Subscribe ನ್ಯೂಸಿಕ್ಸ್ ಕನ್ನಡ NewsicsKannada.YouTube
newsics.com
ರಾಜಸ್ಥಾನದ ಜೋಧ್ಪುರದ ಶಾಲೆಯೊಂದರಲ್ಲಿ ನಡೆದ ಭಾವುಕ ಹಾಗೂ ಮಾನವೀಯ ಘಟನೆಯೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇಂಟರ್ನೆಟ್ನಲ್ಲಿ ಈ ವಿಚಾರ ಭಾರೀ ವೈರಲ್ ಆಗ್ತಿದೆ.
ಕ್ಯಾನ್ಸರ್ ಮಹಾಮಾರಿ ಒಮ್ಮೆ ವಕ್ಕರಿಸಿದರೆ ಕಿಮೋಥೆರಪಿ ಕಡ್ಡಾಯ. ಈ ಕಿಮೋಥೆರಪಿ ಅತ್ಯಂತ ನೋವಿನಿಂದ ಕೂಡಿದ ಚಿಕಿತ್ಸೆ ಈ ಸಮಯದಲ್ಲಿ ಕ್ಸಾನ್ಸರ್ ಪೀಡಿತ ವ್ಯಕ್ತಿಯ ಕೂದಲು ಸಂಪೂರ್ಣವಾಗಿ ಉದುರುತ್ತದೆ. ದೇಹದ ಸ್ಥಿತಿ ಯಾತನಾಮಯವಾಗಿರುತ್ತದೆ. ವ್ಯಕ್ತಿ ಖಿನ್ನತೆಗೆ ಜಾರುತ್ತಾನೆ. ಈ ಸಮಯದಲ್ಲಿ ಅವರ ಜತೆಗಿರುವವರು ಅವರನ್ನು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಅವರ ಮನಸ್ಥಿತಿ ನಿರ್ಧಾರವಾಗಿರುತ್ತದೆ.
ಶಾಲೆಗೆ ಹೋಗುವ ಪುಟ್ಟ ಬಾಲಕಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ. ಆಕೆ ಕಿಮೋಥೆರಪಿಗೆ ಒಳಗಾದ ನಂತರ ಆ ಪುಟ್ಟ ಬಾಲಕಿಯ ಕೂದಲೆಲ್ಲಾ ಉದುರಿ ಆಕೆ ಖಿನ್ನತೆಗೆ ಜಾರಿದ್ದಳು. ಶಾಲೆಗೆ ಹೋಗುವುದಕ್ಕೂ ಹಿಂಜರಿದಳು. ಆದರೆ ಆಕೆಯ ಈ ನೋವಿನ ಪಯಣದಲ್ಲಿ ಜತೆಯಾಗುವುದಕ್ಕೆ ಆಕೆಯ ತರಗತಿಯ ಮಕ್ಕಳ ಜತೆಗೆ ಆಕೆಯ ಶಿಕ್ಷಕರು ಕೂಡ ಸಿದ್ಧರಾದರು. ಆಕೆಗಾಗಿ ಎಲ್ಲರೂ ತಮ್ಮ ತಲೆಕೂದಲನ್ನು ಬೋಳಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜತೆಗೆ ಆ ಬಾಲಕಿಯ ತರಗತಿಯ ಮಕ್ಕಳ ಕರುಣೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿರುವ ಮಾಹಿತಿ ಪ್ರಕಾರ ಇದು ಜೋಧ್ಪುರದ ಶಾಲೆಯೊಂದರ ವೈರಲ್ ವಿಡಿಯೋ. ಮಾಹಿತಿಯ ಪ್ರಕಾರ ಶಾಲೆಯ ಒಬ್ಬಳು ಬಾಲಕಿ ಕ್ಯಾನ್ಸರ್ ಕಾರಣಕ್ಕೆ ಕಿಮೋಥೆರಪಿಗೆ ಒಳಗಾಗುತ್ತಿದ್ದುದರಿಂದ ಆಕೆಯ ತಲೆಕೂದಲೆಲ್ಲಾ ಉದುರಿ ಆಕೆ ಖಿನ್ನತೆಗೆ ಜಾರಿದ್ದಳು. ಹೀಗಾಗಿ ಆಕೆಯನ್ನು ಖಿನ್ನತೆಯಿಂದ ಮೇಲೆತ್ತಲು ಹಾಗೂ ಆಕೆಗೆ ಬೆಂಬಲವಾಗಿ ನಿಲ್ಲಲು ಆಕೆಯ ಶಿಕ್ಷಕರು ಹಾಗೂ ತರಗತಿಯ ಮಕ್ಕಳು ಎಲ್ಲರೂ ತಮ್ಮ ತಲೆಕೂದಲನ್ನು ತೆಗೆಸಿದ್ದಾರೆ.
ಈ ವಿಡಿಯೋ ನೋಡಿದ ಅನೇಕರು ಶಾಲೆಯ ಮಕ್ಕಳು ಹಾಗೂ ಶಿಕ್ಷಕರ ಕರುಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
https://www.instagram.com/reel/DTvCSIeEvsh/?igsh=MXR2cXI2d253dDg3aQ==