https://youtube.com/shorts/tAQS6h_SZWA?si=vAoxcVAHQglCsru5
Subscribe ನ್ಯೂಸಿಕ್ಸ್ ಕನ್ನಡ
newsics.com
ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ನಡೆದಿದೆ.
ಅಪಘಾತದ ವಿವರಗಳ ಪ್ರಕಾರ, ಯುವಕರು ಪ್ರಯಾಣಿಸುತ್ತಿದ್ದ ಫ್ರೆಂಚ್ ಕಾರು (ರಜಿಸ್ಟ್ರೇಷನ್ UP85 CV 9856) ತೀವ್ರ ವೇಗದಲ್ಲಿ ಚಲಿಸುತ್ತಿತ್ತು. ತೀಕ್ಷ್ಣ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸಲು ಪ್ರಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ ಎಂದು ಹೇಳಲಾಗಿದೆ.
ಮೊದಲಿಗೆ ಕಾರು ನೀರಿನ ಟ್ಯಾಂಕ್ಗೆ ಡಿಕ್ಕಿ ಹೊಡೆದು ನಂತರ ತಲೆಕೆಳಗಾಗಿ ಕಾಲುವೆಗೆ ಬಿದ್ದಿದೆ. ಅಪಘಾತದ ಮುಖ್ಯ ಕಾರಣ ತೀವ್ರ ವೇಗ ಮತ್ತು ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿರುವುದು ಎಂದು ಪೊಲೀಸರು ಹೇಳಿದ್ದಾರೆ. ಸಾವನ್ನಪ್ಪಿದ ಯುವಕರಲ್ಲಿ ರಾಹುಲ್ (23), ಅಮಿತ್, ಮೋಹಿತ್ (22) ಮತ್ತು ಇನ್ನೊಬ್ಬ ಯುವಕ ಸೇರಿದ್ದಾರೆ. ಅಮಿತ್ ಮತ್ತು ಮೋಹಿತ್ ಲಾ ವಿದ್ಯಾರ್ಥಿಗಳಾಗಿದ್ದರು. ರಾಹುಲ್ ಟೈಲರಿಂಗ್ ಕೆಲಸ ಮಾಡುತ್ತಿದ್ದನು. ಎಲ್ಲರೂ ಮಹಾವನ್ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ.
ಕಾರು ರಾಹುಲ್ನ ಸಹೋದರ ಅಡ್ವೊಕೇಟ್ ಸಜ್ಜನ್ ಸಿಂಗ್ ಅವರದಾಗಿತ್ತು. ಯುವಕರು ರಾಜಸ್ಥಾನದ ಮದುವೆ ಸಮಾರಂಭಕ್ಕೆ ಹೋಗುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದ್ದು, ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ಸ್ಥಳೀಯರು ತಕ್ಷಣವೇ ಘಟನೆ ಸ್ಥಳಕ್ಕೆ ಧಾವಿಸಿ ಎರಡು ದೇಹಗಳನ್ನು ಹೊರತೆಗೆದರು. ನಂತರ ಪೊಲೀಸರು ಕ್ರೇನ್ ಬಳಸಿ ಕಾರನ್ನು ಹೊರತೆಗೆದು, ಉಳಿದ ಎರಡು ದೇಹಗಳನ್ನು ಹೊರಗೆ ತಂದರು. ನಾಲ್ವರ ದೇಹಗಳನ್ನೂ ಪೋಸ್ಟ್ಮಾರ್ಟಂಗೆ ಕಳುಹಿಸಲಾಗಿದೆ. ನಾಲ್ಕನೇ ಯುವಕನ ಗುರುತು ಪತ್ತೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ಮಾಹಿತಿ ಲೀಕ್ ಬೆನ್ನಲ್ಲೇ ವಿಜಯ್-ರಶ್ಮಿಕಾ ಸೆಲಿಬ್ರಿಟಿ ಜೋಡಿ ಟೀಂ ಗರಂ!