newsics.com
ಗುಂಡ್ಲುಪೇಟೆ(ಚಾಮರಾಜನಗರ): ಅಂತ್ಯಕ್ರಿಯೆ ವೇಳೆ 42ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, 19 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ನಡೆದಿದೆ.
20ಕ್ಕೂ ಅಧಿಕ ಜನರು ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಮಂಜುನಾಥ್(30), ಶಿವಯ್ಯ(38), ಮುದ್ದಯ್ಯ(60), ಹೊನ್ನಯ್ಯ(42), ಮೂರ್ತಿ(55), ಪುಟ್ಟಮಾದಶೆಟ್ಟಿ(83), ಶಿವಯ್ಯ(45), ಚಿನ್ನಸ್ವಾಮಿ(55), ಉಮೇಶ್(32), ರಾಜೇಶ್(53), ಚಿಕ್ಕಯಾತಮ್ಮ(48), ಸರೋಜಮ್ಮ(40), ಪುಟ್ಟಹನುಮಮ್ಮ(40), ಚಂದ್ರಮ್ಮ(45), ಅಂಬಿಕಾ (34), ಲಲಿತಮ್ಮ(45), ರಾಜಮ್ಮ(45), ಜಯ(45), ಬೆಳ್ಳಮ್ಮ(65) ಗುಂಡ್ಲುಪೇಟೆ ಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಸವಾಪುರ ಗ್ರಾಮದ ವೃದ್ಧರೊಬ್ಬರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ಮೃತ ದೇಹವನ್ನು ಗ್ರಾಮಸ್ಥರು ಕೊಂಡೊಯ್ದಿದ್ದಾರೆ. ಚಿತೆಗೆ ಬೆಂಕಿ ಹಚ್ಚುವ ವೇಳೆ ಹೊಗೆ ಎದ್ದ ಪರಿಣಾಮ ಮರದಲ್ಲಿದ್ದ ಹೆಜ್ಜೇನುಗಳು ಶವ ಸಂಸ್ಕಾರಕ್ಕೆ ತೆರಳಿದ್ದ ಸುಮಾರು 42 ಮಂದಿಗೆ ಕಚ್ಚಿವೆ. ಈ ವೇಳೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೂ ಹೆಜ್ಜೇನು ಬೆಂಬಿಡದೆ ಕಚ್ಚಿದೆ. ಇದರಿಂದ ಕಡಿತಕ್ಕೋಳಗಾದವರ ಮುಖ, ಕೈ ಊದಿಕೊಂಡಿದೆ. ಕೆಲವರು ಪ್ರಾಥಮಿಕ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ. ಹೆಚ್ಚು ನೋವು ಕಾಣಿಸಿಕೊಂಡವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.
2025ರಲ್ಲಿ ಯೂರೋಪ್ ಸಂಘರ್ಷ, 5079ರಲ್ಲಿ ಪ್ರಪಂಚವೇ ಅಂತ್ಯ: ಭವಿಷ್ಯ ನುಡಿದ ಬಾಬಾ ವಂಗಾ