https://youtube.com/shorts/Z7vopgc72sA?si=4gbyJQjGVHsXjuKq
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು: ಮುಖ್ಯಮಂತ್ರಿ ಪವರ್ ಶೇರಿಂಗ್ ಬಡಿದಾಟದ ನಡುವೆಯೇ ಸಿಎಂ ಸಿದ್ದರಾಮಯ್ಯ ಪರಮ ಆಪ್ತ ಹಾಗೂ ಇಂಧನ ಸಚಿವ ಕೆ ಜೆ ಜಾರ್ಜ್ ರಾಜೀನಾಮೆಯ ಬಿಗ್ ಶಾಕ್ ಕೊಡಲು ಮುಂದಾಗಿದ್ದರು ಎನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ರಾಜೀನಾಮೆ ವಿಚಾರ ಸುಳ್ಳು ಎಂದು ಸಚಿವ ಜಾರ್ಜ್ ಸ್ಪಷ್ಟನೆ ನೀಡಿದ್ದಾರಾದರೂ ರಾಜೀನಾಮೆಯಂತಹ ಕ್ರಮಕ್ಕೆ ಮುಂದಾಗಿದ್ದುದು ನಿಜ ಎನ್ನುತ್ತಿವೆ ಸರ್ಕಾರದ ಮೂಲಗಳು.
ಸಿದ್ದರಾಮಯ್ಯ ಬಣದ ಪ್ರಬಲ ನಾಯಕ ಎಂದು ಗುರುತಿಸಿಕೊಂಡಿರುವ ಸಚಿವ ಕೆಜೆ ಜಾರ್ಜ್ ಅವರು ಐಎಎಸ್ ಅಧಿಕಾರಿ ಪರ ನಿಂತು ರಾಜೀನಾಮೆ ಕೊಡಲು ಮುಂದಾಗಿದ್ದರು ಎನ್ನುವ ಸುದ್ದಿ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಸಚಿವ ಕೆಜೆ ಜಾರ್ಜ್ ರಾಜೀನಾಮೆ ನೀಡಲು ಮುಂದಾಗಿದ್ದು ಓರ್ವ ಐಎಎಸ್ ಅಧಿಕಾರಿ ಸಸ್ಪೆಂಡ್ ವಿಚಾರಕ್ಕೆ ಎನ್ನಲಾಗ್ತಿದೆ.
ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ. ಇವರು ಇಂಧನ ಇಲಾಖೆಯ ಟೆಂಡರ್ಗಳನ್ನು ಉತ್ತರ ಭಾರತೀಯರಿಗೆ ನೀಡ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಈ ಬಗ್ಗೆ ಕರ್ನಾಟಕದ ಕೆಲ ಕಂಟ್ರಾಕ್ಟರ್ಗಳು ಕೂಡ ಪಾಂಡೆ ವಿರುದ್ಧ ಸಿಎಂಗೆ ದೂರು ನೀಡಿದ್ದರು. ದೂರು ಬಂದ ಹಿನ್ನೆಲೆ ಸಿಎಂ ಕಚೇರಿಯಿಂದ ಪಾಂಡೆಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಕೊಟ್ಟರೂ ಕೆಪಿಟಿಸಿಎಲ್ ಎಂಡಿ ಪಾಂಡೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಲ್ಲ.
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವಂತೆ ಎಂಡಿ ಪಾಂಡೆ ಅವರಿಗೆ ಮುಖ್ಯಮಂತ್ರಿ ಕಚೇರಿಯಿಂದ 8 ಬಾರಿ ಕರೆ ಮಾಡಿದ್ರೂ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಪಾಂಡೆ ನಡೆಗೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಅವರು ಪಂಕಜ್ ಕುಮಾರ್ ಪಾಂಡೆಯನ್ನು ಸಸ್ಪೆಂಡ್ ಮಾಡುವಂತೆ ಸಿಎಸ್ಗೆ ಆದೇಶ ನೀಡಿದ್ದರಂತೆ.
ಶಾಲಿನಿ ರಜನೀಶ್ ಅವರು ಸಸ್ಪೆಂಡ್ಗೆ ತಯಾರಿ ನಡೆಸುತ್ತಿರುವ ವಿಚಾರ ಗೊತ್ತಾಗ್ತಿದ್ದಂತೆ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ, ಸಿಎಂ ಕಚೇರಿಗೆ ಓಡೋಡಿ ಬಂದಿದ್ದಾರೆ. ಇದೇ ವೇಳೆ ಪಾಂಡೆ ಮೇಲೆ ಸಿಎಂ ಗರಂ ಆಗಿದ್ದರು. ನನಗೆ ಗೌರವ ಕೊಡದಿದ್ದರೂ ಪರವಾಗಿಲ್ಲ. ಸಿಎಂ ಹುದ್ದೆಗೆ ಗೌರವ ಕೊಡು. ನಿನ್ನನ್ನು ಸಸ್ಪೆಂಡ್ ಮಾಡ್ತಿದ್ದೇನೆ ಎಂದು ಅಧಿಕಾರಿ ಮೇಲೆ ಸಿಎಂ ಸಿಟ್ಟಾಗಿದ್ರು ಎಂದು ಮೂಲಗಳಿಂದ ತಿಳಿದುಬಂದಿದೆ.
ಇತ್ತ ಇಂಧನ ಇಲಾಖೆಯ ಕೆಪಿಟಿಸಿಎಲ್ ಎಂಡಿ ಪಂಕಜ್ ಪಾಂಡೆ ಸಸ್ಪೆಂಡ್ ಮಾಹಿತಿ ಪಡೆದ ಸಚಿವ ಕೆ.ಜೆ. ಜಾರ್ಜ್, ನನಗೆ ತಿಳಿಯದೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ ಬಗ್ಗೆ ಕೋಪಗೊಂಡಿದ್ದರು ಎನ್ನಲಾಗ್ತಿದೆ.
ಪಾಂಡೆ ಸಸ್ಪೆಂಡ್ ಮಾಡಿದರೆ ಇಲಾಖೆಯಲ್ಲಿ ನಾನ್ಯಾಕೆ ಇರಬೇಕು? ಪಾಂಡೆ ಸಸ್ಪೆಂಡ್ ಮಾಡುವ ವಿಚಾರದಲ್ಲಿ ನನ್ನನ್ನು ಮೊದಲೇ ಕೇಳಬೇಕಿತ್ತು ಎಂದು ಜಾರ್ಜ್ ಗರಂ ಆಗಿ ರಾಜೀನಾಮೆಯ ನಿರ್ಧಾರವನ್ನೇ ಮಾಡಿಬಿಟ್ಟಿದ್ರು ಎಂದು ಹೇಳಲಾಗ್ತಿದೆ.
ಐಎಎಸ್ ಅಧಿಕಾರಿ ಪರ ನಿಂತ ಸಚಿವ ಕೆಜೆ ಜಾರ್ಜ್, ಇದೇ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದರು ಎನ್ನಲಾಗ್ತಿದೆ. ಇತ್ತ ಸಿಎಂ ಭೇಟಿಯಾಗದ ಬಗ್ಗೆ ಪಾಂಡೆ ವಿವರಣೆ ಸಹ ನೀಡಿದ್ದಾರೆ. ನನ್ನ ತಾಯಿ ತೀರಿಕೊಂಡಿದ್ದರು. ಹೀಗಾಗಿ ಭೇಟಿಯಾಗಲು ಆಗಿಲ್ಲ. ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ. ಮನವಿ ಬಳಿಕ ಪಾಂಡೆ ಸಸ್ಪೆಂಡ್ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಕೈಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಂಡೆ ಮೇಲೆ ಸಿಎಂ ಸಿಟ್ಟಾಗಲು ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಕಾರಣ ಎನ್ನಲಾಗಿದೆ.
ಕೊಡಗಿನಲ್ಲಿ ರಾಜಕಾರಣಿ ಮಕ್ಕಳು ಸೇರಿ ಯುವತಿಯರೊಂದಿಗೆ ರಾಸಲೀಲೆ ವಿಡಿಯೋ ವೈರಲ್