newsics.com
ಬೆಂಗಳೂರು: ಶೇ.75 ಹಾಜರಾತಿ ಕೊರತೆಯಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಪರೀಕ್ಷೆ ನಿರಾಕರಿಸಿದೆ.
ಹೀಗಾಗಿ ತರಗತಿಗಳಿಗೆ ನಿಯಮಿತವಾಗಿ ಹಾಜರಾಗದೆ ಶೇ 75ರಷ್ಟು ಹಾಜರಾತಿ ಕೊರತೆ ಎದುರಿಸುತ್ತಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಾಜರಾತಿ ಕೊರತೆಯಿರುವವರಿಗೆ ಕಳೆದ ಬಾರಿ ಎರಡು ಮತ್ತು ಮೂರನೇ ಹಂತದ ಪರೀಕ್ಷೆ ಬರೆಯಲು ಮಂಡಳಿ ಅವಕಾಶ ನೀಡಿತ್ತು. ಆದರೆ ಈ ಬಾರಿ ಯಾವುದೇ ಪರೀಕ್ಷೆ ಬರೆಯಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದೆ.
2024ನೇ ಸಾಲಿನಿಂದ ಎಸ್ಎಸ್ಎಲ್ಸಿಗೆ ಮೂರು ಪರೀಕ್ಷೆಗಳನ್ನು ಪರಿಚಯಿಸಿದ್ದು, ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದವರು, ಇನ್ನಷ್ಟು ಅಂಕಗಳನ್ನು ಪಡೆಯಲು ಬಯಸುವವರು ಹಾಗೂ ಅನುತ್ತೀರ್ಣರಾದವರು ಉಳಿದ ಎರಡು ಪರೀಕ್ಷೆಗಳನ್ನು ಬರೆಯಬಹುದು.
ಹಾಜರಾತಿ ಕೊರತೆ ಕಾರಣಕ್ಕೆ ಮೊದಲ ಪರೀಕ್ಷೆಯಿಂದ ವಂಚಿತರಾದವರಿಗೆ ಉಳಿದ ಎರಡು ಪರೀಕ್ಷೆ ತೆಗೆದುಕೊಳ್ಳಲು ಕಳೆದ ವರ್ಷ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ
ಶೇ.75ರಷ್ಟು ಹಾಜರಾತಿ ಕೊರತೆ ಇರುವವರಿಗೆ ಮೂರೂ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ.
10ನೇ ತರಗತಿಯಲ್ಲಿ ಕಡಿಮೆ ಹಾಜರಾತಿ ಇರುವ ಮಕ್ಕಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನೂ ಎಸ್ಎಟಿಎಸ್ ತಂತ್ರಾಂಶದಲ್ಲಿ ದಾಖಲಿಸದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.
ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಹಾಗೂ ಅನುತ್ತೀರ್ಣರಾದವರನ್ನು 2025-26ನೇ ಸಾಲಿನಲ್ಲಿ 10ನೇ ತರಗತಿಗೆ ಮರುದಾಖಲಾಗುವಂತೆ ಮಂಡಳಿ ಸೂಚಿಸಿದೆ.
2024ರ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಹಾಜರಾತಿ ಕೊರತೆ ಇದ್ದ 15 ಸಾವಿರ ವಿದ್ಯಾರ್ಥಿಗಳು ಎರಡನೇ ಮತ್ತು ಮೂರನೇ ಪರೀಕ್ಷೆ ಬರೆದಿದ್ದರು. 2025ರ ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 21ರಿಂದ ಏ.4ರವರೆಗೆ ನಡೆಯಲಿದೆ.
stabbed four people ರಜೆ ನೀಡದ್ದಕ್ಕೆ ಮೇಲಾಧಿಕಾರಿ ಸೇರಿ ನಾಲ್ವರನ್ನು ಇರಿದ ಸರ್ಕಾರಿ ನೌಕರ