newsics.com/ನ್ಯೂಸಿಕ್ಸ್
ʻಜೀ ಕನ್ನಡʼ ವಾಹಿನಿಯ ʻಸೀತಾರಾಮʼ ಧಾರಾವಾಹಿಯಲ್ಲಿ ರಾಮ್ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದವರು ಗಗನ್ ಚಿನ್ನಪ್ಪ. ಆದರೆ, ಇವರ ಜೀವನದಲ್ಲಿ ಲವ್ ಸ್ಟೋರಿಯೊಂದು ದೊಡ್ಡ ತಿರುವನ್ನು ತಂದಿತು. ಫೇಸ್ಬುಕ್ನಲ್ಲಿ ಆರಂಭವಾದ ಪ್ರೀತಿಯ ಸಂಬಂಧ, ಮೋಸದಿಂದ ಕೊನೆಗೊಂಡ ಬ್ರೇಕಪ್ನ ಘಟನೆಯನ್ನ ನಟ ಗಗನ್ ಚಿನ್ನಪ್ಪ ಇದೀಗ ಹಂಚಿಕೊಂಡಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ನಲ್ಲಿ ಗಗನ್ ಚಿನ್ನಪ್ಪ ರಿವೀಲ್ ಮಾಡಿದ ಸಂಗತಿಗಳೇನು? ಇಲ್ಲಿ ಓದಿ. ನನ್ನ ಜೀವವನದ ಫಸ್ಟ್ ಎವರ್ ಬ್ಯೂಟಿಫುಲ್ ಲವ್ಸ್ಟೋರಿ. ಏರ್ ಹಾಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದರು ಎಂದಿದ್ದಾರೆ.
ಒಂದು ದಿನ ಅವರು ಫೋಟೋ ಅಪ್ಲೋಡ್ ಮಾಡಿದಾಗ ನನಗೆ ನನ್ನ ಲಿಸ್ಟ್ನಲ್ಲಿ ಇಷ್ಟು ಚಂದದ ಹುಡುಗಿ ಇದ್ದಾರಾ ಅಂತ ಹಾಯ್ ಅಂತ ಕಳಿಸಿದೆ. ಅವರಿಗೆ ಬ್ರೇಕಪ್ ಆಗಿತ್ತು. ನಾವಿಬ್ಬರೂ ಮಾತನಾಡುತ್ತಿದ್ದೆವು. ಅವರಿಗೆ ನನ್ನ ಕಾಮಿಡಿ ಇಷ್ಟವಾಗುತ್ತಿತ್ತು. ಎಲ್ಲಾ ಮಾತುಕತೆ ಆಗಿ 6 ತಿಂಗಳು ಕಳೆದು ಭೇಟಿಯಾಗಿದ್ದೆವು.
ವಿಡಿಯೋ ಕಾಲ್, ಕಾಲ್ ಮಾಡುತ್ತಿದ್ದೆವು. ಒಂದು ಸಲ ಅವಳು ಅಮೆರಿಕಾಗೆ ಹೋಗುತ್ತಿದ್ದಳು. ಆಗ ವೈಫೈ ತಗೊಂಡು ನಂಗೆ ಕಾಲ್ ಮಾಡಿದ್ದಳು. ನಾನು ತುಂಬಾ ಎಫರ್ಟ್ ಹಾಕುತ್ತಿದ್ದೆವು. ಅವರು ಬೆಂಗಳೂರು ಬಂದರು. ಭೇಟಿಯಾದ್ವಿ. ಖುಷಿ ಆಯ್ತು. ಆ ನಂತರ ವಾಪಸ್ ಹೋದರು.
ಆಸ್ಟ್ರೇಲಿಯಾದ ಗ್ರೀಕ್ ಯೋಗರ್ಟ್, ಈರುಳ್ಳಿ ಕೂಡಾ ಲಂಡನ್ ನಿಂದ ಬರುತ್ತಿತ್ತು. ಅವರು ಒಮ್ಮೆ ಬರೋಕೆ ಶುರುವಾದಾಗಿನಿಂದ 2 ತಿಂಗಳಿಗೊಮ್ಮೆ ಬರುತ್ತಿದ್ದರು. ಬರುತ್ತಾ ಫುಲ್ ತರುತ್ತಿದ್ದಳು. ಎಲ್ಲವೂ ದಿನಸಿ ಲಂಡನ್ನಿಂದ ಬರುತ್ತಿತ್ತು.
ಮೊದಲು ನೋಡಬೇಕಾದರೆ ಇಷ್ಟವಾಗಿದ್ದು ಬ್ಯೂಟಿ. ತುಂಬಾ ಸ್ಮಾರ್ಟ್. ಬ್ಯೂಟಿ ವಿತ್ ಬ್ರೈನ್. ಇದು ನನ್ನ ಪ್ರಪಂಚ ಅಂದುಕೊಂಡೆ. ಈ ಒಬ್ಬ ವ್ಯಕ್ತಿ ಬಂದು ಹೋಗಬೇಕಾದರೆ ಈ ರೀತಿ ಅಲ್ಲೋಲ ಕಲ್ಲೋಲ ಆಗಬಹುದೆಂದು ಅಂದುಕೊಂಡಿರಲಿಲ್ಲ. ಅವರು ಅಲ್ಲಿ ಯಾವುದೋ ಒಂದು ಬ್ಯಾಂಕಲ್ಲಿ ಲೋನ್ ಮಾಡಿ ಅದನ್ನು ಕಟ್ಟದೆ ಇಲ್ಲಿ ಬಂದಿದ್ದರು.
ಇದು ನನಗೆ ಗೊತ್ತಿರಲಿಲ್ಲ. ಅವರು ನನಗೂ ಹೇಳಿರಲಿಲ್ಲ. ಕೊರೋನಾ ಆಗಿತ್ತು. ಆಗ ಕೆಲಸ ಬಿಟ್ಟು ಬರುತ್ತಾರೆ. ಕೆಲಸ ಬಿಟ್ಟು ಬಂದಾದ್ಮೇಲೆ ನಮ್ಮನೆಲ್ಲಿ ಉಳಿಯೋಕೆ ಬಿಟ್ಟೆ. ಲಿವಿನ್ನಂತೆ ಇತ್ತು.
ಸ್ಟಾರ್ ಆದ್ಮೇಲೆ ಅರ್ಧ ಲೋನ್ ಕಡ್ತೀಯಲ್ಲ ಎಂದಿದ್ದರು. ನನ್ನ ಕಾರು ಹೋಯ್ತು, ಮನೆ ಹೋಯ್ತು, ಈಗ ಲೋನ್ ನನ್ನ ಕೈನಲ್ಲೇ ಕಟ್ಟಿಸ್ತಾಳೆ ಎಂದಿದ್ದೆ. ಆಗ ಅವರ ಅಮ್ಮನ ಡಿವೋರ್ಸ್ ಆಯ್ತು. ಆ ಸಮಯದಲ್ಲಿ ಅವರ ಅಮ್ಮ, ತಮ್ಮ ಅವರನ್ನೂ ಸಾಕಿದ್ದೀನಿ. ಆ ಸಮಯದಲ್ಲಿ ನನ್ನ ಅಪ್ಪ-ಅಮ್ಮ ಎಲ್ಲರೂ ಕೋಪಿಸಿಕೊಂಡಿದ್ದರು.
ನಾನು ಆಗ ಮಂಗಳಗೌರಿ ಸೀರಿಯಲ್ ಮಾಡುತ್ತಿದ್ದೆ. ಅಲ್ಲಿ ಶೂಟಿಂಗ್ ಸೆಟ್ನಿಂದ ಹುಚ್ಚನ ರೀತಿ ಬರೋದು, ಅವಳಿಗೆ ಸರ್ಪೈಸ್ ಕೊಡೋದು, ಈ ರೀತಿ ಮಾಡುತ್ತಿದ್ದೆ. ಆಗ 60 ಸಾವಿರದಷ್ಟು ದುಡಿಯುತ್ತಿದ್ದೆ. ಆಗ ಅವರನ್ನು ಸಾಕಬೇಕು, ಬಾಡಿಗೆ ಅಂತ ಎಲ್ಲವೂ ಮುಗಿಯುತ್ತಿತ್ತು.
ಆಗ ತುಂಬಾ ಕಷ್ಟ ಇತ್ತು. ಮಂಗಳಗೌರಿ ಶೂಟಿಂಗ್ ವೇಳೆ ಒಂದು ಘಟನೆ ನಡೆಯುತ್ತೆ. ನಾನು ಸೀರಿಯಲ್ ಬೇಡ ಅಂತ ಬಿಟ್ಟೆ. ಆಮೇಲೆ ಮಾತುಕತೆ ಆಯ್ತು. ವಾದ ವಿವಾದ ಆಗಿ ಬಿಟ್ಟುಬಿಡ್ತೀನಿ. SNP ಅಂತ ಒಂದು ನೋಟಿಸ್ ಬರುತ್ತೆ. ಯುನಿಫಾರ್ಮ್ ಹಾಕಿ ಕೆಲವೊಂದು ದೃಶ್ಯ ಮಾಡಬಾರದು. ಹಾಗಾಗಿ ನಾನು ಮಾಡಲ್ಲ ಎಂದಿದ್ದೆ. ಆದರೆ ಆಗಲ್ಲ ಅಂತ ಅದು ದೊಡ್ಡ ಜಗಳ ಆಯ್ತು. ಕೆಲಸ ಬಿಟ್ಟೆ. ನಂತರ ಒಂದು ವರ್ಷ ಕೆಲಸ ಇರಲಿಲ್ಲ.
8-9 ತಿಂಗಳು ಆಫರ್ ಇರಲಿಲ್ಲ. ನಾನು ಎಲ್ಲವನ್ನೂ ಮಾರಿದೆ. ದುಡ್ಡು ಬೇಕೇ ಬೇಕಾಗಿತ್ತು. ನಾನು ಅವರನ್ನೆಲ್ಲ ಸಾಕುತ್ತಿದ್ದೆ. ನಾನು ಇಷ್ಟಪಡುತ್ತಿದ್ದೆ. ಅವರನ್ನು ನೋಡಿಕೊಳ್ಳಬೇಕಲ್ಲ. ಆದರೆ ಅವರದ್ದು ಒಳಗಿನಿಂದಲೇ ಪ್ಲಾನ್ ಆಗುತ್ತಿತ್ತು. ನಮ್ಮ ಮನೆಯಲ್ಲಿದ್ದರೂ ಅವಳಿಗೆ ಬೇಕಾದ ಸಮಯಕ್ಕೆ ಬರುವುದು, ನನ್ನದು ಒಂದು ಬೆಡ್ರೂಮ್ ಆಕ್ಸೆಸ್ ಅಷ್ಟೆ.
ಮನೆಯಿಂದ ಹೊರಗೆ ಹೋಗುವಾಗ ನನ್ನ ಮನೆ ಇದು ಎಂದರು. ನಂತರ ನಾನು ಓನರ್ಗೆ ಕಾಲ್ ಮಾಡಿ ಹೇಳಿ ಕಳಿಸಿ ಎಂದೆ. ಶಾಪ ಎಲ್ಲ ಹಾಕಿ ಹೋದರು. ಅಂದ-ಚಂದ ನೋಡಿ ಹೋಗಬೇಡಿ. ಹುಡುಗರು ಅಂದ ಚಂದ ನೋಡ್ತೀವಿ, ಹಳ್ಳಕ್ಕೆ ಬೀಳೋದು ಆವಾಗ್ಲೆ. ನನ್ನ 6 ವರ್ಷ ನಾನು ವೇಸ್ಟ್ ಮಾಡಿದೆ. ನನ್ನ ಮುಗ್ಧತೆಯನ್ನು ಕಳೆದುಕೊಂಡೆ ಎಂದಿದ್ದಾರೆ.
ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ