newsics.com/ನ್ಯೂಸಿಕ್ಸ್
ಹಿಂದೂ ಪಂಚಾಂಗ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ‘ಶನಿ ಅಮಾವಾಸ್ಯೆ’ಗೆ (Shani Ama? ಶನಿ ಅಮಾವಾಸ್ಯೆ ಬಂದಿದೆ. ಕರ್ಮ ಫಲದಾತನಾದ ಶನಿದೇವನ ಕೃಪೆ ಪಡೆಯಲು ಹಾಗೂ ಆತನ ವಕ್ರದೃಷ್ಟಿಯಿಂಉದ ಪಾರಾಗಲು ಈ ದಿನ ಅತ್ಯಂತ ಪ್ರಮುಖವಾಗಿದೆ.ಢಢ
2026ರಲ್ಲಿ ಬರಲಿರುವ ಶನಿ ಅಮಾವಾಸ್ಯೆಯು ಗ್ರಹಗಳ ವಿಶೇಷ ಸಂಯೋಜನೆಯಿಂದಾಗಿ ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದ್ದು, ಮುಖ್ಯವಾಗಿ ತುಲಾ ರಾಶಿ ಸೇರಿದಂತೆ ಒಟ್ಟು ಐದು ರಾಶಿಗಳ ಜನರಿಗೆ ಕಷ್ಟಕಾಲ ತಂದೊಡ್ಡಲಿದೆ.
ತುಲಾ ರಾಶಿ ಜನರಿಗೆ ಭಾರೀ ಸವಾಲು
ಈ ಶನಿ ಅಮಾವಾಸ್ಯೆಯು ತುಲಾ ರಾಶಿಯವರಿಗೆ ಹಲವು ಸವಾಲುಗಳನ್ನು ತರಲಿದೆ. ಈ ಅವಧಿಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆ ಹೆಚ್ಚಿರುವುದರಿಂದ ಹಣಕಾಸಿನ ವಹಿವಾಟಿನಲ್ಲಿ ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ. ವೃತ್ತಿ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಅಥವಾ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯಗಳು ಮೂಡಬಹುದು. ಮಾನಸಿಕ ಒತ್ತಡ ಹಾಗೂ ಅನಗತ್ಯ ಚಿಂತೆಗಳು ನಿಮ್ಮನ್ನು ಕಾಡಲಿವೆ. ವ್ಯಾಪಾರದಲ್ಲಿ ಯಾವುದೇ ಹೊಸ ಒಪ್ಪಂದಗಳನ್ನು ಅಥವಾ ದೊಡ್ಡ ಹೂಡಿಕೆಗಳನ್ನು ಮಾಡಲು ಇದು ಸೂಕ್ತ ಸಮಯವಲ್ಲ. ಆರೋಗ್ಯದ ವಿಚಾರದಲ್ಲಿಯೂ ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯ, ಸಣ್ಣಪುಟ್ಟ ಸಮಸ್ಯೆಗಳಿದ್ದರೂ ನಿರ್ಲಕ್ಷ್ಯ ಬೇಡ.
ಈ 4 ರಾಶಿಗಳಿಗೂ ಸಂಕಷ್ಟ!
ತುಲಾ ರಾಶಿಯ ಜತೆಗೆ ಕರ್ಕಾಟಕ, ವೃಶ್ಚಿಕ, ಮಕರ ಹಾಗೂ ಕುಂಭ ರಾಶಿಯವರ ಮೇಲೂ ಶನಿ ಅಮಾವಾಸ್ಯೆಯ ನಕಾರಾತ್ಮಕ ಪ್ರಭಾವ ದಟ್ಟವಾಗಿರಲಿದೆ. ಶನಿಯ ಸಾಡೇಸಾತಿ ಹಾಗೂ ಧೈಯಾ ಪ್ರಭಾವದಲ್ಲಿರುವ ಈ ರಾಶಿಗಳ ಸ್ಥಳೀಯರು ಈ ಅವಧಿಯಲ್ಲಿ ತಾಳ್ಮೆ ಕಳೆದುಕೊಳ್ಳಬಾರದು.
ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಕಲಹಗಳು ಏರ್ಪಡಬಹುದು, ಹೀಗಾಗಿ ಮಾತಿನ ಮೇಲೆ ಹಿಡಿತವಿರಲಿ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅತ್ಯಗತ್ಯ. ನಿಮ್ಮ ಗುಪ್ತ ಶತ್ರುಗಳು ನಿಮ್ಮ ವಿರುದ್ಧ ಪಿತೂರಿ ನಡೆಸುವ ಸಾಧ್ಯತೆ ಇರುವುದರಿಂದ, ಕೆಲಸದ ಸ್ಥಳದಲ್ಲಿ ಯಾರನ್ನೂ ಕುರುಡಾಗಿ ನಂಬಬಾರದು.
ಶನಿದೇವರನ್ನು ಕೇವಲ ಶಿಕ್ಷೆ ನೀಡುವ ದೇವರೆಂದು ಭಾವಿಸುವ ಅಗತ್ಯವಿಲ್ಲ. ಜ್ಯೋತಿಷ್ಯದಲ್ಲಿ ಶನಿಯನ್ನು ‘ಕರ್ಮಫಲದಾತ’ ಎಂದು ಕರೆಯಲಾಗುತ್ತದೆ ಎಂದು ವಿಜಯಕರ್ನಾಟ ವರದಿ ಮಾಡಿದೆ. ಅಂದರೆ, ನಮ್ಮ ಹಿಂದಿನ ಮತ್ತು ಇಂದಿನ ಒಳಿತು-ಕೆಡುಕುಗಳ ಆಧಾರದ ಮೇಲೆ ಆತ ಫಲವನ್ನು ನೀಡುತ್ತಾನೆ.
ಅಸಹಾಯಕರಿಗೆ ನೆರವಾಗಿ
ಶನಿ ಅಮಾವಾಸ್ಯೆಯ ಅವಧಿಯಲ್ಲಿ ಸುಳ್ಳು ಹೇಳುವುದು, ಮೋಸ ಮಾಡುವುದು ಹಾಗೂ ದುರ್ಬಲರಿಗೆ ಹಿಂಸೆ ನೀಡುವುದನ್ನು ತಪ್ಪಿಸಬೇಕು. ವಯಸ್ಸಾದವರಿಗೆ, ಕಾರ್ಮಿಕರಿಗೆ ಮತ್ತು ಅಸಹಾಯಕರಿಗೆ ನಿಷ್ಕಲ್ಮಶ ಮನಸ್ಸಿನಿಂದ ಸಹಾಯ ಮಾಡುವುದರಿಂದ ಶನಿದೇವರ ಕೃಪಾಕಟಾಕ್ಷ ನಿಮ್ಮ ಮೇಲಿರುತ್ತದೆ ಹಾಗೂ ಮುಂಬರುವ ದಿನಗಳಲ್ಲಿ ಇದು ನಿಮಗೆ ಅದ್ಭುತವಾದ ಶುಭ ಫಲಗಳನ್ನು ತಂದುಕೊಡುತ್ತದೆ.
ಪರಿಹಾರಗಳೇನು?
ಶನಿದೇವನ ಕೋಪದಿಂದ ಪಾರಾಗಲು ಹಾಗೂ ಸಮಸ್ಯೆಗಳನ್ನು ಶಮನಗೊಳಿಸಲು ಶನಿ ಅಮಾವಾಸ್ಯೆಯಂದು ಕೆಲವು ಸರಳ ಪರಿಹಾರಗಳನ್ನು ಮಾಡುವುದು ಉತ್ತಮ. ಈ ದಿನ ಶನಿದೇವನಿಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಪ್ರಾರ್ಥಿಸಬೇಕು. ಕಪ್ಪು ಎಳ್ಳು, ಕಪ್ಪು ಬಟ್ಟೆ ಅಥವಾ ಉದ್ದಿನಬೇಳೆಯನ್ನು ನಿರ್ಗತಿಕರಿಗೆ ದಾನ ಮಾಡುವುದರಿಂದ ಶನಿಯು ಪ್ರಸನ್ನನಾಗುತ್ತಾನೆ. ಇದರ ಜತೆಗೆ ನಿತ್ಯ ಹನುಮಾನ್ ಚಾಲೀಸಾ ಪಠಿಸುವುದರಿಂದ ಶನಿ ದೋಷದ ತೀವ್ರತೆ ಕಡಿಮೆಯಾಗಿ, ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದು. ತಾಳ್ಮೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವವರ ಮೇಲೆ ಶನಿದೇವನು ಸದಾ ಕರುಣೆ ತೋರುತ್ತಾನೆ.
Highcourt verdict ಭೋಜಶಾಲಾ ಸರಸ್ವತಿ ಮಂದಿರಕ್ಕೆ ಸೇರಿದ್ದು, ಮಸೀದಿಗೆ ಪರ್ಯಾಯ ಭೂಮಿ: ಎಂಪಿ ಹೈಕೋರ್ಟ್ ತೀರ್ಪು
Money showered on the singer ಭಕ್ತಿ ಗಾಯನಕ್ಕೆ ಮಾರುಹೋದ ಭಕ್ತರು: ಗಾಯಕನ ಮೇಲೆ ಹಣದ ಸುರಿಮಳೆ! ವಿಡಿಯೋ ನೋಡಿ