Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ ಕನ್ನಡ’ ಸೀಸನ್ 12ರ ವಿಜೇತರಾಗಿ ಹೊರಹೊಮ್ಮಿರುವ ಗಿಲ್ಲಿ ನಟ ಅಲಿಯಾಸ್ ದಡದನಪುರ ನಟರಾಜ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಬೆಂಗಳೂರಿನ ‘ಕಾವೇರಿ’ ನಿವಾಸದಲ್ಲಿ ನಡೆದ ಈ ಭೇಟಿಯ ವೇಳೆ ಮುಖ್ಯಮಂತ್ರಿಗಳು ಗಿಲ್ಲಿ ನಟರಾಜ್ ಅವರಿಗೆ ಹಾರ ಹಾಕಿ, ಸಿಹಿ ತಿನ್ನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
ಮೊದಲಿಗೆ ಸಿಎಂ ಭೇಟಿಯಾದ ಗಿಲ್ಲಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಸಿಎಂ ಹಾರ ಹಾಕಿ ಶುಭಕೋರಿದರು. ಆ ಬಳಿಕ ಸಿಎಂ ಯಾವ ಊರು? ತಂದೆ ತಾಯಿ ಏನು ಮಾಡುತ್ತಿದ್ದಾರೆ? ಏನು ಬಹುಮಾನ ಸಿಕ್ಕಿತು ಎಂದು ಪ್ರಶ್ನೆ ಮಾಡಿದರು. ಆಗ ಗಿಲ್ಲಿ ತಮ್ಮ ಊರಿನ ಬಗ್ಗೆ ಹೇಳಿದರು. ತಂದೆ ತಾಯಿ ವ್ಯವಸಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಜತೆಗೆ ಬಹುಮಾನ ವಿಚಾರವಾಗಿ, 50 ಲಕ್ಷ ರೂಪಾಯಿ ಸಿಕ್ಕಿತು, ನಟ ಸುದೀಪ್ ಅವರು 10 ಲಕ್ಷ ನೀಡಿದರು ಎಂದು ವಿವರಿಸಿದರು.
ನಟರಾಜ್ ಅವರ ಸಾಧನೆಯನ್ನು ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ, ‘ಹಳ್ಳಿಯಿಂದ ಬಂದು ತನ್ನ ಪ್ರತಿಭೆ ಮತ್ತು ಸಹಜತೆಯಿಂದ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಗಳಿಸಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಕನ್ನಡ ಕಲೆ ಮತ್ತು ಸಂಸ್ಕೃತಿಗೆ ಹೆಸರು ತನ್ನಿ’ ಎಂದು ಶುಭ ಹಾರೈಸಿದ್ದಾರೆ.
https://www.newsics.com/2026/01/22/famous-singer-s-janakis-son-murali-krishna-passes-away/