newsics.com
ಈರುಳ್ಳಿ ಕತ್ತರಿಸುವಾಗ ಸಹಜವಾಗಿ ಕಣ್ಣಿನಲ್ಲಿ ನೀರು ಬರುತ್ತದೆ. ಈರುಳ್ಳಿ ಖಾರವನ್ನು ತಡೆಯಲಾದೇ ಹಿಂಸೆಯನ್ನು ಅನುಭವಿಸುವುದು ಇದೆ. ಆದರೆ ಈ ಹಿಂಸೆಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಈರುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದರ ಖಾರ ದೇಹಕ್ಕೂ, ಕಣ್ಣಿಗೂ ಒಳ್ಳೆಯದು ಎಂದು ಹೇಳುತ್ತಾರೆ.
ಪ್ರತಿದಿನ ಅಡುಗೆ ಮಾಡುವವರಿಗೆ ಇದು ಅಭ್ಯಾಸವಾದರೂ, ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬಂದೇ ಬರುತ್ತದೆ. ಆದರೆ ಇದಕ್ಕೆ ಒಂದು ಪರಿಹಾರ ಇದೆ. ಈ ನಿಯಮವನ್ನು ಪಾಲನೆ ಮಾಡಿದ್ರೆ, ಒಂದೇ ಒಂದು ಹನಿ ಕಣ್ಣೀರು ಬರುವುದಿಲ್ಲ. ಖ್ಯಾತ ಪೌಷ್ಟಿಕತಜ್ಞೆ ಲಿಮಾ ಮಹಾಜನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈರುಳ್ಳಿ ಕತ್ತರಿಸುವ ಮೊದಲು ಕೆಲವು ಸರಳ ಹಂತಗಳನ್ನು ಅನುಸರಿಸುವುದರಿಂದ ಕಣ್ಣಿನಲ್ಲಿ ನೀರು ಬರುವುದಿಲ್ಲ.
ಏನು ಮಾಡಬೇಕು?
- ಈರುಳ್ಳಿ ಕತ್ತರಿಸುವ ಮೊದಲು, ಸಿಪ್ಪೆ ಸುಲಿದು 5 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
- ಸುಮಾರು 10 ನಿಮಿಷಗಳ ಕಾಲ ರೆಫ್ರಿಜರೇಟರ್ನಲ್ಲಿ ಇಟ್ಟು ತಣ್ಣಗಾಗಿಸಿ.
https://www.instagram.com/reel/DOp9QjijsQb/?igsh=MTNiYWM1ZDVnbXJpZg==
ಕಠಿಣ ಹಳದಿ ಹಲ್ಲುಗಳು ಕ್ಷಣಾರ್ಧದಲ್ಲಿ ಬೆಳ್ಳಗೆ ಆಗಬೇಕಾ?; ಜಸ್ಟ್ ಈ ರೀತಿ ಮಾಡಿ ಸಾಕು