newsics.com
ಚೆನ್ನೈ: ಇಲ್ಲಿನ ಮರೀನಾ ಬೀಚ್ನಲ್ಲಿ ನಡೆದ ಭಾರತೀಯ ವಾಯುಪಡೆಯ (ಐಎಎಫ್) ವೈಮಾನಿಕ ಪ್ರದರ್ಶನ ವೇಳೆ ಭಾರೀ ಜನಸಂದಣಿಯಿಂದ ಉಂಟಾದ ನೂಕುನುಗ್ಗಲಿನಿಂದ ನಾಲ್ವರು ಮೃತಪಟ್ಟು, ಕನಿಷ್ಠ 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ರೀನಿವಾಸನ್ (48), ಕಾರ್ತಿಕೇಯನ್ (34), ಜಾನ್ ಬಾಬು (56) ಮತ್ತು ದಿನೇಶ್ ಮೃತಪಟ್ಟ .
ಐಎಎಫ್ ತನ್ನ 92ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮ ವೀಕ್ಷಿಸಲು 13 ಲಕ್ಷಕ್ಕೂ ಹೆಚ್ಚು ಜನರು ರೈಲು, ಮೆಟ್ರೋ, ಕಾರುಗಳು ಮತ್ತು ಬಸ್ಗಳ ಮೂಲಕ ಸ್ಥಳಕ್ಕೆ ಆಗಮಿಸಿದ್ದರು, ಏರ್ ಶೋಗಾಗಿ ಅತಿ ಹೆಚ್ಚು ಜನರನ್ನು ಆಕರ್ಷಿಸುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಈವೆಂಟ್ ಅನ್ನು ಸೇರಿಸಲಾಗಿತ್ತು.
ಡಿಟಿ ನೆಕ್ಸ್ಟ್ ವರದಿ ಪ್ರಕಾರ, ಏರ್ ಶೋಗಾಗಿ ಚೆನ್ನೈನ ಮರೀನಾ ಬೀಚ್ನಲ್ಲಿ ಕನಿಷ್ಠ 10 ಲಕ್ಷ ಜನರು ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಬೆಳಿಗ್ಗೆ 7 ರಿಂದ ಜನರು ಬೀಚ್ನಲ್ಲಿ ಸೇರಲು ಪ್ರಾರಂಭಿಸಿದರು ಮತ್ತು ಪ್ರದರ್ಶನವು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮುಗಿಯಿತು. ಇಡೀ ಜನಸಮೂಹವು ಒಂದೇ ಸಮಯದಲ್ಲಿ ಸ್ಥಳದಿಂದ ನಿರ್ಗಮಿಸಲು ಮುಂದಾಗಿದ್ದು ಅವ್ಯವಸ್ಥೆ ಮತ್ತು ಗೊಂದಲಕ್ಕೆ ಕಾರಣವಾಯಿತು, ಎಂದು ಅಧಿಕಾರಿ ಹೇಳಿದ್ದಾರೆ.
21 ವರ್ಷಗಳ ನಂತರ ಚೆನ್ನೈ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.
https://twitter.com/i/status/1842845152504627710