newsics.com
ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆಸಿದ ಸಭೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ, ಸಹಕಾರ ಸಚಿವ ಕೆ. ಎನ್. ರಾಜಣ್ಣ ಗೈರಾಗಿದ್ದರು.
ಸಚಿವರ ಗೈರು ಹಾಜರಿ ಬಗ್ಗೆ ಡಿ. ಕೆ. ಶಿವಕುಮಾರ್ ಅವರಿಂದ ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಸಚಿವರ ಗೈರು ಹಾಜರಿಗೆ ರಣದೀಪ್ ಸಿಂಗ್ ಸುರ್ಜೇವಾಲಾ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಕೆಲಸಕ್ಕಿಂತ ಮುಖ್ಯವಾದ ಕಾರ್ಯಕ್ರಮ ಏನಿತ್ತು? ಗೈರಾಗಲು ಅನುಮತಿ ಪಡೆದಿದ್ದಾರೆಯೇ ಎಂದು ಡಿ. ಕೆ. ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದರು.
ಅನುಮತಿ ಪಡೆದಿರುವ ವಿಚಾರ ತಮಗೆ ಗೊತ್ತಿಲ್ಲ. ಆದರೆ ಸಭೆಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲಾಗಿತ್ತು. ಸಭೆಗೆ ಹಾಜರಾಗುವಂತೆ ಎಲ್ಲರಿಗೂ ಸೂಚನೆ ನೀಡಲಾಗಿತ್ತು ಎಂದು ಡಿ. ಕೆ. ಶಿವಕುಮಾರ್ ರಣದೀಪ್ ಸಿಂಗ್ ಸುರ್ಜೇವಾಲಾಗೆ ಮಾಹಿತಿ ಕೊಟ್ಟರು ಎಂದು ವರದಿಯಾಗಿದೆ.
Lakshmi Hebbalkar hospitalised ಕಾರು ಅಪಘಾತ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಾರು, ಆಸ್ಪತ್ರೆಗೆ ದಾಖಲು
Two employees suspended ಕಚೇರಿಯಲ್ಲಿ ತಾಯಿ ಬದಲು ಪುತ್ರನಿಂದಲೇ ಕೆಲಸ: ಇಬ್ಬರು ನೌಕರರು ಅಮಾನತು
Rain Alert Karnataka : ಚಳಿಯ ನಡುವೆ ಇಂದಿನಿಂದ ಈ ಜಿಲ್ಲೆಗಳಲ್ಲಿ ಭಾರೀ ಮಳೆ