newsics.com
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ನಿಧನರಾಗಿ ಒಂದು ವಾರವಾಗುತ್ತಿದೆ. 33 ವರ್ಷದ ರಾಕೇಶ್ ಪೂಜಾರಿ ಹಠಾತ್ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದು ಅವರ ಆಪ್ತರಿಗೆ ಆಘಾತ ನೀಡಿದೆ. ಅದರಿಂದ ಅವರಿನ್ನೂ ಹೊರಬಂದಿಲ್ಲ.
ಇನ್ನು, ರಾಕೇಶ್ ಪೂಜಾರಿ ಅವರಿಗೆ ಮದುವೆ ಕುರಿತು ಒಂದು ಭಯ ಇತ್ತು. ಆ ಕುರಿತು ಅವರ ಆಪ್ತ ಸ್ನೇಹಿತ ಪ್ರವೀಣ್ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಕೇಶನಿಗೆ ಮದುವೆ ಅಂದ್ರೆ ಒಂದು ಭಯ ಇತ್ತು. ನಾನು ಮದುವೆಯಾದ್ರೆ ತಾಯಿಯಿಂದ ದೂರ ಆಗಿಬಿಡ್ತಿನೇನೋ ಅಂತ ಭಯಪಡ್ತಿದ್ದ. ‘ಎಲ್ರೂ ಹಂಗಿರಲ್ಲ’ ಎಂದು ಹೇಳಿದರೂ ಅವನು ಕೇಳ್ತಾ ಇರಲಿಲ್ಲ. ‘ಇವಾಗ ನಾವು ಚೆನ್ನಾಗಿದ್ದೇವೆ, ಮದುವೆ ಆದಮೇಲೆ ಆ ರೀತಿ ಆಗಿಬಿಟ್ಟರೇ ಹೇಗೆ’ ಎಂದು ಕೇಳ್ತಿದ್ದ” ಎಂದು ಪ್ರವೀಣ್ ಜೈನ್ ಹೇಳಿಕೊಂಡಿದ್ದಾರೆ.
ರಾಕೇಶ ಹುಡುಗಿಯರಿಂದ ಅಣ್ಣ ಅಣ್ಣ ಎಂದೇ ಕರೆಸಿಕೊಳ್ಳುತ್ತಿದ್ದ. ಅವನ ಅಂತ್ಯಕ್ರಿಯೆ ವೇಳೆಯೂ ಸಾಕಷ್ಟು ಹುಡುಗಿಯರು ಬಂದಿದ್ದರು. ಅವರೆಲ್ಲಾ ತುಂಬ ಅಳ್ತಾ ಇದ್ರು. ಯಾರಿವರೆಲ್ಲಾ ಅಂದ್ರೆ, ಅವರೆಲ್ಲಾ ಇವನನ್ನು ಅಣ್ಣ ಅಣ್ಣ ಅಂತ ತುಂಬಾ ಹಚ್ಚಿಕೊಂಡವರು. ಇನ್ನು, ಅವನಿಗೆ ಲವ್ ಅಂದ್ರೆ ಆಗಲ್ಲ ಅಂತೇನಿರಲಿಲ್ಲ. ಆದರೂ ಮದುವೆ ಅಂದ್ರೆ ಬೇಡ ಬೇಡ ಅಂತಾನೇ ಹೇಳ್ತಿದ್ದ. ಅದು ಅಮ್ಮನಿಗಾಗಿ ಅಷ್ಟೇ ಎಂದು ಪ್ರವೀಣ್ ತಿಳಿಸಿದ್ದಾರೆ.
ನಾನು ನಿಮ್ಮಷ್ಟು ಪೇಮೆಂಟ್ ತೆಗೆದುಕೊಳ್ಳುವುದಿಲ್ಲ. ಇನ್ನೂ ಜಾಸ್ತಿ ತೆಗೆದುಕೊಳ್ಳುತ್ತೇನೆ. ಅದು ಧಿಮಾಕಲ್ಲ. ನನಗಿಷ್ಟು ವ್ಯಾಲ್ಯೂ ಇದೆ. ನನಗೆ ಇಷ್ಟು ಪೇಮೆಂಟ್ ಬೇಕು ಎಂಬುದು ಆತನ ಯೋಚನೆ ಆಗಿತ್ತು. ಅವನು ಇದನ್ನೆಲ್ಲಾ ನಮ್ಮ ಬಳಿ ತಮಾಷೆಯಿಂದಲೇ ಹೇಳುತ್ತಿದ್ದ. ಆದರೆ ಅದು ನಿಜ. ಅವನು ನಮ್ಮ ಜತೆಗೆ ಇದ್ದಾನೆ. ಆದರೆ ಅವನು ಇಲ್ಲ ಅನ್ನೋದು ಬೇಜಾರು ಆಗುತ್ತದೆ. ಅವನು ತುಂಬಾ ಎಂಜಾಯ್ ಮಾಡುತ್ತಿದ್ದ ಎಂದಿದ್ದಾರೆ ಪ್ರವೀಣ್ ಜೈನ್.
ಮನುಷ್ಯ ಅಂದಮೇಲೆ ಎಲ್ಲರಿಂದ ಎಂಜಾಯ್ಮೆಂಟ್ ಇದ್ದೇ ಇರುತ್ತದೆ. ಹಾಗಂತ, ಅದೇ ವಿಷಯದಿಂದ ಹೀಗೆ ಆಗುತ್ತದೆ ಎನ್ನುವುದು ತಪ್ಪು. ತುಂಬಾ ಜನ ಲೈಫ್ ಲಾಂಗ್ ಪಾರ್ಟಿ ಮಾಡಿದವರೇ, ಮದ್ಯ ಸೇವನೆ, ಸಿಗರೇಟ್ ಸೇವನೆ ಮಾಡಿದವರೇ ನೂರು ವರ್ಷ ಬದುಕ್ತಾ ಇದ್ದಾರೆ. ಆದರೆ ಇವನ ಲೈಫ್ನಲ್ಲಿ ಹಿಂಗೆ ಬರೆದಿತ್ತು, ಆಗಿದೆ ಅಷ್ಟೇ ಎಂದು ಪ್ರವೀಣ್ ಜೈನ್ ಹೇಳಿಕೊಂಡಿದ್ದಾರೆ.
ರಾಕೇಶ್ಗೆ ತಂಗಿ ಮದುವೆ ಮಾಡಬೇಕು ಎಂಬ ಆಸೆ ಬಹಳ ಇತ್ತು. ತನ್ನ ಮದುವೆ ಆಗಿಲ್ಲದಿದ್ದರೂ ತಂಗಿ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂಬ ಕನಸು ಕಂಡಿದ್ದರು. ಅಲ್ಲದೆ, ರಿಷಬ್ ಶೆಟ್ಟಿ ಅವರ ‘ಕಾಂತಾರ: ಅಧ್ಯಾಯ 1’ ಸಿನಿಮಾದಲ್ಲೂ ರಾಕೇಶ್ ನಟಿಸುತ್ತಿದ್ದರು.
FIR against BJP leader ಸುಹಾಸ್ ಶೆಟ್ಟಿ ಹತ್ಯೆ ಕೇಸ್ ಬಗ್ಗೆ ಪ್ರಶ್ನಿಸಿದ ಬಿಜೆಪಿ ನಾಯಕಿ ವಿರುದ್ಧ FIR
Senior RSS activist Vamana Rao is no more ಆರ್ಎಸ್ಎಸ್ ಹಿರಿಯ ಕಾರ್ಯಕರ್ತ ವಾಮನ ರಾವ್ ಇನ್ನಿಲ್ಲ