newsics.com
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆದ ಬಳಿಕ ದರ ಅವರ ಕೈದಿ ನಂಬರ್ ಸಖತ್ ಚರ್ಚೆಯಾದ ಬೆನ್ನಲ್ಲೆ ಕಲರ್ಸ್ ಕನ್ನಡದಲ್ಲಿ ‘ಶಾಂತಂ ಪಾಪಂ’ ಟೆಲಿ ಸರಣಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ನೋಡಿದ ಅನೇಕರಿಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ನೆನಪಾಗಿದೆ. ಇದೀಗ ಕಲರ್ಸ್ ಕನ್ನಡ ಪ್ರೋಮೊ ಹಂಚಿಕೊಂಡಿದೆ.
ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಅವರ ವಿಚಾರಣೆ ನಡೆಸಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಕುರಿತು ಭರ್ಜರಿ ಚರ್ಚೆಗಳು ನಡೆಯುತ್ತಿವೆ. ಅನೇಕರು ನಾನಾ ರೀತಿಯ ಮೀಮ್ಗಳನ್ನು ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಸಿನಿಮಾ ಮಾಡೋಕೆ ಕೆಲವರು ಟೈಟಲ್ ರಿಜಿಸ್ಟರ್ ಮಾಡುವ ಪ್ರಯತ್ನದಲ್ಲಿದ್ದಾರೆ. ಈ ಮಧ್ಯೆ ಧಾರಾವಾಹಿಯಲ್ಲಿ ದರ್ಶನ್ ಕಥೆ ಬಂತೇ ಎನ್ನುವ ಪ್ರಶ್ನೆ ಮೂಡಿದೆ.
ನಿನ್ನ ಟೈಮ್ ಚೆನ್ನಾಗಿದ್ದಾಗ್ಲೇ ನೀನು ತಗ್ಗಿ ಬಗ್ಗಿ ನಡೆದಿದ್ರೆ, ಇವತ್ತು ತಲೆ ತಗ್ಸೋ ಪರಿಸ್ಥಿತಿ ಬರ್ತಾ ಇರ್ಲಿಲ್ಲ ಅಲ್ವಾ..’ ಎಂದು ಪೊಲೀಸ್ ಇನ್ಸ್ಪೆಕ್ಟರ್ ತನ್ನ ಬಂಧನದಲ್ಲಿರುವ ನಾಯಕನಿಗೆ ಹೇಳುವುದರೊಂದಿಗೆ ಪ್ರೋಮೋ ಆರಂಭವಾಗುತ್ತದೆ. ನಂತರ, ‘ವಾಸು ಹಾಗೂ ಅಕ್ಕ ಮೊದಲು ತುಂಬಾ ಚೆನ್ನಾಗಿದ್ರು, ಅವರ ಜೀವ್ನದಲ್ಲಿ ನಟಿ ಬಂದ್ಮೇಲೆನೇ ಹೀಗಾಗಿದ್ದು..’ ಎಂದು ಸಹಾಯಕ ಹೇಳುವ ಮಾತು ಬರುತ್ತದೆ. ಇನ್ನು ಎರಡು ದಿನದಲ್ಲಿ ನೀನು ನನ್ನ ಕಣ್ಮುಂದೆ ಇರಲ್ಲ ಎಂದು ನಾಯಕನ ಪಾತ್ರಧಾರಿ ಎಣ್ಣೆ ಗ್ಲಾಸ್ಅನ್ನು ಕೈಯಲ್ಲಿ ಹಿಡಿದುಕೊಂಡು ಹೇಳುವ ಮಾತು ಬರುತ್ತದೆ. ಈ ಎಪಿಸೋಡ್ಗೆ ಡೇರ್ ಡೆವಿಲ್ ದೇವದಾಸ್ ಎಂದು ಹೆಸರಿಡಲಾಗಿದೆ. ಇದೀಗ ಈ ಪ್ರೋಮೊ ಸಖತ್ ವೈರಲ್ ಆಗುತ್ತಿದೆ. ಇದು ಪಕ್ಕಾ ರೇಣುಕಾ ಸ್ವಾಮಿ ಕಥೆನೇ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
4 ಗಂಟೆಗಳ ಹಿಂದೆ ಕಲರ್ಸ್ ಕನ್ನಡ ಪೋಸ್ಟ್ ಮಾಡಿದ ಪ್ರೋಮೋಗೆ ಸಾಕಷ್ಟು ಕಾಮೆಂಟ್ಗಳು ಕೂಡ ಬಂದಿವೆ. ‘ಹಾಗೇನಾದರೂ ದರ್ಶನ್ ರಿಲೀಸ್ ಆದ್ರೆ, ಈ ಎಪಿಸೋಡ್ನ ಪ್ರೊಡ್ಯೂಸರ್ಅನ್ನು ಶೆಡ್ಗೆ ಕರೆಯೋ ಸಾಧ್ಯತೆ ಕಾಣ್ತಾ ಇದೆ..’ ಎಂದು ತಮಾಷೆ ಮಾಡಿದ್ದಾರೆ.
ಕಲರ್ಸ್ ಕನ್ನಡ ಸ್ವಲ್ಪವೂ ಹಿಂಜರಿಯದೇ ಈ ವಿಚಾರ ಪ್ರಸಾರ ಮಾಡೋಕೆ ಮುಂದಾಗಿದ್ದನ್ನು ಮೆಚ್ಚಲೇಬೇಕು ಎಂದು ಬರೆದುಕೊಂಡಿದ್ದಾರೆ.
ಇದು ಖಂಡಿತವಾಗಿಯೂ ದರ್ಶನ್ ಅವರ ಸ್ಟೋರಿ ಎಂದು ಇನ್ನೊಬ್ಬರು ಬರೆದಿದ್ದರೆ, ನಿಮ್ಮ ಧೈರ್ಯವನ್ನು ಮೆಚ್ಚಲೇಬೇಕು ಎಂದು ಮತ್ತೊಬ್ಬರು ಕಾಮೆಂಟ್ ಪೋಸ್ಟ್ ಮಾಡಿದ್ದಾರೆ.
ಹಾಟ್ ಲುಕ್ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ‘ಟೋಬಿ’ ಚೆಲುವೆ ಚೈತ್ರ ಆಚಾರ್
ತುಳು ಆಸಕ್ತರಿಗೆ ಸಿಹಿ ಸುದ್ದಿ! ಗೂಗಲ್ ಟ್ರಾನ್ಸ್ಲೇಟ್ಗೆ ತುಳು ಸೇರ್ಪಡೆ