newsics.com
ಬೆಳಗಾವಿ: ಮುಸ್ಲಿಮರೇ ಶೇ.95ರಷ್ಟು ವಕ್ಫ್ ಆಸ್ತಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ನಡೆದ ವಕ್ಫ್ ನೋಟಿಸ್ ಚರ್ಚೆಗೆ ಉತ್ತರಿಸಿದ ಸಚಿವ ಜಮೀರ್, ವಿಜಯಪುರದಲ್ಲಿ ನಡೆದ ವಕ್ಫ್ ಅದಾಲತ್ಗೆ ಯತ್ನಾಳ್ ಬರಲಿಲ್ಲ. ಬಳಿಕ ಗೊಂದಲ ಶುರು ಮಾಡಿದ್ರುಳ ಲ ಲಖಜಕರೈತರ ಜಮೀನು ವಕ್ಫ್ ಹೆಸರಲ್ಲಿ ಮಾಡಿ ಎಂದು ನಾನು ಸೂಚನೆ ಕೊಡಲಿಲ್ಲ. ರಾಜ್ಯದಲ್ಲಿ 1.28 ಲಕ್ಷ ಕೋಟಿ ವಕ್ಫ್ಗೆ ಸೇರಿದ ಆಸ್ತಿ ಇದೆ. ಇದು ದಾನಿಗಳು ಕೊಟ್ಟಿದ್ದು. 17,963 ಎಕರೆ ವಕ್ಫ್ ಆಸ್ತಿ ಖಾಸಗಿಯವರು ಕಬಳಿಸಿದ್ದಾರೆ. ಇದರಲ್ಲಿ ಶೇ.95ರಷ್ಟು ಮುಸ್ಲಿಮರೇ ಕಬಳಿಸಿದ್ದಾರೆ. ಈ ಕಬಳಿಕೆ ತೆರವಿಗೆ ನೋಟಿಸ್ ಕೊಟ್ಟಿದ್ದೇವೆಯೇ ಹೊರತು ರೈತರು, ಮಠ ಮಂದಿರಗಳ ಜಮೀನಿಗೆ ನೋಟಿಸ್ ಕೊಟ್ಟಿಲ್ಲ ಎಂದರು.
ಯಾವುದೇ ಕಾರಣಕ್ಕೂ ದೇವಸ್ಥಾನ, ರೈತರ ಆಸ್ತಿ ವಾಪಸ್ ಪಡೆದುಕೊಳ್ಳುವ ಉದ್ದೇಶವಿಲ್ಲ. ವಕ್ಫ್ ಆಸ್ತಿ ಕಬಳಿಕೆ ವಿಚಾರವಾಗಿ ಎಲ್ಲಾ ಸರ್ಕಾರದ ಅವಧಿಯಲ್ಲಿ ನೋಟಿಸ್ ನೀಡಲಾಗಿದೆ. ಬಿಜೆಪಿ ಅವಧಿಯಲ್ಲಿ 2008ರಿಂದ 2013ರವರೆಗೆ 1,100, 2019-23ರವರೆಗೆ 4,567 ನೋಟಿಸ್ ಕೊಡಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3,286 ನೋಟಿಸ್ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
vijay mallya: ವಿಜಯ್ ಮಲ್ಯ, ನೀರವ್ ಮೋದಿಯ 15,000 ಕೋಟಿ ಆಸ್ತಿ ಬ್ಯಾಂಕ್ಗಳಿಗೆ ಜಮಾ