share
2 Min Read
SHARE

newsics.com

ವಾಷಿಂಗ್ಟನ್: 254 ಮೈಲಿ ಎತ್ತರದಲ್ಲಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ನಾಸಾ ಗಗನಯಾತ್ರಿಗಳಾದ 61 ವರ್ಷದ ಬಚ್‌ ವಿಲ್ಮೋರ್‌ ಹಾಗೂ 59 ವರ್ಷದ ಸುನೀತಾ ವಿಲಿಯಮ್ಸ್‌ಗೆ ಜೀವ ಉಳಿಸಿಕೊಳ್ಳುವುದೇ ಸವಾಲಾಗಿದೆ.

ಅವರ ಸ್ಥಿತಿ ಎಲ್ಲಿಯವರೆಗೆ ಹೋಗಿದೆ ಎಂದರೆ, ತಮ್ಮ ಮೂತ್ರ ಹಾಗೂ ಬೆವರನ್ನು ಸಂಸ್ಕರಣೆ ಮಾಡಿ ಅದರಿಂದ ನೀರನ್ನು ತೆಗೆದುಕೊಳ್ಳಲಾಗುತ್ತಿದೆ. ಅದೇ ನೀರಿನಿಂದ ಮಾಡಿದ ಸೂಪ್‌ಗಳನ್ನು ಇಬ್ಬರೂ ಸೇವಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಕಳೆದ ಜೂನ್‌ನಲ್ಲಿ ಕೇವಲ 8 ದಿನಗಳ ಬಾಹ್ಯಾಕಾಶ ಯಾನಕ್ಕಾಗಿ ಐಎಸ್‌ಎಸ್‌ಗೆ ತೆರಳಿದ್ದ ಸುನೀತಾ ವಿಲಿಯಮ್ಸ್‌ ಈಗ ಬಾಹ್ಯಾಕಾಶದಲ್ಲಿ ಉಳಿದು ಆರು ತಿಂಗಳಾಗಿದೆ. ಅವರು ಬಾಹ್ಯಾಕಾಶಕ್ಕೆ ಹೋಗಿದ್ದ ಬೋಯಿಂಗ್‌ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಲೀಕ್‌ ಹಾಗೂ ಥ್ರಸ್ಟರ್‌ ಸಮಸ್ಯೆ ಎದುರಾಗಿದ್ದ ಕಾರಣ, ಈ ನೌಕೆಯ ಮೂಲಕ ಗಗನಯಾತ್ರಿಗಳು ಭೂಮಿಗೆ ಬರುವುದು ಅಪಾಯ ಎಂದು ನಾಸಾ ಹೇಳಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಬೋಯಿಂಗ್‌ ಸ್ಟಾರ್‌ಲೈನರ್‌ ಖಾಲಿ ನೌಕೆ ಭೂಮಿಗೆ ವಾಪಸಾಗಿತ್ತು.

ಆರಂಭದಲ್ಲಿ ಸುನೀತಾ ವಿಲಿಯಮ್ಸ್‌ ಹಾಗೂ ಬಚ್‌ ವಿಲ್ಮೋರ್‌ಗೆ ತಾಜಾ ಹಣ್ಣುಗಳು, ರೋಸ್ಟ್‌ ಆಗಿರುವ ಚಿಕನ್‌, ಪಿಜ್ಜಾಗಳು ತಿನ್ನಲು ಸಿಗುತ್ತಿದ್ದವು. ಈಗ ಅವರ ಆಹಾರವನ್ನು ನಾಸಾ ಕಡಿಮೆ ಮಾಡಿದೆ. ಅವರಿಗೆ ಹಾಲಿನ ಪೌಡರ್‌, ಡೀಹೈಡ್ರೇಟ್‌ ಮಾಡಲಾದ ಕ್ಯಾಸರೋಲ್ಸ್‌, ಫ್ರೀಜ್‌ ಮಾಡಿ ಡ್ರೈ ಮಾಡಲಾಗಿರುವ ಸೂಪ್‌ಗಳನ್ನು ನೀಡಲಾಗುತ್ತಿದೆ. ಈ ಸೂಪ್‌ಗಳನ್ನು ಇವರ ಮೂತ್ರ ಹಾಗೂ ಬೆವರಿನಿಂದ ಸಂಸ್ಕರಿಸಿ ಬಂದ ನೀರಿನಿಂದಲೇ ತಯಾರಿಸಲಾಗುತ್ತಿದೆ.

ಐಎಸ್‌ಎಸ್‌ನಲ್ಲಿ ಅತ್ಯಾಧುನಿಕ ಫಿಲ್ಟ್ರೇಷನ್‌ ಸಿಸ್ಟಮ್‌ ಹೇಗಿದೆಯೆಂದರೆ, ಒಂದು ತೊಟ್ಟು ದ್ರವ ಕೂಡ ವೇಸ್ಟ್‌ ಆಗಲು ಬಿಡೋದಿಲ್ಲ. ಆದರೆ, ಅತ್ಯಂತ ಕಠಿಣ ಡಯಟ್‌ ಅಡ್ಜ್‌ಮೆಂಟ್‌ ಕಾರಣದಿಂದಾಗಿ ಸುನೀತಾ ವಿಲಿಯಮ್ಸ್‌ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ.

ಸ್ವತಃ ನಾಸಾ ಹೇಳಿರುವಂತೆ ಇಬ್ಬರೂ ಗಗನಯಾತ್ರಿಗಳ ಆರೋಗ್ಯವನ್ನು ಪ್ರತಿದಿನ ಮೇಲ್ವಿಚಾರಣೆ ಮಾಡಲಾಗುತ್ತದೆ. ಅವರು ತೆಗೆದುಕೊಳ್ಳುತ್ತಿರುವ ಆಹಾರದಲ್ಲಿ ಇರುವ ಪೌಷ್ಠಿಕಾಂಶಗಳ ಬಗ್ಗೆ ಗಮನ ನೀಡುವ ಮೂಲಕ ದಿನಕ್ಕೆ ಅಗತ್ಯವಿರುವಷ್ಟು ಕ್ಯಾಲೋರಿ ಪಡೆದುಕೊಳ್ಳುವಂತೆ ಮಾಡಿದ್ದಾರೆ.

ಇನ್ನು ತಮ್ಮ ತೂಕನಷ್ಟದ ಬಗ್ಗೆ ಮಾತನಾಡಿದ್ದ ಸುನೀತಾ ವಿಲಿಯಮ್ಸ್‌, ಇಲ್ಲಿನ ಮೈಕ್ರೋಗ್ರ್ಯಾವಿಟಿಯ ಕಾರಣದಿಂದಾಗಿ ಹೀಗಾಗಿದೆ ಎಂದಿದ್ದು, ನಾನು ಮೊದಲಿನಷ್ಟೇ ತೂಕವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಈ‌ ಮಧ್ಯೆ, ಬಾಹ್ಯಾಕಾಶದಿಂದ ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಪ್ರಯತ್ನವನ್ನು ಸ್ಪೇಸ್‌ಎಕ್ಸ್‌ ಡ್ರ್ಯಾಗನ್‌ ಗಗನನೌಕೆ ಮಾಡಲಿದೆ. 2025ರ ಫೆಬ್ರವರಿಯಲ್ಲಿ ಇವರು ಭೂಮಿಗೆ ವಾಪಸಾಗಲಿದ್ದು, ಇನ್ನೂ ಮೂರು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ವಾಸ ಮಾಡಬೇಕಿದೆ.

Health Tips | ಧೂಮಪಾನದಿಂದ ಕಣ್ಣಿಗೂ ಹಾನಿ: ಸ್ಮೋಕ್ ಝೋನ್‌ನಿಂದ ದೂರವಿರಿ, ಇಲ್ಲದಿದ್ದರೆ ನಿಮಗೂ ಅಪಾಯ

Big Boss Kannada 11 | ಅಚ್ಚರಿಯ ಎಲಿಮಿನೇಷನ್, ಬಿಗ್ ಬಾಸ್ ಮನೆಯಿಂದ ಹೊರಬಂದ ನಟ ಧರ್ಮ ಕೀರ್ತಿರಾಜ್

Seasonal Health Tips ಚಳಿಗಾಲದಲ್ಲಿ ಹೆಚ್ಚಿದ ಹೃದಯಾಘಾತ, ಪಾರ್ಶ್ವವಾಯು ಪ್ರಕರಣ: ಇದರಿಂದ ಪಾರಾಗಲು ಹೀಗೆ ಮಾಡಿ

TAGGED:Space travel Sunita Williams is eating soup made from water treated with sweat and urine!
Share This Article
Facebook Twitter Copy Link Print
Previous Article Health Tips | ಧೂಮಪಾನದಿಂದ ಕಣ್ಣಿಗೂ ಹಾನಿ: ಸ್ಮೋಕ್ ಝೋನ್‌ನಿಂದ ದೂರವಿರಿ, ಇಲ್ಲದಿದ್ದರೆ ನಿಮಗೂ ಅಪಾಯ
Next Article Mysterious Death | ಸ್ನಾನದ ಮನೆಯಲ್ಲಿ ಮಹಿಳೆಯ ಬೆತ್ತಲೆ ಶವ ಪತ್ತೆ, ನಿಗೂಢ ಸಾವಿಗೆ ಕಾರಣ ಏನು?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?