newsics.com
ವಿಜಯನಗರ: ಹೊಸಪೇಟೆಯಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವದ ವೇಳೆ 405 ಅಡಿ ಎತ್ತರದ ತ್ರಿವರ್ಣ ಧ್ವಜ ಕುಸಿದು ಅವಘಡ ಸಂಭವಿಸಿದೆ.
ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಧ್ವಜಾರೋಹಣ ನೆರವೇರಿಸಿದ ಬಳಿಕ ಪಥಸಂಚಲನ ನಡೆಯುತ್ತಿರುವ ವೇಳೆ 405 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜ ತುದಿಗೆ ತಲುಪುತ್ತಿದ್ದಂತೆ ಧ್ವಜದ ಚೈನ್ಲಿಂಕ್ ಕಟ್ ಆಗಿದ್ದರಿಂದ ಧ್ವಜ ಕುಸಿದು ಬಿದ್ದಿದೆ.
ಆದರೆ, ಚಿಕ್ಕ ಧ್ವಜಕ್ಕೆ ಯಾವುದೇ ಧಕ್ಕೆಯಾಗದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಅಡ್ಡಿ, ಆತಂಕವಿಲ್ಲದೇ ಕಾರ್ಯಕ್ರಮ ಮುಂದುವರಿಯಿತು.
ಈ ಕುರಿತು ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್, 405 ಅಡಿ ಧ್ವಜ ಕುಸಿತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
2022ರಲ್ಲಿ ಈ ಧ್ವಜ ಸ್ತಂಭ ಸ್ಥಾಪಿಸಲಾಗಿದ್ದು, ಇದು ದೇಶ ಅತೀ ಎತ್ತರದ ಧ್ವಜ ಸ್ತಂಭ ಎಂಬ ಹಿರಿಮೆ ಪಡೆದಿದೆ.
Shivarajkumar return ಅಮೆರಿಕದಿಂದ ತವರಿಗೆ ಮರಳಿದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ಗೆ ಅದ್ಧೂರಿ ಸ್ವಾಗತ
MEERPET MURDER CASE: ಪತ್ನಿ ದೇಹ ತುಂಡು ಮಾಡಿ ಕುಕ್ಕರ್ನಲ್ಲಿ ಬೇಯಿಸಿದ ಕೇಸ್: ಸ್ಫೋಟಕ ಸಂಗತಿ ಬಯಲು…
ಐವರು ಕ್ರೀಡಾ ಸಾಧಕರಿಗೆ ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿ…Padma awards