newsics.com
ಹನಿಮೂನ್ ನೆಪದಲ್ಲಿ ಗಂಡನನ್ನು ಕರೆದೊಯ್ದು ಹೆಂಡತಿ ತನ್ನ ಪ್ರಿಯಕರನ ಕೈಯಲ್ಲೇ ಆತನನ್ನು ಹತ್ಯೆ ಮಾಡಿಸಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲ್ನಲ್ಲಿ ವ್ಯಕ್ತಿಯೊಬ್ಬ ಮದುವೆಯಾದ ಒಂದು ತಿಂಗಳ ನಂತರ ಶವವಾಗಿ ಪತ್ತೆಯಾಗಿದ್ದ.
ಮೇ 18 ರಂದು ಮದುವೆಯಾದ ಒಂದು ತಿಂಗಳ ನಂತರ, ಜೂನ್ 17 ರಂದು 32 ವರ್ಷದ ತೇಜೇಶ್ವರ್ ನಾಪತ್ತೆಯಾಗಿದ್ದರು. ಅವರ ಮೃತದೇಹ ಈಗ ಕಾಲುವೆಯಲ್ಲಿ ಪತ್ತೆಯಾಗಿದೆ.
ಮೃತ ತೇಜೇಶ್ವರ್ ಅವರು ಖಾಸಗಿ ಸರ್ವೇ ಅಧಿಕಾರಿ ಮತ್ತು ನೃತ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.ತೇಜೇಶ್ವರ್ ಅವರ ಕುಟುಂಬವು ಅವರ ಪತ್ನಿ ಈಶ್ವರ್ಯ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪಿಸಿದ್ದು, ಆಕೆಯೇ ನಮ್ಮ ಮಗನನ್ನು ಕೊಂದಿದ್ದಾಳೆ ಎಂದು ಆರೋಪಿಸಿದ್ದಾರೆ.
ತೇಜೇಶ್ವರ್ ಅವರ ಕುಟುಂಬದವರ ಪ್ರಕಾರ, ಈಶ್ವರ್ಯ ಅವರ ತಾಯಿ ಸುಜಾತಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾರೆ. ಈಶ್ವರ್ಯ ಬ್ಯಾಂಕ್ ಉದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದರು ಅವರು ಆರೋಪ ಮಾಡಿದ್ದಾರೆ. ಆದರೂ ತೇಜೇಶ್ವರ್ ಜೊತೆ ಪ್ರೀತಿ ಪ್ರೇಮದ ನಾಟಕವಾಡಿದ್ದಾಳೆ. ನಂತರ ಇಬ್ಬರ ಒಪ್ಪಿಗೆಯೊಂದಿಗೆ ಮದುವೆಯಾಗಿದೆ.
ಫೆಬ್ರವರಿಯಲ್ಲಿ ಮದುವೆ ನಿಗದಿಯಾಗಿತ್ತು, ಆದರೆ ಈಶ್ವರ್ಯ ಕಾಣೆಯಾದ ನಂತರ ಅದನ್ನು ಮುಂದೂಡಬೇಕಾಯಿತು. ನಂತರ ಅವರು ಹಿಂತಿರುಗಿ ತೇಜೇಶ್ವರ್ ಜೊತೆ ಮತ್ತೆ ಪ್ರೀತಿ ಪ್ರೇಮದ ನಾಟಕವಾಡಿದ್ದಳು. ತೇಜೇಶ್ವರ್ ಅವರ ಕುಟುಂಬ ಸದಸ್ಯರು ಈಶ್ವರ್ಯ ಅವರನ್ನು ಮದುವೆಯಾಗದಂತೆ ಎಚ್ಚರಿಸಿದ್ದರು. ಆದರೂ ಆತ ಆಕೆಯನ್ನೇ ಮದುವೆಯಾಗಿದ್ದ. ಇದೀಗ ಆಕೆಯೇ ಆತನನ್ನು ಕೊಲೆ ಮಾಡಿದ್ದಳೆ ಎಂದು ತೇಜೇಶ್ವರ್ ಕುಟುಂಬಸ್ಥರು ಆರೋಪಿಸಿದ್ದಾರೆ.