newsics.com
ಪುಷ್ಪ-2′ ರಿಲೀಸ್ ಗೆ ಕ್ಷಣಗಣನೆ ಆರಂಭವಾಗಿದೆ. ವರ್ಲ್ಡ್ ವೈಡ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ‘ಪುಷ್ಪ 2’ ಸಿನಿಮಾ ಪ್ರಚಾರಕ್ಕಾಗಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದ ಪ್ರಮುಖ ನಗರಗಳಿಗೆ ಭೇಟಿ ಕೊಡುತ್ತಿದ್ದಾರೆ. ಆದ್ರೆ ಈ ತಂಡ ಕರುನಾಡಿಗಿನ್ನೂ ಎಂಟ್ರಿ ಕೊಟ್ಟಿಲ್ಲ.
ಕರ್ನಾಟಕದಲ್ಲಿ ನಡೆಯಬೇಕಿದ್ದ ಪ್ರೀ-ರಿಲೀಸ್ ಈವೆಂಟ್ ರದ್ದಾಗಿದೆ. ಏಕೆ ಹೀಗಾಯಿತು ಎಂಬ ಪ್ರಶ್ನೆ ಎದ್ದಿದೆ. ಕನ್ನಡ ಮಾತನಾಡಲು ಬರದ ಹಿನ್ನೆಲೆಯಲ್ಲಿ ಈವೆಂಟ್ ಕ್ಯಾನ್ಸಲ್ ಮಾಡಿರುವ ಸಾಧ್ಯತೆಗಳಿವೆ.
ಈಗಾಗಲೇ ಮುಂಬೈ, ಕೊಚ್ಚಿ, ಹೈದರಾಬಾದ್, ಪಾಟ್ನಾ, ಚೆನ್ನೈನಲ್ಲಿ ಪ್ರಮೋಶನಲ್ ಈವೆಂಟ್ಗಳು ನಡೆದಿವೆ. 15 ದಿನಗಳ ಹಿಂದೆ ಬೆಂಗಳೂರಲ್ಲಿ ಪುಷ್ಪ 2 ಚಿತ್ರದ ಈವೆಂಟ್ ನಡೆಸಲು ಎಲ್ಲಾ ಸಿದ್ಧತೆಗಳಾಗಿದ್ದವು. ಅದಕ್ಕಂತಾನೇ ಸ್ಪೆಷಲ್ ಅನೌನ್ಸ್ಮೆಂಟ್ ಟೀಸರ್ ಅನ್ನೂ ಪುಷ್ಪ 2 ತಂಡ ರೆಡಿ ಮಾಡಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಬೆಂಗಳೂರಿಗೆ ಬಾರದಿರಲು ನಿರ್ಧಾರ ಮಾಡಿದ್ದಾರೆ.
ಇನ್ನು ಅಲ್ಲು ಅರ್ಜುನ್ ಅವರಿಗೆ ಕನ್ನಡ ಮಾತನಾಡಲು ಬರೋದಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪುಷ್ಪ 2 ಚಿತ್ರದ ಈವೆಂಟ್ ಕ್ಯಾನ್ಸಲ್ ಆಗಿದೆ ಅಂತಾ ಎಲ್ಲಾ ಕಡೆ ಸುದ್ದಿಯಾಗುತ್ತಿದೆ. ಆದ್ರೆ ಅದು ಸುಳ್ಳು. ಬೆಂಗಳೂರಿನಲ್ಲಿ ಹೆಚ್ಚಾದ ಮಳೆಯಿಂದ ಪುಷ್ಪ 2 ಚಿತ್ರದ ಈವೆಂಟ್ ಕ್ಯಾನ್ಸಲ್ ಆಗಿದೆ ಅಷ್ಟೇ.
ಅಲ್ಲು ಅರ್ಜುನ್ ಬೆಂಗಳೂರಿಗೆ ಬರುತ್ತಿಲ್ಲವೆಂದು ಕೆಲ ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ. ಇದೇ ಭಾನುವಾರ ಅಂದ್ರೆ 8ರಂದು ಬೆಂಗಳೂರಿಗೆ ಅಲ್ಲು ಅರ್ಜುನ್ ಬರುತ್ತಿದ್ದಾರೆ ಅಂತಾ ವಿತರಕ ವಸೀಮ್ ಮಾಹಿತಿ ಕೊಟ್ಟರು.