newsics.com
ಹಾಸನ : ಮದುವೆಯಾಗಲು ಪ್ರಿಯತಮೆ ನಿರಾಕರಿಸಿದ್ದಕ್ಕೆ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಭೈರಾಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದರ್ಶನ್ (23) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ದರ್ಶನ್ ಗಂಡಸಿ ಹೋಬಳಿ ಬೇವಿನಹಳ್ಳಿಯಲ್ಲಿರುವ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು.
ಇಬ್ಬರು ಕೂಡ ಪರಸ್ಪರ ಪ್ರೀತಿಸಿ ಒಟ್ಟಿಗೆ ಕೂಡ ಓಡಾಡಿದ್ದರು. ಯುವತಿ ಬಿಎ ವ್ಯಾಸಂಗ ಮಾಡುತ್ತಿದ್ದಳು, ಯುವಕ ವ್ಯವಸಾಯ ಮಾಡುತ್ತಿದ್ದನು. ಓದು ಮುಗಿದ ಬಳಿಕ ಮದುವೆಯಾಗೋಣ ಎಂದು ದರ್ಶನ್ ಹೇಳಿದ್ದ.ಆದರೆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ.
ಇದರಿಂದ ಮನನೊಂದ ದರ್ಶನ್ ವಿಷ ಸೇವಿಸಿದ್ದಾನೆ. ಕೂಡಲೇ ಪೋಷಕರು ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಯುವಕ ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
Operation Devil Hunt ಆಪರೇಷನ್ ಡೆವಿಲ್ ಹಂಟ್ ಮೂಲಕ 1,308 ಜನ ಅರೆಸ್ಟ್
KUMBH CROWD MASSIVE JAM ಮಹಾಕುಂಭಮೇಳದಲ್ಲಿ ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್, ವೈರಲ್ ವಿಡಿಯೋ ನೋಡಿ
PM Modi ಮೂರು ದಿನ ಉಪವಾಸವಿದ್ದು ಮೋದಿ ಸಂದರ್ಶನ ಮಾಡುವೆ: ಅಮೆರಿಕ ಪಾಡ್ಕಾಸ್ಟರ್