Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹೆಂಡತಿಯ ಲೈಂಗಿಕ ಆಟ ತಾಳಲಾರದೆ ಸುಸ್ತಾದ ಗಂಡ! ವಿಚ್ಛೇದನಕ್ಕೆ ಅಸ್ತು ಎಂದ ಹೈಕೋರ್ಟ್
ದೇಶಪ್ರಮುಖ

ಹೆಂಡತಿಯ ಲೈಂಗಿಕ ಆಟ ತಾಳಲಾರದೆ ಸುಸ್ತಾದ ಗಂಡ! ವಿಚ್ಛೇದನಕ್ಕೆ ಅಸ್ತು ಎಂದ ಹೈಕೋರ್ಟ್

Share
2 Min Read
SHARE

newsics.com

ವಿಚ್ಛೇದನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಂಜಾಬ್ ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮೊಬೈಲ್‍ನಲ್ಲಿ ಪೋರ್ನ್ ವಿಡಿಯೊ ನೋಡುವ ಚಟವಿರುವ ಮಹಿಳೆಯೊಬ್ಬಳು ಪತಿಯ ಬಳಿ ಪ್ರತಿ ರಾತ್ರಿ ತನ್ನೊಂದಿಗೆ ಮೂರು ಬಾರಿ 10ರಿಂದ 15 ನಿಮಿಷಗಳ ಕಾಲ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾಳಂತೆ. ಇದಕ್ಕೆ ಒಪ್ಪದ ಪತಿಯನ್ನು ನಪುಂಸಕ ಎಂದು ಹೀಯಾಳಿಸುತ್ತಾಳಂತೆ.

ಪತ್ನಿಯ ಕಾಟಕ್ಕೆ ಬೇಸತ್ತಿರುವ ಪತಿಯು ಪಂಜಾಬ್ ಹರಿಯಾಣ ಹೈಕೋರ್ಟ್‌ಗೆ ವಿಚ್ಛೇದನದ ಅರ್ಜಿ ಸಲ್ಲಿಸಿದ್ದಾನೆ.

ಪತ್ನಿ ತನ್ನ ಪತಿಯನ್ನು ಹಿಜ್ರಾ ಎಂದು ಕರೆದರೆ ಅದು ಮಾನಸಿಕ ಕ್ರೌರ್ಯ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ಜಸ್ಜಿತ್ ಸಿಂಗ್ ಬೇಡಿ ಅವರ ವಿಭಾಗೀಯ ಪೀಠ, ಪತ್ನಿ ಅರ್ಜಿಯನ್ನು ವಜಾ ಮಾಡಿ, ವಿಚ್ಛೇದನ ನೀಡಿ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ನ್ಯಾಯಪೀಠವು ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿದೆ. ಹಾಗೂ ಈಗ ಈ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೆಂಡತಿ ತನ್ನ ಗಂಡನನ್ನು ನಪುಂಸಕ ಎಂದು ಕರೆದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಮದುವೆ 2017ರಲ್ಲಿ ನಡೆದಿತ್ತು. ಪತ್ನಿಯ ವರ್ತನೆಗೆ ಬೇಸತ್ತ ಪತಿ ವಿಚ್ಛೇದನಕ್ಕೆ ಮುಂದಾಗಿದ್ದ. ಪತ್ನಿ ಮಧ್ಯರಾತ್ರಿಯವರೆಗೂ ಎಚ್ಚರವಿರ್ತಿದ್ದಳು. ಮಧ್ಯರಾತ್ರಿ ಆಹಾರ ಬೇಕೆಂದು ಅನಾರೋಗ್ಯಪೀಡಿತ ಅತ್ತೆಗೆ ತಾಕೀತು ಮಾಡುತ್ತಿದ್ದಳು ಎಂದು ಪತಿ ಹೇಳಿದ್ದಾನೆ. ಇಷ್ಟೇ ಅಲ್ಲ, ಪತ್ನಿಯ ಲೈಂಗಿಕ ಚಟದಿಂದಲೂ ಆತ ಬೇಸತ್ತಿದ್ದ. ತನ್ನ ಪತ್ನಿಗೆ ಪೋರ್ನ್ ನೋಡುವ ಚಟವಿದೆ. ಮೊಬೈಲ್ ಗೇಮ್‌ಗಳನ್ನು ಆಡುವ ಆಕೆ, ಲೈಂಗಿಕ ಕ್ರಿಯೆ ನಡೆಸುವಂತೆ ನನಗೆ ಒತ್ತಡ ಹೇರ್ತಾಳೆ. ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ಶಾರೀರಿಕ ಸಂಬಂಧ ನಡೆಸಬೇಕು. ಪ್ರತಿ ರಾತ್ರಿ ಮೂರು ಬಾರಿ ದೈಹಿಕ ಸಂಬಂಧ ಹೊಂದಲೇಬೇಕು ಎಂಬುದು ಆಕೆಯ ಒತ್ತಾಯ ಎಂದು ಪತಿ ಅರ್ಜಿಯಲ್ಲಿ ತಿಳಿಸಿದ್ದಾನೆ.

ದೈಹಿಕವಾಗಿ ಅಸ್ವಸ್ಥನಾಗಿದ್ದ ಪತಿಯನ್ನು ಪತ್ನಿ ಗೇಲಿ ಮಾಡುತ್ತಿದ್ದಳು. ಅಲ್ಲದೆ ಬೇರೊಬ್ಬನ ಜೊತೆ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಳು. ಆಕೆ ಬಯಸಿದಷ್ಟು ದೈಹಿಕ ಸುಖ ನೀಡಲು ಸಾಧ್ಯವಾಗದ ಪತಿಯನ್ನು ನಪುಂಸಕ ಎಂದು ಕರೆದಿದ್ದಳು ಎಂದು ಪತಿ ದೂರಿದ್ದಾನೆ.

ವಿಚಾರಣೆ ವೇಳೆ ಪತ್ನಿ ಕೂಡ ಪತಿ ವಿರುದ್ಧ ಒಂದಿಷ್ಟು ಆರೋಪ ಮಾಡಿದ್ದಾಳೆ. ಪತಿ ತನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಪತ್ನಿ ಹೇಳಿದ್ದಾರೆ. ಅತ್ತೆ, ಅಮಲು ಮಾತ್ರೆಗಳನ್ನು ನೀಡುತ್ತಿದ್ದಳು. ಪ್ರಜ್ಞೆ ತಪ್ಪಿದಾಗ ತಾಂತ್ರಿಕನನ್ನು ಕರೆಸಿ, ತಾಯತ ಹಾಕುತ್ತಿದ್ದರು. ಅವರು ಹೇಳಿದಂತೆ ಕೇಳ್ಬೇಕು ಎನ್ನುವ ಕಾರಣಕ್ಕೆ ಅಮಲಿನ ನೀರು ಕುಡಿಸುತ್ತಿದ್ದರು ಎಂದು ದೂರಿದ್ದಾಳೆ.

ವಿಚಾರಣೆ ನಡೆಸಿದ ಹೈಕೋರ್ಟ್, ಪತ್ನಿ ಮನವಿಯನ್ನು ತಿರಸ್ಕರಿಸಿ, ಕೌಟುಂಬಿಕ ನ್ಯಾಯಾಲಯ ನೀಡಿದ ವಿಚ್ಛೇದನವನ್ನು ಎತ್ತಿ ಹಿಡಿದಿದೆ. ಆರು ವರ್ಷಗಳಿಂದ ಬೇರೆ ವಾಸವಾಗಿದ್ದ ದಂಪತಿ ಮತ್ತೆ ಒಂದಾಗಲು ಸಾಧ್ಯವಿಲ್ಲ. ಇಬ್ಬರ ಮಧ್ಯೆ ಒಮ್ಮತವಿಲ್ಲ ಎಂದಿರುವ ಕೋರ್ಟ್, ವಿಚ್ಛೇದನ ನೀಡಿದೆ.

ಜುಲೈ 12 ರಂದು ಕೌಟುಂಬಿಕ ನ್ಯಾಯಾಲಯ ಪತಿ ಪರವಾಗಿಯೇ ವಿಚ್ಛೇದನದ ತೀರ್ಪು ನೀಡಿತ್ತು. ಮಹಿಳೆಯ ಅತ್ತೆ ತೀರ್ಪು ನೀಡುವಾಗ, ಸೊಸೆ ನನ್ನ ಮಗನನ್ನು ನಪುಂಸಕ ಎಂದು ಕರೆಯುತ್ತಿದ್ದಳು ಎಂದಿದ್ದರು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡ ಹೈಕೋರ್ಟ್ ನ್ಯಾಯಮೂರ್ತಿಗಳು, ಮಹಿಳೆ ಪತಿಯನ್ನು ನಪುಂಸಕ ಎಂದು ಕರೆಯುವುದು ಕ್ರೌರ್ಯ. ಆಕೆ ಅತ್ತೆಗೆ, ನೀನು ನಪುಂಸಕನಿಗೆ ಜನ್ಮ ನೀಡಿದ್ದೀಯಾ ಎಂದು ಹೇಳುವುದು ಕೂಡ ಕ್ರೌರ್ಯ ಎಂದಿದೆ.

TAGGED:Husband tired of wife's bedroom torches! The High Court approved the divorce
Share This Article
Facebook Twitter Copy Link Print
Previous Article ಬಾಟಲ್ ಕ್ಯಾಪ್‌ಗೆ ಸ್ತ್ರೀ ಗುಪ್ತಾಂಗ ಹೋಲಿಕೆ: ನಟಿ ನಿಯಾ ಶರ್ಮಾ ವಿರುದ್ಧ ಆಕ್ರೋಶ, ವಿಡಿಯೋ ನೋಡಿ
Next Article ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಹಿಂದಿದೆ ದೊಡ್ಡ ಲೆಕ್ಕಾಚಾರ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?