newsics.com
ಕಣ್ಣೂರು(ಕೇರಳ): ತೂಕ ಇಳಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಫಾಲೋ ಮಾಡ್ತಿದ್ದ ಹುಡುಗಿಯೊಬ್ಬಳು ಜೀವ ಕಳೆದುಕೊಂಡಿದ್ದಾಳೆ.
ಈ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಮಟ್ಟನೂರಿನ ಪಳಸ್ಸಿ ರಾಜ ಎನ್ಎಸ್ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಪೂರ್ವ ವಿದ್ಯಾರ್ಥಿನಿ ಎಂ. ಶ್ರೀನಂದಾ ಡಯಟ್ನಿಂದ ಸಾವನ್ನಪ್ಪಿದ್ದಾಳೆ.
ತೂಕ ಇಳಿಸಿಕೊಳ್ಳಲು ಶ್ರೀನಂದಾ ನಿರಂತರ ಪ್ರಯತ್ನ ನಡೆಸುತ್ತಿದ್ದರು. ತನ್ನ ತೂಕ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ 18ರ ಶ್ರೀನಂದಾ ಊಟ ಕೂಡ ಬಿಟ್ಟಿದ್ದರು. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಂದಾ ಸಾವನ್ನಪ್ಪಿದ್ದಾರೆ. ಶ್ರೀನಂದಾಗೆ ತೂಕ ಹೆಚ್ಚಾಗುವ ಭಯ ಇತ್ತು. ಯುಟ್ಯೂಬ್ ವಿಡಿಯೋವನ್ನು ಫಾಲೋ ಮಾಡಿ, ಡಯಟ್ ಮಾಡ್ತಿದ್ದರು. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಯಾಮ ಮಾಡುತ್ತಿದ್ದರು. ತೂಕ ಹೆಚ್ಚಾಗುವ ಭಯದಲ್ಲಿ ಘನ ಆಹಾರವನ್ನು ಬಿಟ್ಟಿದ್ದರು. ಲಿಕ್ವಿಡ್ ಆಹಾರವನ್ನು ಮಾತ್ರ ಸೇವನೆ ಮಾಡ್ತಿದ್ದ ಶ್ರೀನಂದಾ, ಹಸಿವಿನಿಂದಲೇ ಉಸಿರು ಚೆಲ್ಲಿದ್ದಾಳೆ.
ಹಲವು ದಿನಗಳ ಹಿಂದೆಯೇ ಶ್ರೀನಂದಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಶ್ರೀನಂದಾ ಚಿಕಿತ್ಸೆ ಪಡೆಯುತ್ತಿದ್ದರು.
ಶ್ರೀನಂದಾ ಅನೋರೆಕ್ಸಿಯಾ ನರ್ವೋಸಾ (anorexia nervosa)ದಿಂದ ಬಳಲುತ್ತಿದ್ದರು ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ನಾಗೇಶ್ ಪ್ರಭು ಹೇಳಿದ್ದಾರೆ. ಇದು ತೂಕ ಹೆಚ್ಚಾಗುವ ತೀವ್ರ ಭಯದಿಂದ ಉಂಟಾಗುವ ಅಸ್ವಸ್ಥತೆಯಾಗಿದೆ. ಶ್ರೀನಂದಾ ಸುಮಾರು ಆರು ತಿಂಗಳ ಹಿಂದೆ ಯುಟ್ಯೂಬ್ ನೋಡಿ ಈ ಡಯಟ್ ಶುರು ಮಾಡಿದ್ದರು. ಶ್ರೀನಂದಾಗೆ ಮೊದಲೇ ಚಿಕಿತ್ಸೆ ನೀಡುವಂತೆ ಕುಟುಂಬಸ್ಥರಿಗೆ ಆಪ್ತರು ಸಲಹೆ ನೀಡಿದ್ದರು. ಆದ್ರೆ ಕುಟುಂಬಸ್ಥರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಅನೋರೆಕ್ಸಿಯಾ ನರ್ವೋಸಾ ಪ್ರಚಲಿತವಾಗಿದೆ. ಅದ್ರೆ ಕೇರಳದಲ್ಲಿ ಇದು ಅಪರೂಪ ಎಂದು ವೈದ್ಯರು ಹೇಳಿದ್ದಾರೆ.
ಏನಿದು ಅನೋರೆಕ್ಸಿಯಾ ನರ್ವೋಸಾ:
ಅನೋರೆಕ್ಸಿಯಾ ನರ್ವೋಸಾ ತಿನ್ನುವ ಅಸ್ವಸ್ಥತೆಯಾಗಿದೆ. ಅನೋರೆಕ್ಸಿಯಾ ಇರುವ ಜನರು ತಮ್ಮ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ತಮ್ಮ ತೂಕವನ್ನು ಸಾಮಾನ್ಯವಾಗಿ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಿಸಿಕೊಳ್ಳಲು ಹೆಣಗಾಡುತ್ತಾರೆ. ಅನೋರೆಕ್ಸಿಯಾ ಸಮಸ್ಯೆ ಹೆಚ್ಚಾಗಿ ಹದಿಹರೆಯದಲ್ಲಿ ಶುರುವಾಗುತ್ತದೆ. ಇದು ಹೆಚ್ಚಾಗಿ ಪ್ರೌಢಾವಸ್ಥೆಯವರೆಗೂ ಮುಂದುವರಿಯುತ್ತದೆ.
ಅನೋರೆಕ್ಸಿಯಾ ಇರುವ ಜನರು ಹೆಚ್ಚಾಗಿ ತೂಕ ಹೆಚ್ಚಾಗುವ ತೀವ್ರ ಭಯವನ್ನು ಅನುಭವಿಸುತ್ತಾರೆ. ತೂಕ ಹೆಚ್ಚಾಗುವುದನ್ನು ತಡೆಯಲು ಹಲವು ಚಟುವಟಿಕೆಗಳನ್ನು ಮಾಡುತ್ತಾರೆ. ದೇಹದ ತೂಕ ಕಡಿಮೆಯಾಗುವುದು ಎಷ್ಟು ಗಂಭೀರ ಎಂಬುದನ್ನು ಅವರು ಪರಿಗಣಿಸುವುದಿಲ್ಲ. ತೂಕ ಇಳಿಸಿಕೊಳ್ಳಲು, ಅನೋರೆಕ್ಸಿಯಾ ಪೀಡಿತ ಜನರು ಆಹಾರವನ್ನು ನಿರ್ಬಂಧಿಸುತ್ತಾರೆ. ಹೆಚ್ಚು ವ್ಯಾಯಾಮ ಮಾಡುತ್ತಾರೆ. ಇದು ಮಾನಸಿಕ ಅಸ್ವಸ್ಥತೆಯಾಗಿದೆ. ಅನೋರೆಕ್ಸಿಯಾಕ್ಕೆ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದರೆ ಜೀವಕ್ಕೆ ಹಾನಿ ನಿಶ್ಚಿತ.
Supreme Court judgement ಅತ್ಯಾಚಾರ ದೃಢಪಡಿಸಲು ಖಾಸಗಿ ಭಾಗದ ಗಾಯದ ಗುರುತು ಅಗತ್ಯವಿಲ್ಲ: ಸುಪ್ರೀಂ