newsics.com
ಮುಂಬೈ : ಮಹಾಕುಂಭಮೇಳದಲ್ಲಿ ಪಾದಚಾರಿ ಮಾರ್ಗದಲ್ಲಿ ಕುಳಿತು ರುದ್ರಾಕ್ಷಗಳನ್ನು ಮಾರುವ ಸುಂದರ ಯುವತಿ ಮೊನಾಲಿಸಾ ಭೋಸಲೆ ರಾತ್ರೋರಾತ್ರಿ ಪ್ರಸಿದ್ಧಿಯಾಗಿದ್ದಾಳೆ. ನಿರ್ದೇಶಕ ಸನೋಜ್ ಮಿಶ್ರಾ ಅವರ ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಮಧ್ಯೆ ನಿರ್ಮಾಪಕ ಜಿತೇಂದ್ರ ನಾರಾಯಣ್ ಅವರು ಸನೋಜ್ ಅವರು ಮೊನಾಲಿಸಾ ಅವರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸನೋಜ್ ಮೇಲೆ ಮೊನಾಲಿಸಾಗೆ ಮೋಸ ಮಾಡಿದ ಆರೋಪವಿದೆ. ನಿರ್ಮಾಪಕ ಜಿತೇಂದ್ರ ನಾರಾಯಣ್ ಅವರು ಸನೋಜ್ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ.
ಜಿತೇಂದ್ರ ನಾರಾಯಣ್ ಸಿಂಗ್ ಅಲಿಯಾಸ್ ವಾಸಿಮ್ ರಿಜ್ವಿ ಇತ್ತೀಚೆಗೆ ಟಾಪ್ ಸೀಕ್ರೆಟ್ಗೆ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ, ಸನೋಜ್ ಬಡ ಕುಟುಂಬದ ಹುಡುಗಿಯೊಬ್ಬಳನ್ನು ಬಳಸಿಕೊಳ್ಳುತ್ತಿದ್ದಾರೆ.. ಆತ ಆ ಮುಗ್ಧ ಹುಡುಗಿಯರನ್ನು ಸಿನಿಮಾಗಳಲ್ಲಿ ಕೆಲಸ ಮಾಡುವಂತೆ ಆಮಿಷ ಒಡ್ಡಿ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ ಎಂದು ಜಿತೇಂದ್ರ ಹೇಳಿದ್ದಾರೆ.. ನನಗೆ ಸನೋಜ್ ಜೊತೆ ಕೆಲಸ ಮಾಡುವಾಗ ತುಂಬಾ ಕೆಟ್ಟ ಅನುಭವ ಆಗಿತ್ತು.. ಸನೋಜ್ ನಾನು ಮೂರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ.. ಎಂದು ಹೇಳಿಕೊಂಡಿದ್ದಾರೆ..
ಮೊನಾಲಿಸಾ ಮತ್ತು ಅವರ ಕುಟುಂಬದ ಬಗ್ಗೆ ನನಗೆ ತುಂಬಾ ವಿಷಾದವಿದೆ.” ಅವರು ತುಂಬಾ ಸರಳ ಮತ್ತು ನೇರ ಜನರು. ಆದರೆ ಸನೋಜ್ ಮಿಶ್ರಾ ಅವರಂತಹ ಜನರು ನಿಮ್ಮ ಬಾಗಿಲಲ್ಲಿ ನಿಂತು ಕರೆದರೇ ಯಾವುದೇ ಪ್ರಶ್ನೆ ಮಾಡದೆ, ಅವರು ತಮ್ಮ ಮಗಳನ್ನು ಸನೋಜ್ಗೆ ಒಪ್ಪಿಸಿದ್ದಾರೆ.. ಇದೇ ವಿಚಿತ್ರ ಎಂದು ಜಿತೇಂದ್ರ ಹೇಳಿದ್ದಾರೆ.. ಈ ಸಂದರ್ಶನದಲ್ಲಿ, ಜಿತೇಂದ್ರ ಅವರು ಪ್ರಸ್ತುತ ಯಾರೂ ಸನೋಜ್ ಅವರೊಂದಿಗೆ ಕೆಲಸ ಮಾಡಲು ಸಿದ್ಧರಿಲ್ಲ ಎಂದು ಹೇಳಿಕೊಂಡಿದ್ದಾರೆ.