Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕೋವಿಡ್ ಸರದಿ ಮುಗಿಯಿತು ಎಂದು ಜನ ನಿರಾಳವಾಗುವ ಹೊತ್ತಲ್ಲಿ ಗುಯಿಲಿನ್ ಬಾರ್ ಸಿಂಡ್ರೋಮ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೊಂದು ಗಂಭೀರವಾದ ನರಮಂಡಲದ ಸಮಸ್ಯೆಯಾಗಿದ್ದು ಕ್ಯಾಂಪೈಲೋಬ್ಯಾಕ್ಟರ್ ಜೆಜುನಿ ಎಂಬ ಸೋಂಕು, ಅಶುದ್ಧ ಆಹಾರ, ನೀರು ಸೇವನೆಯಿಂದ ದೇಹವನ್ನು ಸೇರುತ್ತವೆ. ಬಳಿಕ 1- 3 ವಾರದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ.
ಮಧ್ಯಪ್ರದೇಶ ರಾಜ್ಯದಲ್ಲಿ ಗೀಲನ್ ಬಾ ಸಿಂಡ್ರೋಮ್ ಹಿನ್ನೆಲೆಯಲ್ಲಿ ಈವರೆಗೂ ಇಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ.
ನೀಮುಚ್ ನಗರದಲ್ಲಿ ಸುಮಾರು 15 ಮಂದಿ ಗೀಲನ್ ಬಾ ಸೋಂಕು ಪೀಡಿತರಾಗಿದ್ದಾರೆ. ಆರೋಗ್ಯ ಇಲಾಖೆಯ ದತ್ತಾಂಶಗಳ ಪ್ರಕಾರ, ಒಟ್ಟು ಆರು ಮಂದಿ ಸೋಂಕು ಪೀಡಿತರಾಗಿರುವುದು ಅಧಿಕೃತವಾಗಿ ದೃಢಪಟ್ಟದೆ.
ಗೀಲನ್ ಬಾ ಸಿಂಡ್ರೋಮ್ ಯಾಕೆ ಇಷ್ಟು ಭಯಾನಕ ಎಂದರೆ, ಮನುಷ್ಯನ ದೇಹದ ಮೇಲೆ ಅದೇ ಮನುಷ್ಯನ ಪ್ರತಿರೋಧ ವ್ಯವಸ್ಥೆಯು ದಾಳಿ ಮಾಡುತ್ತದೆ. ದೇಹದ ಪ್ರತಿರೋಧ ವ್ಯವಸ್ಥೆ ನರಮಂಡಲ ಮೇಲೆ ದಾಳಿ ಮಾಡುವ ವಿಚಿತ್ರ ಕಾಯಿಲೆ ಇದಾಗಿದ್ದು, ಪಾದ & ಕೈ ಜೋಮು ಹಿಡಿಯುವುದರೊಂದಿಗೆ ಜಿಬಿಎಸ್ ಆರಂಭವಾಗುತ್ತದೆ. ಹೀಗೆ ಆರಂಭ ಆಗುವ ಗೀಲನ್ ಬಾ ಸಿಂಡ್ರೋಮ್ ಮುಂದಕ್ಕೆ ಸ್ನಾಯು ದೌರ್ಬಲ್ಯ ಉಂಟುಮಾಡುತ್ತಾ, ಕೀಲುಗಳಲ್ಲಿ ಭಾರಿ ನೋವು ಕಾಣಿಸಿಕೊಳ್ಳುವಂತೆ ಮಾಡುತ್ತದೆ.
ಗೀಲನ್ ಬಾ ಸಿಂಡ್ರೋಮ್ ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ದೇಹದಲ್ಲಿ ಹೆಚ್ಚಿಸುತ್ತಾ ಸಾಗುತ್ತದೆ. 2 ವಾರ ಅಥವಾ 4 ವಾರ ಕಳೆಯುವ ಒಳಗೆ ಭುಜ ಮತ್ತು ಕಾಲುಗಳಿಗೆ ನೋವು ಹರಡುವ ಮೂಲಕ ಕಾಯಿಲೆ ಲಕ್ಷಣ ತೀವ್ರಗೊಳ್ಳುತ್ತದೆ. ಇನ್ನು ಈ ರೋಗದ ತೀವ್ರತೆ, ಚಿಕಿತ್ಸೆಯ ಲಭ್ಯತೆ ಮತ್ತು ಗುಣಮಟ್ಟ ಆಧರಿಸಿ ಮರಣದ ಪ್ರಮಾಣ ಶೇಕಡಾ 3 ರಿಂದ ಶೇಕಡಾ 7ರ ತನಕ ಇರುತ್ತದೆ. ಆದರೆ ಈಗ ಭಾರಿ ಪ್ರಮಾಣದಲ್ಲಿ ಗೀಲನ್ ಬಾ ಸಿಂಡ್ರೋಮ್ ಹರಡುತ್ತಿರುವ ಮಧ್ಯಪ್ರದೇಶದಲ್ಲಿ ಆತಂಕ ಹೆಚ್ಚಿಸಿದೆ. ಹಾಗೇ ಭಾರತದ ಇತರ ರಾಜ್ಯಗಳಲ್ಲೂ ಗೀಲನ್ ಬಾ ಸಿಂಡ್ರೋಮ್ ಹಾವಳಿಯ ಭಯ ಮೂಡಿದೆ.