newsics.com/ನ್ಯೂಸಿಕ್ಸ್
ಕರ್ನಾಟಕದಲ್ಲೂ ಹೊಸ ಪಕ್ಷ ಸ್ಥಾಪನೆಯ ಸುಳಿವೊಂದು ಸಿಕ್ಕಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗಾ ವೆಟ್ರಿ ಕಳಗಂ ಪಕ್ಷ ಅತ್ಯುತ್ತಮ ಸಾಧನೆ ಮಾಡಿರುವುದರಿಂದ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳಿಗೆ ಹೊಸ ಭರವಸೆಯೊಂದು ಮೂಡಿದೆ. ಹೀಗಾಗಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 2 ವರ್ಷ ಬಾಕಿ ಇರುವುದರಿಂದ ಇಲ್ಲಿ ಕೂಡ ಹೊಸ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಸುಳಿವು ನೀಡಿದ್ದಾರೆ.
ಟಿವಿಕೆ ಪಕ್ಷದ ಫೀನಿಕ್ಸ್ನಂತಹ ಗೆಲುವಿನಿಂದ ಪುಟಿದೆದ್ದಿರುವ ಕನ್ನಡ ಬಿಗ್ಬಾಸ್ನ ಮಾಜಿ ಸ್ಪರ್ಧಿ, ಲಾಯರ್ ಜಗದೀಶ್ ಈಗ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಸುಳಿವು ನೀಡಿದ್ದು, ಸದ್ಯದಲ್ಲೇ ಪಕ್ಷವನ್ನು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಲಾಯರ್ ಜಗದೀಶ್ ಕೆಎನ್, ನಮ್ಮ ಸಾರಥ್ಯದಲ್ಲಿ ಶೀಘ್ರವೇ ಹೊಸ ರಾಜಕೀಯ ಪಕ್ಷ ನಿಮ್ಮ ಮುಂದೆ ಬರಲಿದೆ ಎಂದು ಹೇಳಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಜಗದೀಶ್ ಅವರು, ‘ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸಹವಾಸ ಕರ್ನಾಟಕದ ಮತದಾರರಿಗೆ ಸಾಕಾಗಿದೆ. ಭ್ರಷ್ಟಾಚಾರ, ನಿರುದ್ಯೋಗ, ಬಡತನ, ಬೆಲೆ ಏರಿಕೆ, ವಿರುದ್ಧ ಜನರ ಜೊತೆ ನಿಲ್ಲುವ, ಸಾಮಾನ್ಯ ಜನರ ನಿಲ್ಲಿಸಿ ಗೆಲ್ಲಿಸಿ ಸರ್ಕಾರ ರಚಿಸುವ ಅವಶ್ಯಕತೆ ಮುಂದಿನ ಕರ್ನಾಟಕ MLA ( ವಿಧಾನಸಭಾ)ಚುನಾವಣೆಯಲ್ಲಿ ಮಾಡಬೇಕೆಂದು ಪ್ರಯತ್ನ ನಡೆಯುತ್ತಿದೆ. ಹತ್ತಾರು ರಾಜಕೀಯ ಪಕ್ಷಗಳು ಇರುವ ಕರ್ನಾಟಕಕ್ಕೆ, ಈ ಮೂರು ಪಕ್ಷಗಳ ಭ್ರಷ್ಟ ರಾಜಕಾರಣಿಗಳಿಗೆ ತೊಡೆ ತಟ್ಟಿ ನಿಲ್ಲುವ ಒಬ್ಬ ನಾಯಕ ಹಾಗೂ ಸಾಮಾನ್ಯ ವರ್ಗದ ಜನರ ಜೊತೆ ನಿಲ್ಲುವ ಒಂದು ರಾಜಕೀಯ ಪಕ್ಷ ಅವಶ್ಯಕತೆ ಇದೆ. ಶೀಘ್ರವೇ ಪಾರ್ಟಿ ಹಾಗೂ ಜವಾಬ್ದಾರಿ ಹೊತ್ತ ನಿಮ್ಮ ಮುಂದೆ!’ ಎಂದು ಪೋಸ್ಟ್ ಮಾಡಿದ್ದಾರೆ.
ಮುಂದುವರಿದು ಜಗದೀಶ್ ಅವರು, ‘ಧರ್ಮಸ್ಥಳ ವಿಚಾರ, ಕಬ್ಬು ಬೆಳೆಗಾರರ ವಿಚಾರ, ಸರ್ಕಾರಿ ಉದ್ಯೋಗ ವಿಚಾರ, ಭ್ರಷ್ಟಾಚಾರ ವಿರುದ್ಧ?, ಬೆಲೆ ಏರಿಕೆ, ಪೊಲೀಸ್ ದೌರ್ಜನ್ಯ, ಪೊಲೀಸ್ ದಬ್ಬಾಳಿಕೆ ಇತ್ಯಾದಿ ವಿಚಾರಗಳಲ್ಲಿ ಮೂರು ಪಕ್ಷಗಳು ಜನರ ಜೊತೆ ಇಲ್ಲ. ನಮ್ಮ ವೋಟ್ ಬೇಕು, ನಮ್ಮ ತೆರಿಗೆ ಬೇಕು, ಆದರೆ ಸಮಸ್ಯೆ ಮಾತ್ರ ಬಗೆ ಹರಿಸಲು ಸಾಧ್ಯವಿಲ್ಲ.’ ಎಂದು ಪೋಸ್ಟ್ ಮಾಡಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗಾ ವೆಟ್ರಿ ಕಳಗಂ ಪಕ್ಷ ಅತ್ಯುತ್ತಮ ಸಾಧನೆ ಮಾಡಿದ ಬೆನ್ನಲ್ಲೇ ಜಗದೀಶ್ ಕೆಎನ್ ಕೂಡ ಕರ್ನಾಟಕದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡಿರೋದು ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಹಲವು ಜನರು ಕಾಮೆಂಟ್ನಲ್ಲಿ ಜಗದೀಶ್ಗೆ ಬೆಂಬಲ ಸೂಚಿಸಿದ್ದಾರೆ. ಕೆಲವರು, ‘ನಿಮ್ಮ ಪ್ರಣಾಳಿಕೆಯಲ್ಲಿ ನಾಡು ನುಡಿಗೆ ಆದ್ಯತೆ ಇರಲಿ, ಸ್ಥಳೀಯರಿಗೆ ಅವಕಾಶ ಇರಲಿ’ ಎಂದು ಕಾಮೆಂಟ್ ಮಾಡಿದ್ದಾರೆ.
ಮುಂದುವರಿದು ಜಗದೀಶ್ ಅವರು, ‘ಧರ್ಮಸ್ಥಳ ವಿಚಾರ, ಕಬ್ಬು ಬೆಳೆಗಾರರ ವಿಚಾರ, ಸರ್ಕಾರಿ ಉದ್ಯೋಗ ವಿಚಾರ, ಭ್ರಷ್ಟಾಚಾರ ವಿರುದ್ಧ?, ಬೆಲೆ ಏರಿಕೆ, ಪೊಲೀಸ್ ದೌರ್ಜನ್ಯ, ಪೊಲೀಸ್ ದಬ್ಬಾಳಿಕೆ ಇತ್ಯಾದಿ ವಿಚಾರಗಳಲ್ಲಿ ಮೂರು ಪಕ್ಷಗಳು ಜನರ ಜೊತೆ ಇಲ್ಲ. ನಮ್ಮ ವೋಟ್ ಬೇಕು, ನಮ್ಮ ತೆರಿಗೆ ಬೇಕು, ಆದರೆ ಸಮಸ್ಯೆ ಮಾತ್ರ ಬಗೆ ಹರಿಸಲು ಸಾಧ್ಯವಿಲ್ಲ.’ ಎಂದು ಪೋಸ್ಟ್ ಮಾಡಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗಾ ವೆಟ್ರಿ ಕಳಗಂ ಪಕ್ಷ ಅತ್ಯುತ್ತಮ ಸಾಧನೆ ಮಾಡಿದ ಬೆನ್ನಲ್ಲೇ ಜಗದೀಶ್ ಕೆಎನ್ ಕೂಡ ಕರ್ನಾಟಕದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡಿರೋದು ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ಹಲವು ಜನರು ಕಾಮೆಂಟ್ನಲ್ಲಿ ಜಗದೀಶ್ಗೆ ಬೆಂಬಲ ಸೂಚಿಸಿದ್ದಾರೆ. ಕೆಲವರು, ‘ನಿಮ್ಮ ಪ್ರಣಾಳಿಕೆಯಲ್ಲಿ ನಾಡು ನುಡಿಗೆ ಆದ್ಯತೆ ಇರಲಿ, ಸ್ಥಳೀಯರಿಗೆ ಅವಕಾಶ ಇರಲಿ’ ಎಂದು ಕಾಮೆಂಟ್ ಮಾಡಿದ್ದಾರೆ.
ಭಿಕ್ಷೆ ಬೇಡುತ್ತಿದ್ದ NDA ಮಾಜಿ ಪ್ರೊಫೆಸರ್: ವೈರಲ್ ವಿಡಿಯೋ ನೋಡಿ ಭಾರತೀಯ ಸೇನೆ ಮಾಡಿದ್ದೇನು?