Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಮುಂದೆಯೇ ಗಿಲ್ಲಿ ಅವರು ಕಾವ್ಯರನ್ನು ರೇಗಿಸುತ್ತಾರೆ. ಕಳೆದ ವಾರ ಕೂಡ ಕಾವ್ಯ ಇನ್ನೂ ಸರ್ಕಲ್ನಲ್ಲಿದ್ದಾರೆ ಎಂದಿದ್ದರು. ಇದು ಕಾವ್ಯ ಮನಸ್ಸಿಗೆ ಬೇಸರ ತಂದಿತ್ತು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಆಗಿದೆ.
ಕಾವ್ಯ ಶೈವ ಅವರು ಗಿಲ್ಲಿ ನಟನ ಜೊತೆ ಮಾತನಾಡಿಲ್ಲ. ಆಗ ಗಿಲ್ಲಿ ಕೂಡ ಕಾವ್ಯಳಿಗೆ ಟಾಂಟ್ ಕೊಡುತ್ತಲೇ ಇದ್ದರು. ಮಿಡ್ ವೀಕ್ ಎಲಿಮಿನೇಶನ್ ಹತ್ತಿರ ಇದೆ, ಟೈಮ್ ಬಂದಿದೆ ಎಂದು ಕೂಡ ಹೇಳಿದ್ದರು. ನನ್ನ ಟಾಸ್ಕ್ನಲ್ಲಿ ಮಣ್ಣು ಹಾಕಬೇಡ, ನಾನು ಟಾಪ್ 6 ಹೋಗಬೇಕು ಎಂದು ಕಾವ್ಯ ಶೈವ ಅವರು ಗಿಲ್ಲಿಗೆ ಹೇಳಿದ್ದರು.
ಈ ವಿಚಾರಕ್ಕೂ ಕೂಡ ಕಾವ್ಯ ಶೈವ ಅವರನ್ನು ಗಿಲ್ಲಿ ರೇಗಿಸಿದ್ದುಂಟು. ಇನ್ನು ಟವರ್ ಟಾಸ್ಕ್ನಲ್ಲಿ ಕೂಡ ಕಾವ್ಯ ಅವರು ಗಿಲ್ಲಿಗೆ ಬೆಂಬಲ ಕೊಡ್ತೀಯಾ ಎಂದು ಹೇಳಿದ್ದರು. ಗಿಲ್ಲಿಗೆ ಅನಾರೋಗ್ಯ ಆಗಿತ್ತು. ಫಿಸಿಕಲ್ ಟಾಸ್ಕ್ ಮಾಡೋದಿಲ್ಲ ಎಂದು ಎಲ್ಲರೂ ಹೇಳಿದರೂ ಕೂಡ ಗಿಲ್ಲಿ ಇದನ್ನೇ ಚಾಲೆಂಜ್ ಆಗಿ ತಗೊಂಡು ಕಾವ್ಯ ಗೆಲ್ಲಲು ಸಹಾಯ ಮಾಡಿದ್ದರು. ಇದರಿಂದ ಕಾವ್ಯ ಗೆದ್ದರೂ, ಗಿಲ್ಲಿಗೆ ಏನೂ ಸಿಕ್ಕಿಲ್ಲ.
ಆಟದ ವೇಳೆ ಗಿಲ್ಲಿ ಬೇಗ ಓಡ್ತಿಲ್ಲ, ಸ್ವಿಮ್ಮಿಂಗ್ ಪೂಲ್ಗೆ ಜಿಗಿಯುತ್ತಿಲ್ಲ, ಕೋಲು ಎತ್ತಿಕೊಂಡು ಬರ್ತಿಲ್ಲ ಎಂದು ಕಾವ್ಯ ಶೈವ ಕೂಗಾಡಿದ್ದಾರೆ, ಕಿರುಚಿದ್ದಾರೆ, ಆ ಹಾವಭಾವಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಕೆಟ್ಟ ಪ್ರಪಂಚ, ಬೇಕಾದಾಗ ಯೂಸ್ ಮಾಡಿಕೊಳ್ತಾರೆ ಎಂದು ಕಾವ್ಯ ಅವರನ್ನು ಟ್ರೋಲ್ ಮಾಡಲಾಗ್ತಿದೆ.