newsics.com | ನ್ಯೂಸಿಕ್ಸ್
ಬೆಂಗಳೂರು: ಶಿವಾಜಿನಗರದ ಫುಟ್ಪಾತ್ ಒತ್ತುವರಿ ತೆರವು ಮಾಡುತ್ತಿದ್ದ ಜಿಬಿಎ (GBA) ಅಧಿಕಾರಿಗಳ ಮೇಲೆ ಪುಂಡರ ತಂಡವೊಂದು ಹಲ್ಲೆ ನಡೆಸಿದೆ. ‘ನಮ್ಮ ಕರ್ನಾಟಕ ಸೇನೆ’ಯ ಬಸವರಾಜ್ ಪಡುಕೋಟೆ ಹಾಗೂ ಆತನ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಹೆಲ್ಮೆಟ್, ಚೇರ್ಗಳಿಂದ ಹಲ್ಲೆ; ಪ್ರಾಣಭಯದಲ್ಲಿ ಓಡಿದ ಅಧಿಕಾರಿಗಳು
ಮಧ್ಯಾಹ್ನದ ವೇಳೆಗೆ ‘ನಮ್ಮ ಕರ್ನಾಟಕ ಸೇನೆ’ಯ ಬಸವರಾಜ್ ಪಡುಕೋಟೆ ತನ್ನ ಕಡೆಯವರೊಂದಿಗೆ ಇನ್ನೋವಾ ವಾಹನದಲ್ಲಿ ಬಂದು ಅಧಿಕಾರಿಗಳಿಗೆ ಬೆದರಿಕೆ ಹಾಕಲು ಶುರುಮಾಡಿದ್ದ. ನೋಡನೋಡುತ್ತಿದ್ದಂತೆ ಜಿಬಿಎ ಸಹಾಯಕ ಅಭಿಯಂತರ ಮಾಧವ್ ರಾವ್ ಅವರನ್ನು ಕೆಳಗೆ ತಳ್ಳಿ, ಪ್ಲಾಸ್ಟಿಕ್ ಚೇರ್ ಹಾಗೂ ಹೆಲ್ಮೆಟ್ಗಳಿಂದ ಹಲ್ಲೆ ಮಾಡಲಾಗಿದೆ.
ಇಷ್ಟಕ್ಕೇ ನಿಲ್ಲದ ಗ್ಯಾಂಗ್, ಸ್ಥಳದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವಿತ್ರಿ ಎಂಬುವರ ಮುಖಕ್ಕೇ ಪೆಪ್ಪರ್ ಸ್ಪ್ರೇ ಹೊಡೆದು ಆತಂಕ ಹುಟ್ಟಿಸಿದೆ. “ನಮ್ಮ ಕಣ್ಣೆದುರೇ ಕೆಮಿಕಲ್ ಸ್ಪ್ರೇ ಮಾಡಿದಾಗ ಪ್ರಾಣ ಉಳಿಸಿಕೊಂಡು ಓಡಿ ಹೋಗಿ ಅಡಗಿಕೊಂಡೆವು. ಈ ರೀತಿ ಜೀವಕ್ಕೆ ಭಯವಿದ್ದರೆ ಕೆಲಸ ಮಾಡುವುದು ಹೇಗೆ?” ಎಂದು ಮಹಿಳಾ ಅಧಿಕಾರಿ ಅಳಲು ತೋಡಿಕೊಂಡಿದ್ದಾರೆ.
ಘಟನೆ ನಡೆದ ವೇಳೆ ನಾಲ್ವರು ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಇದ್ದರೂ, ಅಟ್ಯಾಕ್ ಮಾಡುತ್ತಿದ್ದವರನ್ನು ತಡೆಯದೆ ಕೇವಲ ಮೊಬೈಲ್ನಲ್ಲಿ ವೀಡಿಯೋ ಚಿತ್ರೀಕರಿಸುತ್ತಾ ನಿಂತಿದ್ದರು ಎನ್ನಲಾಗಿದೆ. ಖಾಕಿ ಪಡೆಯ ಈ ವರ್ತನೆ ಜಿಬಿಎ ಸಿಬ್ಬಂದಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
‘ಹಫ್ತಾ’ ಕಲೆಕ್ಷನ್ ನಿಲ್ಲುತ್ತೆ ಅಂತಾನೇ ಈ ಪ್ಲಾನ್?
ಜಿಬಿಎ ನೌಕರರ ಸಂಘಟನೆಯ ಅಧ್ಯಕ್ಷ ಅಮೃತ್ ರಾಜ್ ಪ್ರತಿಕ್ರಿಯಿಸಿ, “ಬಸವರಾಜ್ ಪಡುಕೋಟೆ ಸಂಘಟನೆಯ ಹೆಸರು ಹೇಳಿಕೊಂಡು ಇಲ್ಲಿನ ವ್ಯಾಪಾರಿಗಳಿಂದ ದಿನಂಪ್ರತಿ ಹಫ್ತಾ ವಸೂಲಿ ಮಾಡುತ್ತಿದ್ದ. ಈಗ ಜಾಗ ಖಾಲಿಯಾದರೆ ತನ್ನ ಜೇಬಿಗೆ ಕನ್ನ ಬೀಳುತ್ತದೆ ಎನ್ನುವ ಕಾರಣಕ್ಕೇ ಆತ ಅಧಿಕಾರಿಗಳ ಮೇಲೆ ದಾಳಿ ಮಾಡಿಸಿದ್ದಾನೆ” ಎಂದು ಸತ್ಯ ಬಿಚ್ಚಿಟ್ಟಿದ್ದಾರೆ.
ದಾಳಿ ನಡೆಸಿದ ಬಸವರಾಜ್ ಪಡುಕೋಟೆ ಮತ್ತು ಆತನ ಗ್ಯಾಂಗ್ ಅನ್ನು ಪೊಲೀಸರು ತಕ್ಷಣವೇ ಅರೆಸ್ಟ್ ಮಾಡಬೇಕು. ಇಲ್ಲವಾದರೆ ನಾಳೆಯಿಂದ ನಗರಾದ್ಯಂತ ಎಸ್ಐಆರ್ (SIR) ಮತ್ತು ಒತ್ತುವರಿ ತೆರವು ಕೆಲಸಗಳನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆಗೆ ಇಳಿಯುವುದಾಗಿ ಜಿಬಿಎ ನೌಕರರ ಒಕ್ಕೂಟ ಎಚ್ಚರಿಕೆ ಕೊಟ್ಟಿದೆ.
DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?