newsics.com
ಚಿತ್ರದುರ್ಗ : ಪತಿಯ ಸಾವಿನಿಂದ ಮನನೊಂದ ಪತ್ನಿ ಹಾಗೂ ಪುತ್ರಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದ ಚಿಕ್ಕಂದವಾಡಿಯಲ್ಲಿ ನಡೆದಿದೆ.
ಗೀತಾ (45), ಲಾವಣ್ಯ (17) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ವಾರದ ಹಿಂದೆಯೇ ತಾಯಿ ಮಗಳು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇಂದು ಕೊಳೆತ ಸ್ಥಿತಿಯಲ್ಲಿ ತಾಯಿ ಮತ್ತು ಮಗಳ ಶವಗಳು ಪತ್ತೆಯಾಗಿವೆ. ಪತಿ ಸಾವಿನಿಂದ ಖಿನ್ನತೆಗೆ ಒಳಗಾಗಿ ಗೀತಾ ಹಾಗೂ ಪುತ್ರಿ ಲಾವಣ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
6 ತಿಂಗಳ ಹಿಂದೆ ಗೀತಾಪತಿ ಬಸವರಾಜ್ ಹೃದಯಘಾತದಿಂದ ಸಾವನ್ನಪ್ಪಿದ್ದರು. ಪತಿ ಬಸವರಾಜ್ ಸಾವಿನಿಂದ, ಗೀತಾ ಹಾಗೂ ಮಗಳು ಲಾವಣ್ಯ ತೀವ್ರವಾಗಿ ಮನನೊಂದಿದ್ದರು ಹಾಗಾಗಿ ಒಂದು ವಾರದ ಹಿಂದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.