newsics.com
ಬಿಗ್ ಬಾಸ್ ಕನ್ನಡ 11ನೇ ಸೀಸನ್ನ ಕೊನೆಯ ಶನಿವಾರದ ವಾರದ ಕತೆ ಕಿಚ್ಚನ ಜತೆ ಪಂಚಾಯಿತಿ ಎಪಿಸೋಡ್ನಲ್ಲಿ ಗೌತಮಿ ಜಾಧವ್ ಅವರು ಮನೆಯಿಂದ ಹೊರಬಂದಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗಲು ಗೌತಮಿ, ಮಂಜು, ರಜತ್, ಭವ್ಯಾ, ಧನ್ರಾಜ್ ನಾಮಿನೇಟ್ ಆಗಿದ್ದರು. ಮೋಕ್ಷಿತಾ, ತ್ರಿವಿಕ್ರಮ್ ಮತ್ತು ಹನುಮಂತು ಪಿನಾಲೆ ವೇದಿಕೆಗೆ ಆಯ್ಕೆ ಆಗಿದ್ದಾರೆ.
ಭಾನುವಾರದ ಎಪಿಸೋಡ್ ಸೂಪರ್ ಸಂಡೇ ವಿಥ್ ಬಾದ್ ಶಾ ಸುದೀಪ ಕಾರ್ಯಕ್ರಮದಲ್ಲಿ ಧನ್ರಾಜ್ ಅವರನ್ನು ಎಲಿಮಿನೇಟ್ ಮಾಡಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ.
ಬಿಗ್ಬಾಸ್ ಮನೆಯಲ್ಲಿ ಈ ವಾರ ಮಿಡ್ವೀಕ್ ಎಲಿಮಿನೇಷನ್ ಘೋಷಣೆ ಮಾಡಲಾಗಿತ್ತು. ಆದರೆ ಅನಿರೀಕ್ಷಿತ ಕಾರಣಗಳಿಂದ ಬಳಿಕ ಅದನ್ನು ರದ್ದು ಮಾಡಿ ಡಬಲ್ ಎಲಿಮಿನೇಶನ್ಗೆ ಹಾಕಲಾಗಿತ್ತು. ಅದರಂತೆ ಶನಿವಾರ ಕಿಚ್ಚನ ಪಂಚಾಯಿತಿಯಲ್ಲಿ ಓರ್ವ ಸ್ಪರ್ಧಿಯನ್ನು ಹೊರ ಕಳುಹಿಸಲಾಗಿದ್ದು, ಎರಡನೇ ಸ್ಪರ್ಧಿ ಭಾನುವಾರದ ಎಪಿಸೋಡ್ನಲ್ಲಿ ಎಲಿಮಿನೇಟ್ ಆಗಿ ಹೊರಬರಲಿದ್ದಾರೆ.
ಶನಿವಾರದ ಸಂಚಿಕೆಯಲ್ಲಿ ಬಿಗ್ಬಾಸ್ ಸೀಸನ್ 11 ವಿನ್ನರ್ ಪಡೆಯುವ ಕಪ್ ಅನಾವರಣವಾಗಿದೆ. ಹಾರುವ ರೆಕ್ಕೆಯ ಮಧ್ಯೆ ಬಿಬಿಕೆ11 ಸೀಸನ್ನ ಕಣ್ಣಿನ ಲೋಗೋ ಡಿಸೈನ್ ಮಾಡಲಾಗಿದೆ.
ಇಬ್ಬರು ಸ್ಪರ್ಧಿಗಳು ಈ ವಾರ ಮನೆಯಿಂದ ಹೊರಬಿದ್ದರೆ ಗ್ರ್ಯಾಂಡ್ ಫಿನಾಲೆ ವಾರಕ್ಕೆ ಒಟ್ಟು ಆರು ಮಂದಿ ಉಳಿಯುತ್ತಾರೆ. ಈಗಾಗಲೇ ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ನೇರವಾಗಿ ಫಿನಾಲೆ ಪ್ರವೇಶ ಪಡೆದಿದ್ದಾರೆ. ಇಂದಿನ ವಾರದಲ್ಲಿ ಯಾರು ಸೇಫ್ ಆಗಿ ಫಿನಾಲೆ ವಾರಕ್ಕೆ ಕಾಲಿಡುತ್ತಾರೆ ಎಂಬುದನ್ನು ನಾಳಿನ ಸಂಚಿಕೆಯವರೆಗೆ ಕಾದು ನೋಡಬೇಕಿದೆ.
Niveditha Gowda ವೈಟ್ ಬಿಕಿನಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ನಿವೇದಿತಾ ಗೌಡ
Good News ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ
21 ವರ್ಷದ ಬ್ಯೂಟಿಗಾಗಿ ಬಟ್ಟೆ ಬಿಚ್ಚಿದ ಅಂಕಲ್ : ಯುವತಿ ಸಿಕ್ಕಿದ್ದೇ ರೋಚಕ
Prajwal Revanna ಕೋರ್ಟ್ನಲ್ಲಿ ತನ್ನದೇ ವಿಡಿಯೋ ನೋಡಿದ ಪ್ರಜ್ವಲ್ ರೇವಣ್ಣ