Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಇಡೀ ಭಾರತವನ್ನೇ ವಕ್ಫ್ ಆಸ್ತಿ ಎಂದು ಘೋಷಿಸಿಬಿಡಿ: ನ್ಯಾಯಾಧೀಶರ ಖಡಕ್ ಮಾತು, ವಿಡಿಯೊ ನೋಡಿ
ದೇಶಪ್ರಮುಖವೈರಲ್

ಇಡೀ ಭಾರತವನ್ನೇ ವಕ್ಫ್ ಆಸ್ತಿ ಎಂದು ಘೋಷಿಸಿಬಿಡಿ: ನ್ಯಾಯಾಧೀಶರ ಖಡಕ್ ಮಾತು, ವಿಡಿಯೊ ನೋಡಿ

Share
2 Min Read
SHARE

newsics.com

ಭೋಪಾಲ್: ಸಂಸತ್‌ನಲ್ಲಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸುವ ಸಂದರ್ಭದಲ್ಲೇ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರು ಇದೇ ವಿಚಾರವಾಗಿ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಕ್ಫ್ ಮಂಡಳಿಗೆ ಸಂಬಂಧಿಸಿದ ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರು ವಕೀಲರೊಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ವಕ್ಫ್ ಬೋರ್ಡ್ ಹೆಸರಿನಲ್ಲಿ ಆಸ್ತಿ ಘೋಷಣೆ ಮಾಡಿದ್ದು ಹೇಗೆ ಎಂದು ವಕೀಲರನ್ನು ಪ್ರಶ್ನಿಸಿದ ಅವರು, ವಕೀಲರು ಇದಕ್ಕೆ ಉತ್ತರಿಸಲು ಸಾಧ್ಯವಾಗದಿದ್ದಾಗ ನ್ಯಾಯಾಧೀಶರು ಕೋಪಗೊಂಡರು.

ನಾಳೆ ನೀವು ಕೆಂಪು ಕೋಟೆ, ತಾಜ್ ಮಹಲ್ ಅಷ್ಟೇ ಏಕೆ ಇಡೀ ಭಾರತವನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸುತ್ತೀರಿ ಎಂದು ಕಿಡಿಕಾರಿದರು.

ವಕ್ಫ್ ಆಸ್ತಿಯನ್ನು ಹೇಗೆ ಘೋಷಿಸಲಾಯಿತು ಎಂದು ನನಗೆ ತಿಳಿಸುವಿರಾ? ಅಥವಾ ಅದನ್ನು ಘೋಷಿಸಲಾಗುವುದಿಲ್ಲ ಎಂದು ನೀವು ಭಾವಿಸುತ್ತೀರಾ? ನಾಳೆ ಯಾವುದಾದರೂ ಸಂಸ್ಥೆ ಸರ್ಕಾರಿ ಕಚೇರಿ ಕೂಡ ತಮ್ಮದೇ ಆಸ್ತಿ ಎಂದು ಹೇಳಿದರೆ ಅದು ವಕ್ಫ್ ಆಸ್ತಿಯಾಗಿಬಿಡುತ್ತದೆಯೇ?.. ನನಗೆ ಒಂದು ಸರಳ ಪ್ರಶ್ನೆ ಇದೆ. ಸಹೋದರ, ನೀವು ತಾಜ್ ಮಹಲ್ ತೆಗೆದುಕೊಳ್ಳಿ, ಕೆಂಪು ಕೋಟೆಯನ್ನು ಸಹ ತೆಗೆದುಕೊಳ್ಳಿ, ಯಾರು ನಿರಾಕರಿಸುತ್ತಿದ್ದಾರೆ? ನಿಮಗೆ ನನ್ನ ಪ್ರೀತಿಯ ಪ್ರಶ್ನೆಗಳು ಅರ್ಥವಾಗುವುದಿಲ್ಲ. ನೀವು ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿಬಿಡುತ್ತೀರಾ? ವಿಭಾಗ 5 ರಲ್ಲಿ ಅಧಿಸೂಚನೆ ಇರುತ್ತದೆ. ಒಂದು ಕೆಲಸ ಮಾಡಿ ಇಡೀ ಭಾರತವನ್ನೇ ವಕ್ಫ್ ಆಸ್ತಿ ಎಂದು ಘೋಷಿಸಿ ಬಿಡಿ. ಯಾರಿಗೂ ಏನೂ ತಿಳಿದಿಲ್ಲ ಎಂದು ಗರಂ ಆದರು.

ವಕೀಲರು ಮಾತನಾಡಿ, ಪ್ರಾಚೀನ ಸ್ಮಾರಕಗಳ ಕಾಯಿದೆಯಡಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಯಿಂದ ಆಸ್ತಿಯನ್ನು ಸಂರಕ್ಷಿಸಬಹುದು. ಆದರೆ ಮಾಲೀಕತ್ವವು ವಕ್ಫ್ ಮಂಡಳಿಯಲ್ಲೇ ಇರುತ್ತದೆ. ಈ ಆಸ್ತಿಯನ್ನು 1989ರಲ್ಲಿ ವಕ್ಫ್ ಮಂಡಳಿಗೆ ಘೋಷಿಸಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಬಗ್ಗೆ ನ್ಯಾಯಾಧೀಶರು ಮಾತನಾಡಿ, ‘1989 ರಲ್ಲಿ ವಕ್ಫ್ ಮಂಡಳಿಗೆ ಅದರ ಮಾಲೀಕತ್ವವನ್ನು ಹೇಗೆ ಘೋಷಿಸಲಾಯಿತು? ಅದರ ಮಾಲೀಕರು ಯಾರು? ನೀವು ಇದಕ್ಕೆ ಉತ್ತರಿಸಿ. 1989ರ ಅಧಿಸೂಚನೆಗೆ ಮುನ್ನ ಇದು ಯಾರ ಆಸ್ತಿ ಎಂಬುದು ಯಾರಿಗೂ ತಿಳಿದಿಲ್ಲ, ಯಾರಿಗೂ ಏನೂ ತಿಳಿದಿಲ್ಲ. ವಕ್ಫ್ ಆಸ್ತಿ ಎಂದು ಗುರುತಿಸಿಬಿಡಿ ಎಂದು ನ್ಯಾಯಮೂರ್ತಿ ಅಹ್ಲುವಾಲಿಯಾ ಮುಗುಳ್ನಗುತ್ತಾ ಹೇಳಿದರು. ಹೇಳಲು ಏನೂ ಇಲ್ಲ ಎಂಬುದು ವಕೀಲರ ವಾದದಿಂದ ಸ್ಪಷ್ಟವಾಗಿದೆ. ಅವರ ಬಳಿ ಏನಾದರೂ ಇದ್ದರೆ ಈ ಪ್ರಕರಣಕ್ಕೆ ಬಲ ಬರುತ್ತದೆ ಎಂದು ನ್ಯಾಯಮೂರ್ತಿ ಅಹ್ಲುವಾಲಿಯಾ ಅಭಿಪ್ರಾಯಪಟ್ಟರು.

https://twitter.com/i/status/1821058265267982366

ಇನ್ನೂ ಬಗೆಹರಿಯದ ಕೋಲಾರ ನವಜೋಡಿಯ ಸಾವಿನ ರಹಸ್ಯ, ಮರಣೋತ್ತರ ಪರೀಕ್ಷೆಯಲ್ಲಿ ಮತ್ತಷ್ಟು ಮಾಹಿತಿ ಬಹಿರಂಗ

ಹಿಂದೂ ಯುವಕನನ್ನು ಪ್ರೀತಿಸಿದ ತಂಗಿಯನ್ನು ಕೊಚ್ಚಿ ಕೊಂದ ಅಣ್ಣ; ವಿಡಿಯೋ ವೈರಲ್

ಅಕ್ರಮ ಸಂಬಂಧ: ವ್ಯಕ್ತಿಯ ಬೆರಳು‌ಗಳನ್ನು ಕಟ್ ಮಾಡಿದ್ರು, ಮೂಳೆ ಮುರಿದರು, ಕಣ್ಣು ಕಿತ್ತರು, ಮರ್ಮಾಂಗ ಕತ್ತರಿಸಿ ಕೊಂದರು…

ಕಣ್ಣು ತೆರೆದ ಮೂಕಾಂಬಿಕಾ ದೇವಿ, ಭಕ್ತರೆದುರೇ ನಡೆಯಿತಂತೆ ಪವಾಡ! ಎಲ್ಲೆಡೆ ಈಗ ಇದೇ ಸುದ್ದಿ…

TAGGED:Declare entire India as wakf property: Judge's direct speechWatch Video
Share This Article
Facebook Twitter Copy Link Print
Previous Article ರಾತ್ರಿ ಹೊತ್ತು ನಿದ್ರೆ ಮಾಡದಿದ್ರೆ ಈ ಕಾಯಿಲೆ ಗ್ಯಾರಂಟಿ ಬರುತ್ತೆ..!
Next Article ಈಶಾ ಗೋಶಾಲೆಯಲ್ಲಿ ಯುವತಿಯ ಭಜನೆ: ಬಸವ ‘ಭೋಲಾ’ ಭಾವುಕ! ವೈರಲ್ ವಿಡಿಯೋ‌ ನೋಡಿ

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

ದಳಪತಿ ವಿಜಯ್ ಕೊಲ್ಲೂರು ಲಕ್ಸುರಿ ಸವಾರಿ! ಕೋಟಿ ಕೋಟಿ ಬೆಲೆಯ ಈ ಕಾರಿನ ರಹಸ್ಯವೇನು?

2 Min Read
ಕರ್ನಾಟಕದೇಶಪ್ರಮುಖ

IRCTC New Website ಜುಲೈ 15ಕ್ಕೆ IRCTC ಹೊಸ ವೆಬ್‌ಸೈಟ್ ಲಾಂಚ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?