newsics.com
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಕೋರ್ಟ್ ಆದೇಶದಿಂದ ತುಸು ರಿಲ್ಯಾಕ್ಸ್ ಆಗಿದ್ದಾರೆ.
ಜೈಲು ಶಿಫ್ಟ್ ಹಾಗೂ ಬೆಡ್ಶೀಟ್ ಅರ್ಜಿ ಏನಾಗುತ್ತೋ ಎಂದು ಕಾಯುತ್ತಿದ್ದ ನಟನಿಗೆ ಕೋರ್ಟ್ ಸ್ವಲ್ಪ ರಿಲೀಫ್ ನೀಡಿದೆ.
ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕೆಂದು ಕೋರಿ ಎಸ್ಪಿಪಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದು, ಜೈಲು ಮ್ಯಾನುವಲ್ನಲ್ಲಿ ಆರೋಪಿಗೆ ಬೆಡ್ಶೀಟ್ ದಿಂಬು ನೀಡುವಂತೆ ಸೂಚಿಸಿದೆ.
ಎಸ್ಪಿಪಿ ಸಲ್ಲಿಸಿದ್ದ ಅರ್ಜಿಯಲ್ಲಿ ದರ್ಶನ್ ಪರವಾಗಿ ಆದೇಶ ಬಂದಿದ್ದು, ಇನ್ನು ದರ್ಶನ್ ಕಡೆಯಿಂದ ಸಲ್ಲಿಕೆಯಾಗಿದ್ದ ಅರ್ಜಿಯನ್ನೂ ಕೋರ್ಟ್ ಪುರಸ್ಕರಿಸಿದೆ.
ನಟ ದರ್ಶನ್ ಸದ್ಯ ಕೋರ್ಟ್ ಆದೇಶದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲೆ ಉಳಿಯಲಿದ್ದಾರೆ. ಅಷ್ಟೇ ಅಲ್ಲ, ಖೈದಿಯ ಹಕ್ಕುಗಳನ್ನು ಗೌರವಿಸಲು ಸೂಚನೆ ನೀಡಲಾಗಿದ್ದು ಜೈಲು ಕೈಪಿಡಿಯಂತೆ ಜೈಲು ಆವರಣದಲ್ಲಿ ವಾಕ್ ಮಾಡಲು ಅನುಮತಿ ನೀಡಲಾಗಿದೆ.
ಹಾಸಿಗೆ ದಿಂಬಿಗೆ ಜೈಲು ಕೈಪಿಡಿ ಅನುಸರಿಸಲು ಸೂಚನೆ ನೀಡಿದ್ದು, ನಟನನ್ನು ಬಳ್ಳಾರಿ ಜೈಲಿಗೆ ವರ್ಗಾವಣೆಗೆ ಕೋರ್ಟ್ ನಿರಾಕರಿಸಿದೆ. ಸದ್ಯಕ್ಕೆ ಬಳ್ಳಾರಿಗೆ ವರ್ಗಾಯಿಸಲು ಸಕಾರಣಗಳಿಲ್ಲ ಎಂದಿದೆ.
ಇಲ್ಲಿ ದರ್ಶನ್ ಪರವಾಗಿ ಆದೇಶ ನೀಡಿದ್ದರೂ ಕೂಡ ಆರೋಪಿ ಜೈಲಿನಲ್ಲಿ ನಿಯಮ ಮೀರಿ ನಡೆಯಬಾರದು ಎನ್ನುವ ಕಾರಣದಿಂದ ಕೋರ್ಟ್ ಎಚ್ಚರಿಕೆ ಕ್ರಮವಾಗಿ ಜೈಲು ನಿಯಮ ಉಲ್ಲಂಘಿಸಿದರೆ ಐಜಿಯೇ ವರ್ಗಾವಣೆಗೆ ಕ್ರಮ ಕೈಗೊಳ್ಳಬಹುದು ಎಂದು ಆದೇಶ ನೀಡುವ ಮೂಲಕ ದರ್ಶನ್ಗೆ ಎಚ್ಚರಿಕೆಯನ್ನೂ ಕೊಟ್ಟಿದೆ.
ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡೋಕೆ ಯಾವುದೇ ಸರಿಯಾದ ಕಾರಣಗಳಿಲ್ಲ ಎಂದು ಕೋರ್ಟ್ ಹೇಳಿದೆ.
ಇದೇ ವಿಚಾರವಾಗಿ ಆಕ್ಷೇಪಣೆ ಸಲ್ಲಿಸಿ ವಾದ ಮಾಡಿದ್ದ ನಟನ ಪರ ವಕೀಲರು ದರ್ಶನ್ ಸೆಲೆಬ್ರಿಟಿಯಾಗಿರುವುದರಿಂದ ಬೇಕೆಂದೇ ಹೆಚ್ಚು ಮತುವರ್ಜಿ ವಹಿಸಿ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದಿದ್ದರು.
ಬೇರೆ ಜೈಲಿನವ್ರು ದರ್ಶನ್ ನಮಗೆ ಬೇಡ ಎನ್ನುತ್ತಿದ್ದಾರೆ. ಈ ಹಿಂದೆ ಪೊಲೀಸ್ ಕಮಿಷನರ್ ಆಗಿದ್ದ ದಯಾನಂದ್ ಅವರೇ ಈಗ ಕಾರಾಗೃಹ ಇಲಾಖೆ ಡಿಜಿ ಆಗಿದ್ದಾರೆ. ಅವರ ಸೂಚನೆ ಮೇರೆಗೆ ಶಿಪ್ಟ್ಗೆ ಅರ್ಜಿ ಹಾಕಲಾಗಿದೆ. ಜೈಲು ಅಧಿಕಾರಿಗಳಿಗೆ ಅವಾರ್ಡ್ ಕೊಡಿಸ್ತೀನಿ ಎಂದು ಹೇಳಿ ಈ ಅರ್ಜಿ ಹಾಕಿದ್ದಾರೆ ಎಂದು ವಕೀಲರು ವಾದಿಸಿದರು.
ಟ್ರಯಲ್ ಮಾಡುವಾಗ ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರುಪಡಿಸಲು ಆಗಲ್ಲ ಎಂದು ಅವರು ಹೇಳಿದ್ದರು.
Gold Rate Today: ಮತ್ತಷ್ಟು ದುಬಾರಿಯಾದ ಚಿನ್ನ! ಹೀಗಿವೆ ಇಂದಿನ ಚಿನ್ನ-ಬೆಳ್ಳಿ ಬೆಲೆ