newsics.com
ಚಾಮರಾಜನಗರ: ಜಿಲ್ಲೆ ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮದಲ್ಲಿ ಅಪಾಯದ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿದೆ. ಅತಿಯಾದ ಮಳೆ ಹಿನ್ನಲೆ ಕಬಿನಿ ಹಾಗೂ ಕನ್ನಂಬಾಡಿ ಕಟ್ಟೆಯಿಂದ ಔಟ್ ಫ್ಲೋ ಹೆಚ್ಚಳವಾಗಿದೆ. ಇದರಿಂದ ಕೊಳ್ಳೇಗಾಲ ತಾಲೂಕಿನ 12 ಗ್ರಾಮಗಳು ಅಪಾಯದ ಅಂಚಿಗೆ ತಲುಪಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ 12 ಗ್ರಾಮಸ್ದರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಅದೇನೆ ಇರಲಿ, ಪ್ರತಿ ವರ್ಷ ಮಳೆಗಾಲದಲ್ಲಿ ಕೊಳ್ಳೇಗಾಲ ತಾಲೂಕಿನ 12 ಗ್ರಾಮಸ್ದರು ಆತಂಕದಲ್ಲೇ ಕಾಲ ಕಳೆಯುವಂತಾಗಿದ್ದು, ತಡೆಗೋಡೆ ನಿರ್ಮಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವುದು ನಿಜಕ್ಕೂ ದುರಃತವೇ ಸರಿ.
ಕಳೆದ ಮೂರು ವರ್ಷದ ಹಿಂದೆ ಅತಿಯಾದ ಮಳೆಯಿಂದ ದಾಸನಪುರ ಗ್ರಾಮ ಸೇರಿದಂತೆ 12 ಗ್ರಾಮಗಳು ಸಂಪೂರ್ಣ ಜಲಾವೃತವಾಗಿತ್ತು. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಜೊತೆಗೆ ಬೆಳೆದ ಬೆಳೆಗಳೆಲ್ಲವೂ ನೀರು ಪಾಲಾಗಿತ್ತು.