newsics.com
ಕೊಳ್ಳೇಗಾಲ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ, ಗರ್ಭಪಾತ ಮಾಡಿಸಿದ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ.
ಪ್ರಿಯಕರ ಸೇರಿ ಆತನ ತಂದೆ ಹಾಗೂ ತಾಯಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೊಂದ ಯುವತಿ ದೂರುನೀಡಿದ್ದಾರೆ.
ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ರೋಹಿಣಿ (30) ವಂಚನೆಗೊಳಗಾದ ಯುವತಿ ಎಂದು ತಿಳಿದು ಬಂದಿದೆ.
ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮದ ಸಿದ್ದಪ್ಪಾಜಿ ಅಲಿಯಾಸ್ ಶಿವು ಯುವತಿಯನ್ನು ಮದುವೆಯಾಗುವುದಾಗಿ ವಂಚಿಸಿರುವ ಆರೋಪಿ. ಈತನ ವಂಚನೆ ಕುರಿತು ಯುವತಿ ಪೋಷಕರ ಬಳಿ ಹೇಳಿಕೊಂಡರು ಸಹಾ ಯುವಕನ ಕೃತ್ಯಕ್ಕೆ ಸಾಥ್ ನೀಡಿದ್ದು ಅಲ್ಲದೆ ತನ್ನನ್ನು ಗರ್ಭಪಾತಕ್ಕೆ ದೂಡಿದ ಸಿದ್ದಪ್ಪಾಜಿ ತಂದೆ ದೊಡ್ಡಸಿದ್ದಯ್ಯ, ತಾಯಿ ಲಕ್ಷ್ಮಿ ವಿರುದ್ಧವೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ರೋಹಿಣಿ ಬೆಂಗಳೂರಿನ ಆರ್.ಆರ್.ನಗರದಲ್ಲಿ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಆರೋಪಿ ಸಿದ್ದಪ್ಪಾಜಿ ಮತ್ತು ರೋಹಿಣಿ ನಡುವೆ ಪ್ರೇಮಾಂಕುರವಾಗಿತ್ತು. ನಮ್ಮಿಬ್ಬರ ಪ್ರೀತಿ, ಸಲುಗೆ ಹಿನ್ನೆಲೆ ಬೈಕ್ ಖರೀದಿಗಾಗಿ, ಲ್ಯಾಪ್ ಟ್ಯಾಪ್ ಕೊಳ್ಳಲು ಮತ್ತು ಜಮೀನಿನಲ್ಲಿ ಕೊಳವೆಬಾವಿ ಅಳವಡಿಕೆಗಾಗಿ ₹4.50ಲಕ್ಷ ನೀಡಲಾಗಿತ್ತು ಎಂದು ಯುವತಿ ವಿವರಿಸಿದ್ದಾರೆ. ಯುವತಿ ನೀಡಿದ ದೂರಿನ ಹಿನ್ನೆಲೆ ಪಿಎಸ್ಸೈ ವರ್ಷ ಕ್ರಮಕೈಗೊಂಡಿದ್ದಾರೆ.