newsics.com
ಬಿಗ್ ಬಾಸ್ ವಿಜೇತನಾಗಿ ಹೊರಹೊಮ್ಮಿದ ಹನುಮಂತ ಲಮಾಣಿ, ಐದು ಕೋಟಿಗೂ ಅಧಿಕ ವೋಟ್ ಪಡೆದು ಅಮೋಘ ಗೆಲುವು ದಾಖಲಿಸಿಕೊಂಡಿದ್ದಾರೆ. ಆದರೆ, ಈ ಸಂಭ್ರಮದ ನಡುವೆಯೇ ಕುಟುಂಬದ ಆಪ್ತರೊಬ್ಬರನ್ನು ಹನುಮಂತ ಕಳೆದುಕೊಂಡಿದ್ದಾರೆ .
ಭಾನುವಾರ (ಜ. 26) ಬಿಗ್ ಬಾಸ್ ಫಿನಾಲೆಯಲ್ಲಿ ಕಿಚ್ಚ ಸುದೀಪ್, ಹನುಮಂತು ಅವರ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿಯೂ ಅಪಾರ ಖ್ಯಾತಿ ಪಡೆದ ಹನುಮಂತಗೆ ಎಲ್ಲರೂ ಶುಭಾಶಯ ರವಾನಿಸಿದ್ದರು. ಇತ್ತ ಕಪ್ ಜತೆಗೆ ಊರು ತಲುಪಿದ್ದ ಹನುಮಂತು, ಎಲ್ಲರ ಜತೆಗೆ ಸಂಭ್ರಮಿಸಬೇಕು ಎಂದುಕೊಂಡಿದ್ದರು. ಆದರೆ, ಹಠಾತ್ ಬೆಳವಣಿಗೆಯಲ್ಲಿ ಅವರ ಚಿಕ್ಕಪ್ಪ ನಿಧನರಾಗಿದ್ದಾರೆ.
ಬಿಗ್ ಬಾಸ್ನಲ್ಲಿ ಹನುಮಂತ ಗೆದ್ದ ಬೆನ್ನಲ್ಲೇ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದಲ್ಲಿ ಅವರ ಆಪ್ತರು, ಸ್ನೇಹಿತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ, ಇದೀಗ ಹನುಮಂತು ಅವರ ಚಿಕ್ಕಪ್ಪ, ದೇವಪ್ಪ ಇಂದು (ಜ. 27) ನಿಧನರಾದ ಬೆನ್ನಲ್ಲೇ, ಸಂಭ್ರಮಾಚರಣೆ ಸ್ಥಗಿತಗೊಂಡಿದೆ.