newsics.com
ಹಾಸನ: ಪ್ರೇಮ ನಿರಾಕರಣೆ ಹಿನ್ನೆಲೆ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಚಾಕು ಇರಿದಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಮನುಕುಮಾರ್ ಹಾಗೂ ತಾನು ಮದುವೆಯಾಗಿದ್ದು, ನೋಂದಣಿಯನ್ನೂ ಮಾಡಿಸಿಕೊಂಡಿದ್ದೇವೆ ಎಂದು ಬರೆದು ಎಲ್ಲ ದಾಖಲೆಗಳ ಸ್ಕ್ರೀನ್ ಶಾಟ್ಗಳನ್ನು ಆರೋಪಿ ಭವಾನಿ ತನ್ನ ತಾಯಿಗೆ ಕಳುಹಿಸಿದ್ದಾಳೆ ಎಂದು ಹೇಳಲಾಗಿದ್ದು, ಅದರ ಪ್ರತಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಮನುಕುಮಾರ್ಗೂ ನನಗೂ 2023 ನ.10 ರಂದು ಮದುವೆ ಆಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 2024 ಅ.25 ರಂದು ಇಬ್ಬರೂ ನೋಂದಣಿ ಮಾಡಿಸಿಕೊಂಡಿದ್ದೇವೆ. ಮದುವೆ ಸರ್ಟಿಫಿಕೇಟ್ ಕೂಡ ಇದೆ. ಹೀಗಿದ್ದರೂ ಮನುಕುಮಾರ್ ಬೇರೆ ಹುಡುಗಿಯರೊಂದಿಗೆ ಅಫೇರ್ ಇಟ್ಟುಕೊಂಡಿದ್ದಾನೆ. ಹೊಸ ವರ್ಷದ ಪಾರ್ಟಿಗೂ ಹುಡುಗಿಯನ್ನು ಕರೆದುಕೊಂಡು ಹೋಗಿದ್ದ. ಅದು ಗೊತ್ತಾಗಿಯೇ ನಾನು ಅಲ್ಲಿಗೆ ಹೋಗಿ ಜಗಳ ಮಾಡಿದೆ. ಈ ವಿಚಾರ ಗೊತ್ತಿದ್ದರೂ ಅವನ ಮನೆಯವರು ಸುಳ್ಳು ಹೇಳುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಭವಾನಿ ಮನವಿ ಮಾಡಿಕೊಂಡಿದ್ದಾಳೆ.
ಬಡಾವಣೆ ಠಾಣೆ ಪೊಲೀಸರ ಬಂಧನಕ್ಕೊಳಗಾಗಿದ್ದ ಆರೋಪಿ ಭವಾನಿಯನ್ನು ಗುರುವಾರ ಸಂಜೆಯೇ ನಾಲ್ಕನೇ ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
DYSP arrested ದೂರು ನೀಡಲು ಬಂದಾಕೆ ಜತೆ ಠಾಣೆಯಲ್ಲೇ ರಾಸಲೀಲೆ ನಡೆಸಿದ್ದ ಡಿವೈಎಸ್ಪಿ ರಾಮಚಂದ್ರಪ್ಪ ಬಂಧನ
RBI loan policy ಸಾಲ ನಿಯಮ ಬಿಗಿಗೊಳಿಸಿದ ಆರ್ಬಿಐ, ಪರ್ಸನಲ್ ಲೋನ್ ಮತ್ತಷ್ಟು ಕಠಿಣ
Parental consent ಸಾಮಾಜಿಕ ಮಾಧ್ಯಮ ಖಾತೆ ತೆರೆಯಲು ಪೋಷಕರ ಒಪ್ಪಿಗೆ ಅವಶ್ಯ: ಕೇಂದ್ರ ಸರ್ಕಾರ