newsics.com
ಬಿಗ್ ಬಾಸ್ ಕನ್ನಡ ಸೀಸನ್ 11 ಭಾನುವಾರ ಸಂಜೆ ಆರು ಗಂಟೆಯಿಂದ ಆರಂಭವಾಗಲಿದೆ.
ನಿನ್ನೆ ಕಲರ್ಸ್ ವಾಹಿನಿಯಲ್ಲಿ ನಡೆದ ರಾಜಾ ರಾಣಿ ರೀಲೋಡೆಡ್ ಫಿನಾಲೆ ಕಾರ್ಯಕ್ರಮದಲ್ಲಿ ನಾಲ್ವರು ಸ್ಪರ್ಧಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.
ಸದ್ಯಕ್ಕೆ ನಾಲ್ವರು ಸ್ಪರ್ಧಿಗಳ ಹೆಸರಷ್ಟೆ ಘೋಷಣೆ ಆಗಿದ್ದು ಇನ್ನೂ ಸುಮಾರು 12 ರಿಂದ 14 ಸ್ಪರ್ಧಿಗಳ ಹೆಸರು ಭಾನುವಾರ ಸಂಜೆ ಘೋಷಣೆ ಆಗಲಿದೆ. ಇಂದು ಸಂಜೆ ಸುದೀಪ್ ಘೋಷಣೆ ಮಾಡಲಿರುವ ಸ್ಪರ್ಧಿಗಳ ಹೆಸರುಗಳು ಮುಂಚಿತವಾಗಿಯೇ ಲೀಕ್ ಆಗಿದ್ದು, ಅವರಲ್ಲಿ ಯಾರು ಸ್ವರ್ಗಕ್ಕೆ ಹೋಗಲಿದ್ದಾರೆ ಯಾರು ನರಕಕ್ಕೆ ಹೋಗಲಿದ್ದಾರೆ ಎಂಬ ಮಾಹಿತಿ ಸಹ ಹೊರಬಿದ್ದಿದೆ.
ರಾಜಾ ರಾಣಿ ಫಿನಾಲೆಯಲ್ಲಿ ಗೌತಮಿ ಜಾಧವ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಅವರ ಹೆಸರುಗಳು ಘೋಷಣೆಯಾಗಿದೆ. ಲಾಯರ್ ಜಗದೀಶ್ ಮತ್ತು ಗೌತಮಿ ಜಾಧವ್ ಅವರುಗಳು ಸ್ವರ್ಗಕ್ಕೆ ಹೋಗಲಿದ್ದು, ಚೈತ್ರಾ ಕುಂದಾಪುರ ಮತ್ತು ಗೋಲ್ಡ್ ಸುರೇಶ್ ಅವರುಗಳು ನರಕಕ್ಕೆ ಹೋಗಲಿದ್ದಾರಂತೆ.
ಸೋಷಿಯಲ್ ಮೀಡಿಯಾದಿಂದ ಜನಪ್ರಿಯವಾದ ಆ ಬಳಿಕ ಗಿಚ್ಚಿ ಗಿಲಿ-ಗಿಲಿಗೂ ಹೋಗಿಬಂದಿರುವ ಧನರಾಜ್ ಅವರು ಬಿಗ್ಬಾಸ್ ಮನೆಗೆ ಹೋಗಲಿದ್ದಾರಂತೆ. ನಟರಾದ ಕೀರ್ತಿ ಧರ್ಮರಾಜ್ ಸಹ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ. ‘ನವಗ್ರಹ’ ಸಿನಿಮಾದಲ್ಲಿ ಇವರು ದರ್ಶನ್ ಜತೆ ನಟಿಸಿದ್ದರು. ನಟ ಉಗ್ರಂ ಮಂಜು ಸಹ ಈ ಬಾರಿ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ. ನಟಿಯರಾದ ಯಮುನಾ, ಭವ್ಯ, ಐಶ್ವರ್ಯಾ, ತ್ರಿವಿಕ್ರಮ್ ಮತ್ತು ಹಂಸ ಅವರುಗಳು ಸಹ ಬಿಗ್ಬಾಸ್ ಮನೆಯಲ್ಲಿದ್ದು, ಇವರೆಲ್ಲರೂ ಸ್ವರ್ಗದಲ್ಲಿ ಇರಲಿದ್ದಾರಂತೆ.
ನಟ ಶಿಶಿರ, ನಟಿ ಮೋಕ್ಷಿತ ಹಾಗೂ ಕಳೆದ ಬಾರಿ ಬಿಗ್ಬಾಸ್ಗೆ ಹೋಗಿದ್ದ ತುಕಾಲಿ ಸಂತೋಷ್ ಅವರ ಪತ್ನಿ ತುಕಾಲಿ ಮಾನಸ ಸಹ ಈ ಬಾರಿ ಬಿಗ್ಬಾಸ್ಗೆ ಹೋಗಲಿದ್ದಾರೆ. ಇವರ ಜತೆಗೆ ರಂಜಿತಾ ಸಹ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎಂದು ವರದಿಯಾಗಿದೆ.
ದಸರಾ ಸಿದ್ಧತೆ ನಡುವೆಯೇ ಮೈಸೂರಲ್ಲಿ ರೇವ್ ಪಾರ್ಟಿ, ದಾಳಿ ವೇಳೆ ಪೊಲೀಸರ ಮೇಲೆಯೇ ಹಲ್ಲೆ