Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಎಂಬ್ರಾಯ್ಡರಿ ಫ್ಯಾಕ್ಟರಿ ಕಟ್ಟಿ ಆರು ಕೋಟಿ ರೂಪಾಯಿ ಕಳೆದುಕೊಂಡ ನಟ ರಮೇಶ್‌ ಭಟ್!
ಕರ್ನಾಟಕಪ್ರಮುಖಮನರಂಜನೆ

ಎಂಬ್ರಾಯ್ಡರಿ ಫ್ಯಾಕ್ಟರಿ ಕಟ್ಟಿ ಆರು ಕೋಟಿ ರೂಪಾಯಿ ಕಳೆದುಕೊಂಡ ನಟ ರಮೇಶ್‌ ಭಟ್!

Share
2 Min Read
SHARE

https://youtube.com/shorts/G0oN8U59OVY?si=rbIwZ4fR9fKtFNQ-

newsics.com

ಕನ್ನಡದ ಹಿರಿಯ ನಟ ರಮೇಶ್ ಭಟ್  ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ? ಕನ್ನಡದಲ್ಲಿ ಅಸಂಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದಾರೆ ನಟ ರಮೇಶ್ ಭಟ್‌. ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅನಂತ್‌ ನಾಗ್, ಶಂಕರ್‌ ನಾಗ್, ಅಂಬರೀಷ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ ರಮೇಶ್ ಭಟ್.

ಯಜಮಾನ ಧಾರಾವಾಹಿ ಮೂಲಕ ಇತ್ತೀಚೆಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ, ಖ್ಯಾತ ಸಿನಿಮಾ ನಟ ರಮೇಶ್‌ ಭಟ್‌ ಅವರು ಎಂಬ್ರಾಯ್ಡರಿ ಫ್ಯಾಕ್ಟರಿ ಕಟ್ಟಿದ್ದು, ಆರು ಕೋಟಿ ರೂಪಾಯಿ ಕಳೆದುಕೊಂಡ ಕಥೆಯನ್ನು Beyond Limits ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಶಂಕರ್‌ ನಾಗ್‌ ಹಾಗೂ ರಮೇಶ್‌ ಭಟ್‌ ಜತೆಯಾಗಿ ಮಾಡಿದ ಕೆಲಸ ಎಲ್ಲವೂ ಹಿಟ್‌ ಆಗುತ್ತಿತ್ತು. ಹೀಗಾಗಿ ಅವರಿಗೆ ಬೇರೆ ಡೈರೆಕ್ಟರ್‌ಗಳ ಸಂಪರ್ಕ ಕೂಡ ಇರಲಿಲ್ಲ. ಶಂಕರ್‌ ನಾಗ್‌ ಅವರು ಆಗಲೇ ಗಾರ್ಮೆಂಟ್‌ ಇಂಡಸ್ಟ್ರಿ ಆರಂಭಿಸಿದ್ದರು.

ನನಗೆ ಚಿಪ್ಸ್‌ ಫ್ಯಾಕ್ಟರಿ ಮಾಡಬೇಕು ಎಂಬ ಯೋಚನೆ ಇತ್ತು. ಮೋಹನ್‌ ಲಾಲ್‌ ಪತ್ನಿ ಶಂಕರ್‌ ನಾಗ್‌ ಅವರ ಪತ್ನಿ ಅರುಂಧತಿ ನಾಗ್‌ ಸ್ನೇಹ ಇತ್ತು. ಹೀಗಾಗಿ ಶಂಕರ್‌ ಅವರು ಪಾರ್ಟ್ನರ್‌ ಆಗಿದ್ದರು. ಶಂಕರ್‌ ಹೋದ್ಮೇಲೆ ನಾನು ಅರುಂಧತಿ ಬಳಿ, ಮುಂದೆ ಏನು ಮಾಡೋದು ಎಂದು ಸಲಹೆ ಕೇಳಿದೆ ಎಂದಿದ್ದಾರೆ ರಮೇಶ್‌ ಭಟ್.‌

ಆಗ ಅರುಂಧತಿ ಅವರು ಗಾರ್ಮೆಂಟ್‌ ಇಂಡಸ್ಟ್ರಿ ಶುರು ಮಾಡು, ನಾನೇ ವರ್ಷಕ್ಕೆ 6-7 ಲಕ್ಷ ರೂಪಾಯಿ ಕೊಡ್ತಿದ್ದೇನೆ, ಡಿಮ್ಯಾಂಡ್‌ ಇದೆ ಎಂದಿದ್ದರು. ಹೀಗಾಗಿ ನಾನು ಮಗನಿಗೋಸ್ಕರ ಎಂಬ್ರಾಯ್ಡರಿ ಫ್ಯಾಕ್ಟರಿ ಆರಂಭಿಸಿದೆ, ಅಂದು 150 ಕೆಲಸಗಾರರಿದ್ದರು. ಕೊರೊನಾ ವೈರಸ್‌ ವೇಳೆ ತುಂಬ ನಷ್ಟ ಆಯ್ತು, ನಾನು ಕೂಡ ವಯಸ್ಸಾಯ್ತು ಎಂದು ಆಗ ಸಿನಿಮಾ ಕೆಲಸ ಮಾಡಿರಲಿಲ್ಲ ಎಂದಿದ್ದಾರೆ ರಮೇಶ್‌ ಭಟ್.

ನಮ್ಮ ಫ್ಯಾಕ್ಟರಿ ಮೇಲೆ ಸಾಲ ಇತ್ತು, ಕೊರೊನಾದಲ್ಲಿ ನಷ್ಟ ಆಯ್ತು, ಎಲ್ಲ ಕೆಲಸಗಾರರನ್ನು ಕಳಿಸಿಕೊಟ್ಟೆವು. ಒಟ್ಟೂ ಆರು ಕೋಟಿ ರೂಪಾಯಿ ನಷ್ಟ ಆಯ್ತು. ಜೀವಮಾನದಲ್ಲಿ ನಾನು ಸಂಪಾದನೆ ಮಾಡಿದ ಹಣವೆಲ್ಲ ಅಲ್ಲಲ್ಲಿ ಇತ್ತು, ಅದೆಲ್ಲವೂ ಕರಗಿ ಹೋಯ್ತು. ಈಗ ಮತ್ತೆ ಧಾರಾವಾಹಿ ಮಾಡುತ್ತಿದ್ದೇನೆ. ಈಗ ಮೂರು ಮಶಿನ್‌ ಇದೆ, ಅದನ್ನೇ ಮಗ ನೋಡಿಕೊಳ್ತಿದ್ದಾನೆ, ಸದ್ಯ ಸಾಲ ಎಲ್ಲ ತೀರಿದೆ ಎಂದು ರಮೇಶ್‌ ಭಟ್‌ ಹೇಳಿದ್ದಾರೆ.

https://www.newsics.com/2026/04/04/a-student-wrote-the-entire-syllabus-on-a-pen/

TAGGED:Ramesh Bhatt lost six crore rupees by building an embroidery factory!
Share This Article
Facebook Twitter Copy Link Print
Previous Article ಪೆನ್ನಿನ ಮೇಲೆ ಇಡೀ ಸಿಲೆಬಸ್ ಬರೆದ ವಿದ್ಯಾರ್ಥಿ!
Next Article ಬಿಸಿಲ ಧಗೆಯ ನಡುವೆ ವರುಣನ ಎಂಟ್ರಿ : ಗುಡುಗು ಸಹಿತ ಮಳೆಯಾಗುವ ಸಾಧ್ಯತೆ : ಈ 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?