newsics.com
2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಅಧಿಕೃತವಾಗಿ ಪ್ರಕಟಿಸಿದೆ.
https://youtube.com/shorts/7P5j592ICRU?si=brWLJ4hEetaflYiu
ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟಾರೆ ಶೇಕಡಾ 94.10% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಉಡುಪಿಯ ಪ್ರಥಮ, ದಾವಣಗೆರೆಯ ಭರತ್, ಬೆಂಗಳೂರು ಉತ್ತರದ ಧನುಷ್, ಚಿಕ್ಕೋಡಿಯ ಪ್ರಾರ್ಥನ, ವಿಜಯಪುರ ಸೌಜನ್ಯ, ಚಿಕ್ಕಮಂಗಳೂರಿನ ಬೃಂದಾ, ರಾಯಚೂರಿನ ಸುಖದೇವಾ 625 ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಇನ್ನೂ ಕಳೆದ ಬಾರಿ 93.94% ಫಲಿತಾಂಶ ಪಡೆದಿದ್ದ ಉಡುಪಿ ಜಿಲ್ಲೆ ಈ ಬಾರಿ 98.18% ಪಡೆದು ರಾಜ್ಯಕ್ಕೆ 2ನೇ ಸ್ಥಾನ ಪಡೆದರೇ, 98.09% ಫಲಿತಾಂಶ ಪಡೆದ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ. 2024-2025 ರಲ್ಲಿ 56.89 ಫಲಿತಾಂಶ ಪಡೆದಿದ್ದ ಕಲಬುರಗಿ ಈ ಬಾರಿ 85.06% ಫಲಿತಾಂಶದೊಂದಿಗೆ ಕೊನೇ ಸ್ಥಾನಕ್ಕೆ ಪಡೆದುಕೊಂಡಿದೆ.
https://www.newsics.com/2026/04/23/actress-divyanka-sirohi-dies-of-heart-attack-at-the-age-of-30/