newsics.com
ಬೆಂಗಳೂರು : ಬಿಬಿಎಂಪಿ ವತಿಯಿಂದ 516ನೇ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ 53 ಮಂದಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಲು ಮುಂದಾಗಿದೆ.
ಇಂದು ಸಂಜೆ 6.00 ಗಂಟೆಗೆ ಬಿಬಿಎಂಪಿ ಕೇಂದ್ರ ಕಛೇರಿಯ ಡಾ.ರಾಜ್ಕುಮಾರ್ ಗಾಜಿನ ಮನೆ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ರವರಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇನ್ನು 516ನೇ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವದಂದು ಪ್ರಶಸ್ತಿ ಪಡೆಯುವವರು, ನಂದಕುಮಾರ್ (ವಾಯುನೆಲೆ), ಬಿ ಎಸ್ ಪಾಟೀಲ್ (ಸಾರ್ವಜನಿಕ ಸೇವೆ), ವಿ ರವಿಚಂದರ್ (ಸಮಾಜ ಸೇವೆ), ಆರ್ ಕೆ ಮಿಶ್ರಾ (ವಾಸ್ತು ಶಿಲ್ಪಿ), ಮಹೇಶ್ ಭೂಪತಿ (ಕ್ರೀಡೆ), ಸಂಗೀತ ಕಟ್ಟಿ (ಸಂಗೀತ) ಸೇರಿದಂತೆ ಒಟ್ಟು 53 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ.
ಶಿಶುಗಳಿಗೆ ತಾಯಿಯ ಎದೆಹಾಲು ಅತ್ಯುತ್ತಮ; ಸ್ತನ್ಯಪಾನದಲ್ಲಿದೆ ಹತ್ತಾರು ಪ್ರಯೋಜನ