newsics.com
ಪ್ರಿಯಾಂಕಾ ಚೋಪ್ರಾ ತಮ್ಮ ನಟನೆಯಿಂದ ಸಿನಿಮಾ ಕ್ಷೇತ್ರದಲ್ಲಿ ಹೊಸ ಸ್ಥಾನವನ್ನು ಸೃಷ್ಟಿಸಿಕೊಂಡವರು. ಆದರೂ ಕೆಲವೊಮ್ಮೆ ಕೆಲವೊಂದು ಮಾತುಗಳು ವಿವಾದ ಸೃಷ್ಟಿಸಿಬಿಡುತ್ತವೆ. ಇದೀಗ ಅವರು ಕನ್ಯತ್ವದ ಬಗ್ಗೆ ಮಾತನಾಡಿ, ವಿವಾದ ಸೃಷ್ಟಿಸಿಕೊಂಡಿದ್ದಾರೆ.
‘ಕನ್ಯತ್ವ’ ಒಂದು ರಾತ್ರಿಯ ಆಸ್ತಿ. ಆದ್ದರಿಂದ ತಮಗೆ ಕನ್ಯೆಯೇ ಬೇಕು ಎನ್ನುವುದು ಸರಿಯಲ್ಲ. ಅದರ ಬದಲು ಉತ್ತಮ ನಡವಳಿಕೆ ಮಾತ್ರ ಜೀವನಕ್ಕೆ ಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು.
ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಪ್ರಿಯಾಂಕಾ ಅವರ ಗಮನಕ್ಕೆ ಬಂದಿದ್ದು, ಸುದ್ದಿಯ ಸ್ಕ್ರೀನ್ಶಾಟ್ ಅನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ನಟಿ ಪ್ರಿಯಾಂಕಾ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಮಾತನ್ನು ನಾನು ಹೇಳಿಲ್ಲ. ಇದು ನನ್ನ ಧ್ವನಿಯಲ್ಲ. ಇದನ್ನು ನಂಬಬಾರದು. ಇಂಥ ಹೇಳಿಕೆಯನ್ನು ನಾನು ಕೊಟ್ಟಿಲ್ಲ. ವಿನಾಕಾರಣ ನನ್ನ ಹೆಸರನ್ನು ಎಳೆದುತರಲಾಗಿದೆ ಎಂದಿದ್ದಾರೆ ಪ್ರಿಯಾಂಕಾ.