newsics.com
ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬಾ ದರ್ಶನೋತ್ಸವ ಭಾನುವಾರ(ನ.3) ಕೊನೆಗೊಳ್ಳಲಿದೆ. ಅಕ್ಟೋಬರ್ 24ರಿಂದ ಆರಂಭಗೊಂಡಿದ್ದ ದೇವಿ ದರ್ಶನೋತ್ಸವಕ್ಕೆ ಭಾನುವಾರ ಮಧ್ಯಾಹ್ನ ತೆರೆಬೀಳಲಿದೆ.
ಹಾಸನಾಂಬಾ ದರ್ಶನೋತ್ಸವದ ಸಾರ್ವಜನಿಕ ದರ್ಶನ ಶನಿವಾರವೇ ಮುಕ್ತಾಯಗೊಂಡಿತು.
ಹಾಸನಾಂಬಾ ದೇವಿ ದರ್ಶನಕ್ಕೆ ಬೇರೆ ಬೇರೆ ಭಾಗಗಳಿಂದ ಭಕ್ತರು ಬಾರದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಕಳೆದ 10 ದಿನಗಳಿಂದ ನಡೆಯುತ್ತಿದ್ದ ಹಾಸನಾಂಬೆ ಉತ್ಸವಕ್ಕೆ ನಾಳೆ ಮಧ್ಯಾಹ್ನ 12 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಿದೆ.
ದೇಗುಲದ ಒಳ ಭಾಗದಲ್ಲಿ ನಡೆಯುತ್ತಿರುವ ಸ್ವಚ್ಛತೆ, ಸಿಂಗಾರ, ಪೂಜಾ ಕೈಂಕರ್ಯ ಹಾಗೂ ಶನಿವಾರ ರಾತ್ರಿ ಹಾಸನಾಂಬೆ ದೇಗುಲದ ಹೊರಭಾಗದ ಆವರಣದಲ್ಲಿ ಸಿದ್ದೇಶ್ವರ ಸ್ವಾಮಿ ಜಾತ್ರೆ ನಡೆಯಲಿದೆ. ಭಾನುವಾರ ಬೆಳಗ್ಗೆ 6 ಗಂಟೆಗೆ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವ ಜರುಗಲಿದ್ದು. ಕೆಂಡೋತ್ಸವ ನಂತರ ಹಾಸನಾಂಬೆ ದೇವಿಗೆ ಪೂಜೆ ಆಗಲಿದೆ.
ಭಾನುವಾರ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹಾಗೂ ಗಣ್ಯರ ಸಮ್ಮುಖದಲ್ಲಿ ದೇಗುಲ ಬಾಗಿಲು ಮುಚ್ಚಲ್ಪಡುತ್ತದೆ.
ದಾಖಲೆ ಆದಾಯ ಸಂಗ್ರಹ:
ಅದಾಯ ಸಂಗ್ರಹದಲ್ಲಿಯೂ ಈ ಬಾರಿ ಹಾಸನಾಂಬಾ ದೇವಾಲಯ ದಾಖಲೆ ಬರೆದಿದೆ. ಎಂಟು ದಿನದಲ್ಲಿ 8 ಕೋಟಿ ರೂ. ಸಂಗ್ರಹವಾಗಿದೆ. ವಿಶೇಷ ಪಾಸ್, ಲಡ್ಡು ಪ್ರಸಾದ ಮಾರಾಟದಿಂದ 8 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಕಳೆದ ವರ್ಷ 14 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದು, ಈ ವರ್ಷ ಎಂಟು ದಿನದಲ್ಲಿ ಬರೋಬ್ಬರಿ 18 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಹಾಸನಾಂಬೆ ದೇವಾಲಯ ಆಡಳಿತ ಮಂಡಳಿಯ ಅವೈಜ್ಞಾನಿಕ ನಡೆಯಿಂದಾಗಿ ಹಾಸನಾಂಬೆ ಭಕ್ತರಿಗೆ ಸಂಕಷ್ಟ ಎದುರಾಗಿತ್ತು. ವಿವಿಐಪಿ ಪಾಸ್ ಪಡೆದು ಹಾಸನಾಂಬಾ ದರ್ಶನಕ್ಕೆ ಬಂದಿದ್ದಲ್ಲದೇ, ಪೊಲೀಸರ ಜತೆಯೂ ಭಕ್ತರು ವಾಗ್ವಾದ ಆರಂಭಿಸಿದ್ದರು. ರೊಚ್ಚಿಗೆದ್ದ ಭಕ್ತರನ್ನು ನಿಯಂತ್ರಣ ಮಾಡಲಾಗದೆ ಪೊಲೀಸರು, ಸಿಬ್ಬಂದಿ ಪರದಾಡುವಂತಾಗಿತ್ತು.
ಶ್ರೀನಗರ: ಜನನಿಬಿಡ ಪ್ರದೇಶದಲ್ಲೇ ಅಡಗಿದ್ದ ಪಾಕಿಸ್ತಾನದ ಉಗ್ರ, ಲಷ್ಕರ್ ಕಮಾಂಡರ್ ಉಸ್ಮಾನ್ ಎನ್ಕೌಂಟರ್