newsics.com
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಪಕ್ಷವು ಇದುವರೆಗೆ 71 ಅಭ್ಯರ್ಥಿಗಳನ್ನು ಘೋಷಿಸಿದೆ.
ಎರಡನೇ ಪಟ್ಟಿಯಲ್ಲಿ ನಾಗ್ಪುರ ದಕ್ಷಿಣ ಕ್ಷೇತ್ರದಿಂದ ಕೃಷ್ಣರಾವ್ ಪಾಂಡವ್, ವಾರ್ಧಾದಿಂದ ಶೇಖರ್ ಪ್ರಮೋದಬಾಬು ಶೆಂಡೆ, ರಾಳೇಗಾಂವ್ನಿಂದ ಪ್ರೊ.ವಸಂತ್ ಚಿಂದೂಜಿ ಪುರ್ಕೆ ಮತ್ತು ಜಲ್ನಾದಿಂದ ಕೈಲಾಸ್ ಕಿಸನ್ರಾವ್ ಗೊರ್ತಂಟ್ಯಾಲ್ ಅವರನ್ನು ಪಕ್ಷವು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಪಕ್ಷವು ಕಾಂದಿವಲಿ ಪೂರ್ವದಿಂದ ಕಾಲು ಬಧೇಲಿಯಾ ಮತ್ತು ಚಾರ್ಕೋಪ್ ಕ್ಷೇತ್ರದಿಂದ ಯಶವಂತ್ ಜಯಪ್ರಕಾಶ್ ಸಿಂಗ್ ರನ್ನು ಕಣಕ್ಕಿಳಿಸಿದೆ.
ಪಕ್ಷವು 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿತ್ತು. ನಿನ್ನೆ ಸಂಜೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ (CECs) ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಯಿತು. ಈ ಮಧ್ಯೆ, ಇಂಡಿಯಾ ಬ್ಲಾಕ್ ಮಿತ್ರ ಪಕ್ಷ ಸಮಾಜವಾದಿ ಪಕ್ಷ (SP) ಸಹ ಐದು ಸ್ಥಾನಗಳಿಗೆ ಒತ್ತಾಯಿಸುತ್ತಿದೆ.