newsics.com
ಪುರಿ(ಒಡಿಶಾ): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೀವ ಉಳಿಯಲು ದೇವರ ಕೃಪೆ ಎಂದು ಕೋಲ್ಕತ್ತಾದ ಇಸ್ಕಾನ್ ಅಧ್ಯಕ್ಷ ರಾಧಾರಮಣ ದಾಸ್ ಹೇಳಿದ್ದಾರೆ.
ದೈವೀ ಅನುಗ್ರಹದಿಂದಲೇ ಡೊನಾಲ್ಡ್ ಟ್ರಂಪ್ ಜೀವ ಉಳಿದಿದೆ ಎಂದು ರಾಧಾರಮಣ ದಾಸ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗುಂಡಿನ ದಾಳಿ ನಡೆದ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಧಾರಮಣ ದಾಸ್, 48 ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಜಗನ್ನಾಥ ರಥಯಾತ್ರೆಯನ್ನು ಉಳಿಸಿದ್ದರು. ಇಂದು ಇಡೀ ಜಗತ್ತು ಜಗನ್ನಾಥ ರಥಯಾತ್ರೆಯನ್ನು ಆಚರಣೆ ಮಾಡುತ್ತಿದೆ.
ಡೊನಾಲ್ಡ್ ಟ್ರಂಪ್ ಅವರನ್ನು ಗುಂಡಿನ ದಾಳಿಯಿಂದ ಜಗನ್ನಾಥ ಸ್ವಾಮಿ ಉಳಿಸಿದ್ದಾರೆ. ಈ ಮೂಲಕ ಜಗನ್ನಾಥ ಸ್ವಾಮಿ ತಮ್ಮ ಋಣವನ್ನು ತೀರಿಸಿದ್ದಾರೆ ಎಂದು ಹೇಳಿದ್ದಾರೆ.
1976ರಲ್ಲಿ ರಥ ನಿರ್ಮಾಣಕ್ಕಾಗಿ ತಮ್ಮ ಟ್ರೈನ್ ಯಾರ್ಡ್ (ಮೈದಾನ) ಬಿಟ್ಟುಕೊಟ್ಟು ರಥಯಾತ್ರೆ ಆಯೋಜನೆ ಮಾಡಲು ಇಸ್ಕಾನ್ ಭಕ್ತರಿಗೆ ಸಹಾಯ ಮಾಡಿದ್ದರು. ಈ ಬಗ್ಗೆ ಅರ್ಚಕರು ಮಾಹಿತಿ ನೀಡಿದ್ದಾರೆ.
ಇಂದು ಜಗತ್ತು 9ನೇ ದಿನದ ಜಗನ್ನಾಥ ರಥಯಾತ್ರೆ ಆಚರಿಸುತ್ತಿದೆ. ಇದೇ ದಿನದಂದು ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ನಡೆದಿದೆ. ಜಗನ್ನಾಥ ಸ್ವಾಮಿಯ ಕೃಪೆಯಿಂದಾಗಿ ಟ್ರಂಪ್ ಜೀವ ಉಳಿದಿದೆ.
1976ರಲ್ಲಿ ಮೊದಲ ಬಾರಿಗೆ ಅಮೆರಿಕದ ರಸ್ತೆಯಲ್ಲಿ ಜಗನ್ನಾಥ ರಥಯಾತ್ರೆ ನಡೆದಿತ್ತು. ಅಂದು 30 ವರ್ಷದ ಡೊನಾಲ್ಡ್ ಟ್ರಂಪ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ರಥ ನಿರ್ಮಾಣಕ್ಕಾಗಿ ಡೊನಾಲ್ಡ್ ಟ್ರಂಪ್ ಮೈದಾನ ನೀಡುವ ಮೂಲಕ ಸಹಾಯ ಮಾಡಿದ್ದರು ಎಂದು ರಾಧಾರಮಣ ದಾಸ್ ಹೇಳುತ್ತಾರೆ.
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮೇಲೆ ಗುಂಡಿನ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಕಿವಿ ಭಾಗಕ್ಕೆ ಗುಂಡು ತಗುಲಿದ್ದು, ರಕ್ತದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸಾರ್ವಜನಿಕ ಸಭೆಯಲ್ಲಿಯೇ ಗುಂಡಿನ ದಾಳಿ ನಡೆದಿರೋದು ಆತಂಕಕ್ಕೆ ಕಾರಣವಾಗಿದೆ.
ಚುನಾವಣೆ ಹಿನ್ನೆಲೆ ಪೆನ್ಸಿಲ್ವೇನಿಯಾದಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ.
ಡೊನಾಲ್ಡ್ ಟ್ರಂಪ್ ಪಕ್ಕದಿಂದಲೇ ಗುಂಡು ಹಾದು ಹೋಗಿರುವ ಫೋಟೋ ಹೊರ ಬಂದಿದೆ. ಆ ಕ್ಷಣದಲ್ಲಿ ಡೊನಾಲ್ಡ್ ಟ್ರಂಪ್ ಕೊಂಚ ತಿರುಗಿದ್ರೂ ಗುಂಡು ತಲೆ ಭಾಗಕ್ಕೆ ತಗುಲುತ್ತಿತ್ತು. ಕೂದಲೆಳೆ ಅಂತರದಿಂದ ಡೊನಾಲ್ಡ್ ಟ್ರಂಪ್ ಪ್ರಾಣ ಉಳಿದಿದೆ.
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೆ ಅಮೆರಿಕದ ಸೀಕ್ರೆಟ್ ಸರ್ವಿಸ್ ಸ್ನೈಪರ್ ಪಡೆ ಪ್ರತಿದಾಳಿ ನಡೆಸಿದೆ.
ಶಂಕಿತ ಬಂದೂಕುಧಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ಮಾಹಿತಿ ನೀಡಿದೆ. ಈ ಘಟನೆ ಸಂಬಂಧ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತನಿಖೆ ನಡೆಸುತ್ತಿದೆ.
https://x.com/RadharamnDas/status/1812320807839846608?t=YlZPVS321pGqsVzqSMcNxg&s=19
ಲವ್ ದೋಖಾ… ನಟ ರಾಜ್ ತರುಣ್ ಪ್ರೇಯಸಿ ಲಾವಣ್ಯ ಆತ್ಮಹತ್ಯೆ ಹೈಡ್ರಾಮಾ, ನಟನ ವಿರುದ್ಧ ವಂಚನೆ ದೂರು
ತಿರುಪತಿಯಲ್ಲಿ ಮರದ ಕೊಂಬೆ ಬಿದ್ದು ಬೆಂಗಳೂರಿನ ಮಹಿಳೆಗೆ ಗಾಯ, ಆಸ್ಪತ್ರೆಗೆ ದಾಖಲು, ವಿಡಿಯೊ ನೋಡಿ
ದಿನ ಭವಿಷ್ಯ 14-07-2024 … ಮೇಷ- ದಿಢೀರ್ ಧನ ಲಾಭ, ಮೀನ- ಉದ್ಯೋಗದಲ್ಲಿ ಬಡ್ತಿ, ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ?
ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ‘ನಥಿಂಗ್’… ಮೂರೇ ಗಂಟೆಯಲ್ಲಿ ಒಂದು ಲಕ್ಷ ಮೊಬೈಲ್ ಮಾರಾಟ!