newsics.com
ಚಿಕ್ಕಬಳ್ಳಾಪುರ: ಅತಿಯಾದ ಚಳಿ, ಶೀತ ಗಾಳಿ ಹಾಗೂ ಇತ್ತೀಚೆಗೆ ಸುರಿದ ಮಳೆಯಿಂದಾಗಿ ನುಗ್ಗೆಕಾಯಿಗೆ ಭಾರೀ ಬೇಡಿಕೆ ಬಂದಿದೆ.
ವಿಟಮಿನ್ ಸಿ ಹೆಚ್ಚಿರುವ ನುಗ್ಗೆಕಾಯಿಯನ್ನು ಚಳಿಗಾಲದಲ್ಲಿ ತಿನ್ನುವುದರಿಂದ ದೇಹಕ್ಕೆ ಒಂದಷ್ಟು ಹಿತಕಾರಿ ಪ್ರಯೋಜನಗಳು ಸಿಗುತ್ತವೆ. ಇದರ ಸೇವನೆಯಿಂದ ಶೀತ, ನೆಗಡಿಯಿಂದ ದೂರ ಇರಬಹುದು. ಹೆಚ್ಚು ಶೀತಗಾಳಿ ಬೀಸುತ್ತಿರುವ ಕಾರಣ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಹೀಗಾಗಿ ನುಗ್ಗೆಕಾಯಿಗೆ ಮೊರೆಹೋಗುತ್ತಿದ್ದಾರೆ. ಇಙಥ ಬೇಡಿಕೆಯಿಂದಾಗಿ ನುಗ್ಗೆಕಾಯಿ ಬೆಲೆ ಕೇಳಿದರೆ ಬೆಚ್ಚಿಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಬಳ್ಳಾಪುರ ಭಾಗದಲ್ಲಿ ಹೆಚ್ಚು ನುಗ್ಗೆಕಾಯಿ ಬೆಳೆಯುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಲ್ಲಿಯೂ ನುಗ್ಗೆಕಾಯಿ ಸಿಗುತ್ತಿಲ್ಲ. ಬಾಂಬೆ ಕಡೆಯಿಂದ ನುಗ್ಗೆಕಾಯಿ ತರಿಸಿ ಮಾರಾಟ ಮಾಡುತ್ತಿದ್ದಾರೆ.
ನುಗ್ಗೆಕಾಯಿ ತಿನ್ನುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಹೀಗಾಗಿ ಈಗಿನ ವಾತಾವರಣಕ್ಕೆ ನುಗ್ಗೆಕಾಯಿ ಉತ್ತಮ ಎಂದು ಎಲ್ಲರೂ ನುಗ್ಗೆಕಾಯಿ ಬೇಕೆನ್ನುವವರು ಜಾಸ್ತಿಯಾಗಿದ್ದಾರೆ. ಒಂದು ಕೆ.ಜಿ. ನುಗ್ಗೆಕಾಯಿಗೆ 350 ರೂ. ಕೊಟ್ಟು, ತಂದುಕೊಡುವವರಿಗೆ 100 ರೂಪಾಯಿ ಕೊಟ್ಟು, 500 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಪ್ರತಿದಿನ 100-150 ಕೆಜಿ ಮಾರಾಟವಾಗುತ್ತಿದೆ. ಒಂದು ನುಗ್ಗೆಕಾಯಿ ಬೆಲೆ 30 ರಿಂದ 32 ರೂಪಾಯಿ ಆದರೂ ಜನ ನುಗ್ಗೆಕಾಯಿ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಟೊಮೇಟೊ ಬೆಳೆಗಾರರ ಸಂಕಟ:
ಒಂದು ಕಡೆ ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಾಗಿ, ಬೆಲೆ ಜಾಸ್ತಿಯಾದರೆ ಟೊಮೇಟೋ ಬೆಳೆಗಾರರದ್ದೇ ಚಿಂತೆಯಾಗಿದೆ. ಈ ಚಳಿಯ ವಾತಾವರಣದಿಂದ ಹಣ್ಣಾಗುತ್ತಿಲ್ಲ. ಮಾರುಕಟ್ಟೆಗೆ ಕಾಯಿ ಟೊಮೇಟೊ ತಂದರೆ ಯಾರೂ ತೆಗೆದುಕೊಳ್ಳುತ್ತಿಲ್ಲ. ಇಂಥ ಸಂಕಟದಲ್ಲಿ ಟೊಮೇಟೋ ಬೆಳೆಗಾರರು ಸಿಲುಕಿದ್ದಾರೆ.
Jeeva Death case ಭೋವಿ ನಿಗಮ ಹಗರಣ: ಜೀವಾ ಸಾವಿನ ತನಿಖೆಗೆ ಸಿಬಿಐ ಎಸ್ಪಿ ನೇತೃತ್ವದಲ್ಲಿ ಎಸ್ಐಟಿ ರಚಿಸಿದ ಹೈಕೋರ್ಟ್
Allu Arjuna ಪುಷ್ಪ 2′ ಪ್ರಚಾರ ಮಾಡಲು ಡಿ.8ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಅಲ್ಲು ಅರ್ಜುನ್