newsics.com
ಕಾರವಾರ: ಉತ್ತರ ಕನ್ನಡ ಯುವ ಮೀನುಗಾರರ ಸಂಘರ್ಷ ಸಮಿತಿ ವತಿಯಿಂದ ಫೆ.9 ಭಾನುವಾರದಂದು ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ 2025 ನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಬೈತಖೋಲದ ಬ್ರೇಕ್ ವಾಟರ್ ಬಳಿ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ನಡೆಯಲಿದ್ದು, ನಿಗಧಿತ ಅವಧಿಯಲ್ಲಿ ಹೆಚ್ಚು ಮೀನು ಹಿಡಿದ ಸ್ಪರ್ಧಾಳುವಿಗೆ ಬಹುಮಾನ ನೀಡಲಾಗುವುದು.
ಕಾರವಾರದಲ್ಲಿ ಕಳೆದ ವರ್ಷ ಸಿಕ್ಕ ಅತೀ ದೊಡ್ಡ ಬಂಗುಡೆ ಮೀನನ್ನು ಪ್ರದರ್ಶನಕ್ಕೆ ಇರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಉದ್ಘಾಟಿಸಲಿದ್ದು, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿರಲಿದ್ದಾರೆ.