https://youtube.com/shorts/DiU6l59Harw?si=ZuaOlVBTxzvWqxLP
newsics.com
ಮದುವೆಯಾದ ಹದಿನೈದು ದಿನಕ್ಕೆ ಹೆಂಡತಿ ಎಸ್ಕೇಪ್ ಆಗಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಮದನಪಲ್ಲಿ ಭಾಸ್ಕರ್ ಎಂಬಾತನಿಗೆ ಹೆಂಡತಿ ನೇತ್ರಾ ಕೈ ಕೊಟ್ಟು ಪರಾರಿಯಾಗಿದ್ದಾಳೆ. ಅಷ್ಟೇ ಅಲ್ಲದೆ ಮನೆಯಲ್ಲಿದ್ದ ಒಡವೆಗಳನ್ನು ದೋಚಿ ಎಸ್ಕೇಪ್ ಆಗಿದ್ದಾಳೆ.
ಆಂಧ್ರ ಮೂಲದ ಭಾಸ್ಕರ್ ಬ್ರೋಕರ್ಗಳ ಮೂಲಕ ಹುಡುಗಿಯನ್ನು ಹುಡುಕಿದ್ದ. ಹುಡುಗಿ ನೋಡಿದ ದಿನವೇ ಮದುವೆಯಾಗಿದ್ದನು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದ ನೇತ್ರಾಳನ್ನು ವರಿಸಿದ್ದನು. ಬಳಿಕ ಚಿಂತಾಮಣಿ ತಾಲ್ಲೂಕಿನ ಗೌನಿಚೆರುವುಪಲ್ಲಿಯಲ್ಲಿರುವ ಭಾಸ್ಕರ್ ಪತಿಯ ಮಾವ ವೆಂಕಟರಮಣರೆಡ್ಡಿ ಮನೆಯಲ್ಲಿದ್ದರು.
ಬ್ರೋಕರ್ಗಳ ಮಹಾ ಮೋಸಕ್ಕೆ ಬಲಿಯಾಗಿ, ವಿವಾಹಿತ ಮಕ್ಕಳ ತಾಯಿಯನ್ನು ಮದುವೆಯಾಗಿದ್ದ ಭಾಸ್ಕರ್, ಮದನಪಲ್ಲಿಗೆ ಹೋಗಿ ಬರುವಷ್ಟರಲ್ಲಿ ಹೆಂಡತಿ ನೇತ್ರಾ ಎಸ್ಕೇಪ್ ಆಗಿದ್ದಾಳೆ. ಅಲ್ಲದೆ ಮನೆಯಲ್ಲಿದ್ದ ಒಡವೆಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ. ಸದ್ಯ, ಘಟನೆ ಸಂಬಂಧ ಗಂಡ ಭಾಸ್ಕರ್ ರೆಡ್ಡಿ, ಬಟ್ಲಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದಾರೆ.