Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಬೆಂಗಳೂರು: ಬಿಗ್ ಬಾಸ್ ಕನ್ನಡ -12 ರ ಮನೆಯಿಂದ ಮೊದಲ ದಿನವೇ ಹೊರಬಿದ್ದಿದ ಕರಾವಳಿಯ ರಕ್ಷಿತಾ ಶೆಟ್ಟಿ ಮತ್ತೆ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.
ಈ ಸಲ ರಕ್ಷಿತಾ ಅವರು ಜಾಣ್ಮೆಯಿಂದ ಹೆಜ್ಜೆಯಿಟ್ಟಿದ್ದು, ತನ್ನನ್ನು ಹೊರಗೆ ಹಾಕಿದವರ ಮೇಲೆಯೇ ಗರಂ ಆಗಿದ್ದಾರೆ.
ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಒಂಟಿಯಾಗಿ ಎಂಟ್ರಿ ಕೊಟ್ಟಿದ್ದರು. ಮಾಳು ನಿಪನಾಳ, ಸ್ಪಂದನಾ ಸೋಮಣ್ಣ ಜತೆ ರಕ್ಷಿತಾ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ರಕ್ಷಿತಾ ಅವರಿಗೆ ಜೋಡಿ ಇಲ್ಲದ ಕಾರಣ, ಆಟದಲ್ಲಿ ಎಲಿಮಿನೇಷನ್ ಟ್ವಿಸ್ಟ್ ನೀಡಲಾಗಿತ್ತು. ರಕ್ಷಿತಾ ಅವರನ್ನು ಕೆಲಮಂದಿ ಚರ್ಚಿಸಿ ಮನೆಯಿಂದ ಹೊರ ಹಾಕಿದ್ದರು.
ಮೊದಲ ದಿನವೇ ರಕ್ಷಿತಾ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಅವರನ್ನು ʼಬಿಗ್ ಬಾಸ್ʼ ಮತ್ತೊಂದು ಅವಕಾಶ ನೀಡಿದ್ದು, ದೊಡ್ಮನೆಗೆ ಮತ್ತೆ ಕಾಲಿಟ್ಟಿದ್ದಾರೆ.
“ನನಗೆ ಬಿಗ್ ಬಾಸ್ ಮನೆಯಲ್ಲಿ ಇರೋಕೆ ಯೋಗ್ಯತೆ ಇದೆ. ಆದರೆ ನನ್ನನ್ನು ಹೊರಗೆ ಹಾಕಿದ್ದಾರೆ. ನೀವೆಲ್ಲ ಕೊಟ್ಟ ಕಾರಣ ಸೂಕ್ತವಾಗಿರಲಿಲ್ಲ. ಇಲ್ಲಿ ಯಾರು ಸೆಲೆಬ್ರಿಟಿ – ನಾನ್ ಸೆಲೆಬ್ರಿಟಿಗಳಲ್ಲ. ಚಿಕ್ಕವರು – ದೊಡ್ಡವರಿಲ್ಲ. ದೊಡ್ಡದಾಗಿ ಮಾತನಾಡೋಕೆ ಎಲ್ಲರಿಗೂ ಬರುತ್ತದೆ. ನ್ಯಾಯದ ಹಾಗೆ ಮೊದಲು ಯೋಚನೆ ಮಾಡಬೇಕೆಂದು” ರಕ್ಷಿತಾ ಏರುಧ್ವನಿಯಲ್ಲೇ ಸಹ ಸ್ಪರ್ಧಿಗಳ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.
ನಿಮಗೆ ವೋಟ್ ಹಾಕಿ ಹೊರಗಡೆ ಹಾಕಿದವರಲ್ಲಿ ನೀವು ವೋಟ್ ಹಾಕಿ ಹೊರಗಡೆ ಹಾಕಿ ಎಂದರೆ ಯಾರನ್ನು ಹೊರಗೆ ಹಾಕುತ್ತೀರಿ ಎಂದು ಕಿಚ್ಚ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ರಕ್ಷಿತಾ ಎಲ್ಲರನ್ನೂ ಹೊರಗೆ ಹಾಕ್ತೀನಿ ಎಂದಿದ್ದಾರೆ.
ಸದ್ಯ ರಕ್ಷಿತಾ ಅವರ ರಗಡ್ ಎಂಟ್ರಿ, ಖಡಕ್ ಮಾತುಗಳನ್ನು ಕೇಳಿ ಮನೆಮಂದಿ ಶಾಕ್ ಆಗಿದ್ದಾರೆ. ಅಸಲಿ ಆಟ ಈಗ ಶುರುವೆಂದು ರಕ್ಷಿತಾ ಪರೋಕ್ಷವಾಗಿ ಎಲ್ಲರಿರೂ ಟಕ್ಕರ್ ಕೊಟ್ಟಿದ್ದಾರೆ.