ನ್ಯೂಸಿಕ್ಸ್. ಕಾಮ್
newsics.com
ಕಲಬುರಗಿ: ಮೈಸೂರು ಮತ್ತು ಬಾಗಲಕೋಟೆ ನಡುವೆ ಸಂಚರಿಸುವ ಬಸವ ಎಕ್ಸ್ಪ್ರೆಸ್ ರೈಲು ಬುಧವಾರ ರಾತ್ರಿ 7 ಗಂಟೆ ತಡವಾಗಿ ಆಗಮಿಸಿದ್ದರಿಂದ ಪ್ರಯಾಣಿಕರು ಕಲಬುರಗಿ ನಿಲ್ದಾಣದಲ್ಲಿ ರಾತ್ರಿಯಿಡೀ ಪರದಾಡಿದರು.
ಕಲಬುರಗಿ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಬಸವ ಎಕ್ಸ್ಪ್ರೆಸ್ ರೈಲು ನಿತ್ಯ ನಿಗಧಿತ ಸಮಯ ರಾತ್ರಿ 9:15ಕ್ಕೆ ಬರಬೇಕಿತ್ತು. ಆದರೆ, 7 ಗಂಟೆಗೂ ಹೆಚ್ಚು ತಡವಾಗಿ ಅಂದರೆ ಗುರುವಾರ ಬೆಳಗಿನ ಜಾವ 4:30ಕ್ಕೆ ರೈಲು ಬಂದ ಹಿನ್ನೆಲೆಯಲ್ಲಿ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದ್ದಾರೆ.
ಬಸವ ಎಕ್ಸ್ಪ್ರೆಸ್ ಪ್ರಯಾಣ ಬೆಳೆಸುವ ಪ್ರಯಾಣಿಕರು ರೈಲಿನ ಸಮಯವಾಗಿದೆ. ಯಾಕೆ ಬರುತ್ತಿಲ್ಲ ಎಂದು ಕೇಳಿದಾಗಲೆಲ್ಲ ರೈಲ್ವೆ ಅಧಿಕಾರಿಗಳು, ಹತ್ತು ಹದಿನೈದು ನಿಮಿಷಗಳಲ್ಲಿ ಬರಲಿದೆ ಎಂಬ ಹೇಳಿದ್ದು, ಕೊನೆಗೆ ಬರೋಬ್ಬರಿ 7 ಗಂಟೆ ತಡವಾಗಿ ರೈಲು ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ.
ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಪ್ರಯಾಣ ಬೆಳೆಸುತ್ತಿದ್ದ ಕುಟುಂಬಗಳು ರಾತ್ರಿಯಿಡೀ ರೈಲಿಗಾಗಿ ಕಾದಿದ್ದು, ರೈಲ್ವೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಕೈ ತೆಕ್ಕೆಗೆ ಮತ್ತೆ ಕಲಬುರಗಿ ಪಾಲಿಕೆ: ವರ್ಷಾ ಜಾನೆ ಮೇಯರ್, ತೃಪ್ತಿ ಲಾಕೆ ಉಪಮೇಯರ್
ಗೃಹ ಸಚಿವರ ಕ್ಷೇತ್ರದಲ್ಲೇ ಭೀಕರ ಕೊ*ಲೆ: ಶವ ಕತ್ತರಿಸಿ ರಸ್ತೆಯಲ್ಲೆಲ್ಲ ಎಸೆದ ಹಂತಕ
Actress Shweta Menon ನಟಿ ಶ್ವೇತಾ ಮೆನನ್ ವಿರುದ್ಧ ಅಶ್ಲೀಲ ಸಿನಿಮಾಗಳಲ್ಲಿ ನಟಿಸುತ್ತಿರುವ ಆರೋಪ – ಕೇಸ್ ದಾಖಲು