Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಷ್ಟಕಾಲದಲ್ಲಿ ಕನ್ನಡ ಚಿತ್ರರಂಗದವರು ಕರುಣೆ ತೋರಿಸಲಿಲ್ಲ ಎಂದು ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಕಣ್ಣೀರಿಟ್ಟಿದ್ದಾರೆ.
ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲೂ ಗುರುತಿಸಿಕೊಂಡ ಪ್ರತಿಭಾವಂತ ನಟಿ ರಾಗಿಣಿ ದ್ವಿವೇದಿ ತಮ್ಮ ಆಕರ್ಷಕ ಅಭಿನಯ ಮತ್ತು ಗ್ಲ್ಯಾಮರ್ನಿಂದ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿದ್ದಾರೆ.
ತಮ್ಮ ನಟನಾ ವೃತ್ತಿಜೀವನದ ಬಗ್ಗೆ ಭಾವುಕವಾಗಿ ಮಾತನಾಡುವಾಗ ಅವರು ಕಣ್ಣೀರು ಹಾಕಿದ್ದಾರೆ.
‘ವೀರಮದಕರಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರಾಗಿಣಿ, ಬಣ್ಣದ ಲೋಕದಲ್ಲಿ 15 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ತಮ್ಮ 15 ವರ್ಷದ ಜರ್ನಿಯನ್ನು ಮೆಲುಕು ಹಾಕುವಾಗ ಭಾವುಕರಾಗಿ ಕಣ್ಣೀರಿಟ್ಟರು.
ನನ್ನ ಕಷ್ಟದ ಸಮಯದಲ್ಲಿ ನಮ್ಮ ಕನ್ನಡ ಚಿತ್ರರಂಗದದವರು ಯಾರೂ ಬೆಂಬಲ ನೀಡಲಿಲ್ಲ. ಆದ್ರೆ ಬೇರೆ ಭಾಷೆಯ ಸ್ನೇಹಿತರು ಸಮಾಧಾನದ ಮಾತುಗಳನ್ನು ಹೇಳಿದರು. ನಮ್ಮ ಚಿತ್ರರಂಗದವರು ಕರುಣೆ ತೋರಿಸಲಿಲ್ಲ. ನಾನು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಅಂತಾ ಬಹಳ ಪ್ರೀತಿ ತೋರಿಸುತ್ತೇನೆ. ಆದ್ರೆ ನಮ್ಮ ಚಿತ್ರರಂಗದವರು ನನಗೆ ಪ್ರೀತಿ ತೋರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚಳಿಗಾಲದಲ್ಲಿ ರಾತ್ರಿ ಸ್ವೆಟರ್ ಧರಿಸಿ ಮಲಗಿದಾಗ ಏನಾಗುತ್ತದೆ ಎಂದು ನಿಮಗೆ ತಿಳಿದಿದ್ಯಾ?
ಸಾಲವನ್ನೇ ಬಂಡವಾಳವಾಗಿ ಇಟ್ಟುಕೊಂಡು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ
Personal Health ಲೈಂಗಿಕ ಕ್ರಿಯೆ ಬಳಿಕ ಮಹಿಳೆಯರು ಈ 3 ತಪ್ಪು ಮಾಡಲೇಬಾರದು, ಇದರಿಂದ ಇಲ್ಲದ ಸಮಸ್ಯೆ ಕಾಡತ್ತೆ